ಸಾಮಾನ್ಯ ಜನತೆಗೆ ದುರ್ಭಿಕ್ಷ, ನೀಚ ಬಲ ಅಧಿಕ. ಮಧ್ಯಮ ವರ್ಗಕ್ಕೆ ಸಾಡೇಸಾತಿ ಪ್ರಭಾವದಿಂದ ಐಟಿ, ಜಿಎಸ್ಟಿಗಳು ಹೊರೆ
ಯಾಗಲಿವೆ. ನಾಯಕರ ಮತಗಾನ ನಂಬುವ ಜನತೆಗೆ ರಾಜಕೀಯ ಮಧುಮೇಹ. ಮನಿಸಾಕ್ಷಿ ಮತದಿಂದ ಪ್ರೇತಃಕಾಲ ಆರಂಭ ಸಾಧ್ಯತೆ. ಜಾಲತಾಣಿಗರು ಕ್ರೀಂ ಇಲವೆನ್, ಮಮ್ಮಿ ಸರ್ಕಲ್ ಆಕರ್ಷಣೆಗೆ ಬಲಿಯಾಗದೆ ಅನುಮಾನದ ಚಾಳೀಸನ್ನು ಬಳಸುವುದು ಯೋಗ್ಯ. ಇಲಾಖೆಗಳ ಧೂರ್ತಾಂಡತನ ದರ್ಶನದಿಂದ ಜನ ಕಂಗಾಲು. ರೈತರು ಕಠಿಣ ಪರಿಶ್ರಮದಿಂದ ಉತ್ತಮ ಫಸಲು ಪಡೆದರೂ ಮಧ್ಯವರ್ತಿ ದೇವತೆಗಳ ಪ್ರಭಾವ ತಪ್ಪದು. ಜನಸಾಮಾನ್ಯರು ರಾಜಕಾರಣ ವಟುಗಳ ಕಷ್ಟೋತ್ತರ, ಚೀರ್ತನೆಗಳ ಪ್ರಭಾವಕ್ಕೆ ಬಲಿಯಾಗದಿರಲು ಜೋಡಶೋಪಚಾರ ಮಂತ್ರ ಪಠಿಸುವುದು ಸೂಕ್ತ.