ಈ ಬಾರಿ ಸಂಕ್ರಾಂತಿ ಪುರುಷನು ಮೊಂಡ ಎಂಬ ಹೆಸರು ಹೊಂದಿದ್ದು, ಮೈಗೆ ಕೇಸರ ಹಾಗೂ ಲಸಿಕೆಗಳನ್ನು ಧಾರಣ ಮಾಡಿರುತ್ತಾನೆ. ಸಿಂಹವು ವಾಹನವಾಗಿರುತ್ತದೆ. ಇದರಿಂದ ಕೇಸರಿ ಧ್ವಜಕ್ಕೆ ಬೆಲೆ ಏರಲಿದೆ. ಲಸಿಕಾ ಪ್ರಸಂಗಗಳು ಹೆಚ್ಚಲಿವೆ. ಬಕರರಾಶಿಯ ಜನಸಾಮಾನ್ಯರಿಗೆ ವಾಗ್ದಾನ ಫಲ. ಕಮಲೆಯು ಮತದಾರನ ಸಾತಿವ್ರತ್ಯ ಮಣಿಸಿದಲ್ಲಿ ಮಾತ್ರ ಬಾರಾಬಂಗಾಳಿಯ ಕೃಪೆ ಸಾಧ್ಯ. ಹಸ್ತ ಶುದ್ಧಿಯಿದ್ದಲ್ಲಿ ರಾಜಕೀಯ ಉದ್ಯಮಿಗಳಿಗೆ ಶ್ರೇಯಸ್ಸು. ರೈತರಿಗೆ ಎಂದಿನಂತೆ ಅತಂತ್ರ ಸ್ಥಿತಿ.