<p>‘ಬಿಜೆಪಿ ಅನ್ನೂ ಪದದೊಳಗೆ ಜೆ ಅಕ್ಷರ ಎದಕ್ಕ ಐತಿ, ಅದರ ಮಹತ್ವ ಏನು ಅಂತ ಗೊತ್ತೈತೇನ್ ನಿನಗ’ ಬೆಕ್ಕಣ್ಣ ಮುಗುಮ್ಮಾಗಿ ಕೇಳಿತು.</p>.<p>ನಾನು ಪೆಂಗಳಂತೆ ತಲೆ ಅಲ್ಲಾಡಿಸಿದೆ.</p>.<p>‘ಬಿಜೆಪಿ ಪದದ ಮಧ್ಯದಲ್ಲಿ ಜೆ ಅಕ್ಷರ ಐತಿ, ಅಂದರೆ ಬಿಜೆಪಿ ಮತ್ತು ಜೆಡಿಎಸ್ ಅಗತ್ಯವಿದ್ದಾಗ ಪರಸ್ಪರರ ‘ಬಿ’ ಟೀಂ ಆಗಬೌದು ಅಂತ ಅರ್ಥ. ಯೆಡ್ಯೂರಜ್ಜಾರು, ಕುಮಾರಣ್ಣ ಸುತ್ತೀಬಳಸಿ ಅದನ್ನೇ ಹೇಳ್ಯಾರೆ, ಅಷ್ಟೂ ಗೊತ್ತಾಗಂಗಿಲ್ಲೇನ್’ ಎಂದು ನನ್ನ ತಲೆಗೆ ಮೊಟಕಿತು.</p>.<p>‘ಕೈಪಕ್ಷದೋರು ಇಡೀ ರಾಜ್ಯ ಲೂಟಿ ಹೊಡೆಯಾಕೆ ಹತ್ಯಾರ. ಅವರ ಲೂಟಿ ನಿಲ್ಲಿಸಿ, ರಾಜ್ಯ ರಕ್ಷಣೆ ಮಾಡೂ ಘನಂದಾರಿ ಉದ್ದೇಶಕ್ಕೆ ಒಗ್ಗಟ್ಟಾಗತೀವಿ ಅಂತ ಅಂದಾರೆ’.</p>.<p>‘ಅದೇ ಮತ್ತ… ಬರೇ ಕೈಪಕ್ಷದೋರು ಲೂಟಿ ಹೊಡೆದರೆ ಹೆಂಗ? ಲೂಟಿ ಹೊಡೆಯೂ ಹಕ್ಕು ತಮಗೂ ಐತಿ. ಒಬ್ಬೊಬ್ಬರೇ ಲೂಟಿ ಹೊಡಿಯೂಣು ಅಂದ್ರ ಬಹುಮತ ಬಂದಿಲ್ಲ, ಹಿಂಗಾಗಿ ಒಗ್ಗಟ್ಟಾಗಿ ಕುರ್ಚಿ ಏರಿ, ಲೂಟಿ ಹೊಡೆಯೂ ಪ್ಲಾನ್ ಮಾಡ್ಯಾರೆ’.</p>.<p>‘ಇಂಡಿಯಾ ಹೆಸರನ್ನ ಭಾರತ ಅಂತ ಬದಲಿ ಮಾಡ್ತಾರ ಅಂತ ಹೇಳ್ತಿದಾರಲ್ಲ, ಹಂಗೇ ಈ ಎರಡೂ ಪಕ್ಷ ಸೇರಿಸಿ, ಬಿಜೆಡಿಪಿ ಅಂದ್ರ ಭಾರತೀಯ ಜನತಾ ದಳ ಪಕ್ಷ ಅಂತ ಹೊಸ ಹೆಸರು ಇಟ್ಟರೆ ಮತದಾರರಿಗೂ ಗೊಂದಲ ಆಗಂಗಿಲ್ಲ, ತೆನೆಯಕ್ಕನೂ ಸೆಕ್ಯುಲರ್ ಪದದ ಹೊರೆಯನ್ನು ಅತ್ತಾಗೆ ಬಿಸಾಕಿ, ಬಿಡುಬೀಸಾಗಿ ಕಮಲಕ್ಕನ ಜೊತೆ ಸೇರಬೌದು, ಹೌದಿಲ್ಲೋ’ ಎಂದೆ.</p>.<p>‘ಅಪರೂಪಕ್ಕೊಮ್ಮೆ ಮಸ್ತ್ ಐಡಿಯಾ ಹೇಳೀ ನೋಡು. ತೆನೆಯಕ್ಕ ತೆಲಿಮ್ಯಾಗಿನ ರಾಗಿ ಹೊರೆ ಕೆಳಗಿಳಿಸಿ, ಕಮಲದ ಹೂ ಮುಡಕೊಂಡು ಎಷ್ಟು ಚಂದ ಕಾಣಬೌದು’.</p>.<p>‘ಅದೆಲ್ಲ ಇರಲಿ, ಬಿಜೆಪಿ ಇನ್ನೂ ವಿರೋಧ ಪಕ್ಷದ ನಾಯಕನ್ನೇ ಆರಿಸಿಲ್ಲವಲ್ಲ’.</p>.<p>‘ವಿರೋಧ ಪಕ್ಷದ ನಾಯಕ ಎದಕ್ಕ ಬೇಕು? ಇನ್ನು ಸ್ವಲ್ಪೇ ತಿಂಗಳದಾಗೆ ಬಿಜೆಡಿಪಿ ಹೆಂಗಾನ ಮಾಡಿ ಅಧಿಕಾರಕ್ಕೆ ಬರತೈತಿ. ನಮ್ ಕುಮಾರಣ್ಣನೇ ಮುಖ್ಯಮಂತ್ರಿ!’ ಬೆಕ್ಕಣ್ಣ ಕನಸು ಕಾಣತೊಡಗಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಬಿಜೆಪಿ ಅನ್ನೂ ಪದದೊಳಗೆ ಜೆ ಅಕ್ಷರ ಎದಕ್ಕ ಐತಿ, ಅದರ ಮಹತ್ವ ಏನು ಅಂತ ಗೊತ್ತೈತೇನ್ ನಿನಗ’ ಬೆಕ್ಕಣ್ಣ ಮುಗುಮ್ಮಾಗಿ ಕೇಳಿತು.</p>.<p>ನಾನು ಪೆಂಗಳಂತೆ ತಲೆ ಅಲ್ಲಾಡಿಸಿದೆ.</p>.<p>‘ಬಿಜೆಪಿ ಪದದ ಮಧ್ಯದಲ್ಲಿ ಜೆ ಅಕ್ಷರ ಐತಿ, ಅಂದರೆ ಬಿಜೆಪಿ ಮತ್ತು ಜೆಡಿಎಸ್ ಅಗತ್ಯವಿದ್ದಾಗ ಪರಸ್ಪರರ ‘ಬಿ’ ಟೀಂ ಆಗಬೌದು ಅಂತ ಅರ್ಥ. ಯೆಡ್ಯೂರಜ್ಜಾರು, ಕುಮಾರಣ್ಣ ಸುತ್ತೀಬಳಸಿ ಅದನ್ನೇ ಹೇಳ್ಯಾರೆ, ಅಷ್ಟೂ ಗೊತ್ತಾಗಂಗಿಲ್ಲೇನ್’ ಎಂದು ನನ್ನ ತಲೆಗೆ ಮೊಟಕಿತು.</p>.<p>‘ಕೈಪಕ್ಷದೋರು ಇಡೀ ರಾಜ್ಯ ಲೂಟಿ ಹೊಡೆಯಾಕೆ ಹತ್ಯಾರ. ಅವರ ಲೂಟಿ ನಿಲ್ಲಿಸಿ, ರಾಜ್ಯ ರಕ್ಷಣೆ ಮಾಡೂ ಘನಂದಾರಿ ಉದ್ದೇಶಕ್ಕೆ ಒಗ್ಗಟ್ಟಾಗತೀವಿ ಅಂತ ಅಂದಾರೆ’.</p>.<p>‘ಅದೇ ಮತ್ತ… ಬರೇ ಕೈಪಕ್ಷದೋರು ಲೂಟಿ ಹೊಡೆದರೆ ಹೆಂಗ? ಲೂಟಿ ಹೊಡೆಯೂ ಹಕ್ಕು ತಮಗೂ ಐತಿ. ಒಬ್ಬೊಬ್ಬರೇ ಲೂಟಿ ಹೊಡಿಯೂಣು ಅಂದ್ರ ಬಹುಮತ ಬಂದಿಲ್ಲ, ಹಿಂಗಾಗಿ ಒಗ್ಗಟ್ಟಾಗಿ ಕುರ್ಚಿ ಏರಿ, ಲೂಟಿ ಹೊಡೆಯೂ ಪ್ಲಾನ್ ಮಾಡ್ಯಾರೆ’.</p>.<p>‘ಇಂಡಿಯಾ ಹೆಸರನ್ನ ಭಾರತ ಅಂತ ಬದಲಿ ಮಾಡ್ತಾರ ಅಂತ ಹೇಳ್ತಿದಾರಲ್ಲ, ಹಂಗೇ ಈ ಎರಡೂ ಪಕ್ಷ ಸೇರಿಸಿ, ಬಿಜೆಡಿಪಿ ಅಂದ್ರ ಭಾರತೀಯ ಜನತಾ ದಳ ಪಕ್ಷ ಅಂತ ಹೊಸ ಹೆಸರು ಇಟ್ಟರೆ ಮತದಾರರಿಗೂ ಗೊಂದಲ ಆಗಂಗಿಲ್ಲ, ತೆನೆಯಕ್ಕನೂ ಸೆಕ್ಯುಲರ್ ಪದದ ಹೊರೆಯನ್ನು ಅತ್ತಾಗೆ ಬಿಸಾಕಿ, ಬಿಡುಬೀಸಾಗಿ ಕಮಲಕ್ಕನ ಜೊತೆ ಸೇರಬೌದು, ಹೌದಿಲ್ಲೋ’ ಎಂದೆ.</p>.<p>‘ಅಪರೂಪಕ್ಕೊಮ್ಮೆ ಮಸ್ತ್ ಐಡಿಯಾ ಹೇಳೀ ನೋಡು. ತೆನೆಯಕ್ಕ ತೆಲಿಮ್ಯಾಗಿನ ರಾಗಿ ಹೊರೆ ಕೆಳಗಿಳಿಸಿ, ಕಮಲದ ಹೂ ಮುಡಕೊಂಡು ಎಷ್ಟು ಚಂದ ಕಾಣಬೌದು’.</p>.<p>‘ಅದೆಲ್ಲ ಇರಲಿ, ಬಿಜೆಪಿ ಇನ್ನೂ ವಿರೋಧ ಪಕ್ಷದ ನಾಯಕನ್ನೇ ಆರಿಸಿಲ್ಲವಲ್ಲ’.</p>.<p>‘ವಿರೋಧ ಪಕ್ಷದ ನಾಯಕ ಎದಕ್ಕ ಬೇಕು? ಇನ್ನು ಸ್ವಲ್ಪೇ ತಿಂಗಳದಾಗೆ ಬಿಜೆಡಿಪಿ ಹೆಂಗಾನ ಮಾಡಿ ಅಧಿಕಾರಕ್ಕೆ ಬರತೈತಿ. ನಮ್ ಕುಮಾರಣ್ಣನೇ ಮುಖ್ಯಮಂತ್ರಿ!’ ಬೆಕ್ಕಣ್ಣ ಕನಸು ಕಾಣತೊಡಗಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>