<p>‘ಗಡಿ ಸಮಸ್ಯೆಗಳಿಗೆ ಶಾನುಭೋಗರು ಕಾರಣ ಅಲ್ಲುವಾ? ಪಟೇಲರು ಅಂದವ್ರೆ ಅದ್ಯಕ್ಸರು!’ ಚಂದ್ರು ಕ್ಯಾತೆ ತೆಗೆದ.</p>.<p>‘ಆ ಗಡಿಬಿಡಿ ಬ್ಯಾರೆ. ಇಲ್ಲಿ ನೋಡು, ರಾಜಕೀಯದವುಕ್ಕೆ ಏನು ಮಲ್ಲಾಗರು ಬಂದದೆ! ನರಿ, ನಾಯಿ, ತೋಳ, ಗುಲಾಮ, ಲಡ್ಡುಲಸೆ ಅಂತೆಲ್ಲಾ ಬೀದೀಲಿ ಬುಸುಗುಟ್ಕಂದು ಬೋದಾಡತಾವೆ? ಈ ಖೇಲು ಯಾವತ್ತು ಬಂದ್ ಆದದು?’ ನನ್ನ ಬೇಜಾರು ಹೊರಹಾಕಿದೆ.</p>.<p>‘ನೋಡ್ಲಾ, ಅಮಾಸೆ ಟೇಮಿಗೆ ಹುಚ್ಚು ಕೆದರ್ತದಂತೆ. ಹಂಗೇ ಇವುಕ್ಕೆ ಎಲೆಕ್ಷನ್ ಹತ್ತಿರಕ್ಕೆ ಬಂದಾಗ ನಾಲಗೆ ಕೂಗುಯ್ಯಾಲೆ ಹಾಡ್ತದೆ. ಎಲೆಕ್ಷನ್ ಗೆದ್ದಾತಿಂಗೇ ರಾಜೀಕಬೂಲಾಗಿ ಹೆಗಲ ಮ್ಯಾಲೆ ಕೈಯ್ಯಾಕ್ಯಂದು ಗೆಣೆಕಾರರ ಥರಾ ವಾಲಾಡ್ತವೆ’ ತುರೇಮಣೆ ವಿಶ್ಲೇಷಣೆ ಮಾಡಿದರು.</p>.<p>‘ಅದೇ ಯಾಕೆ ಅಂತ?’ ನನ್ನ ಅನುಮಾನ ಹೋಗಿರಲಿಲ್ಲ.</p>.<p>‘ಒಂದಷ್ಟು ಪ್ರಶ್ನೆಗಳಿಗೆ ಉತ್ತರವೇ ಇರಕುಲ್ಲ ಕನೋ. ಉದಾಹರಣೆಗೆ, ಡ್ರಗ್ಸ್ ಕೇಸು ಎಲ್ಲಿಗೆ ಬಂತು? ಪಿಎಸ್ಐ ನೇಮಕಾತಿ ಹಗರಣ ಏನಾಯ್ತು? ಸೈಬರ್ ಕ್ರೈಮ್ ಎಲ್ಲಿಗೋಯ್ತು?’ ಅಂದ್ರು.</p>.<p>‘ಇನ್ನೂ ಅವಲ್ಲೋ! ವೋಟರ್ ಗೇಟ್ ಮುಚ್ಚಿಕ್ಯತ್ತಾ? ಬಿಟ್ಕಾಯಿನ್ ಬಿಟ್ಟೋಯ್ತಾ? ರಸ್ತೆಗುಂಡಿ ಮುಚ್ಚಿಕ್ಯಳದು ಯಾವಾಗ? ಪರ್ಸೆಂಟೇಜ್ ಯಾವಾಗ ಕೊನೆಯಾಯ್ತದೆ? ಒತ್ತುವರಿ ತೆರವು ಪೂರ್ತಿಯಾಗದು ಯಾವಾಗ?’ ಯಂಟಪ್ಪಣ್ಣ ನಿಟ್ಟುಸಿರುಬುಟ್ಟಿತು.</p>.<p>‘ಅಣೈ, ಶಾಸಕರು ವಿಧಾನಸಭೆಗೆ ತಪ್ಪದೇ ಬರದು ಯಾವಾಗ? ಪಕ್ಷಾಂತರ ಎಂದು ನಿಂತದು? ಕುಟುಂಬ ರಾಜಕಾರಣಕ್ಕೆ ಕೊನೆ ಯಾವಾಗ? ಅಧಿಕಾರಿಗಳ ಭ್ರಷ್ಟಾಚಾರ ಯಾವಾಗ ಕೊನೆಯಾದದು? ಸಾಹಿತ್ಯ ಸಮ್ಮೇಳನದ ನಿರ್ಣಯಗಳು ಅಟ್ಟ ಹತ್ತಿ ಕುಂತಂಗೆ, ಇದು ಸುದ್ದಾಗೋದಿಲ್ಲ’ ಅಂತಂದೆ.</p>.<p>‘ಪಾರಿನ್ನಿಂದ ಕಳ್ಳದುಡ್ಡು ತಂದು ದೇಸದ ಜನಕ್ಕೆಲ್ಲಾ ಹಂಚತೀನಿ ಅಂದಿದ್ರಲ್ಲ! ಇದೂ ಹಂಗೀಯೆ?’ ಯಂಟಪ್ಪಣ್ಣ ನೆನಪಿಸಿಕೊಂಡಿತು.</p>.<p>‘ಕೇಳ್ರೋ ‘ನಾ ಖಾವೂಂಗ, ನಾ ಖಾನೇ ದೂಂಗ’ ಅನ್ನೋ ಸುಭಾಷಿತ ಯಾವತ್ತು ದಿಟವಾದದೋ ಆವತ್ತೇ ಇವೆಲ್ಲ ಪ್ರಶ್ನೆಗಳಿಗೂ ಉತ್ತರ ಸಿಕ್ತದೆ!’ ತುರೇಮಣೆ ಕಡ್ಡೆರಡು ತುಂಡಾಗುವಂಗೆ ಮಾತಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಗಡಿ ಸಮಸ್ಯೆಗಳಿಗೆ ಶಾನುಭೋಗರು ಕಾರಣ ಅಲ್ಲುವಾ? ಪಟೇಲರು ಅಂದವ್ರೆ ಅದ್ಯಕ್ಸರು!’ ಚಂದ್ರು ಕ್ಯಾತೆ ತೆಗೆದ.</p>.<p>‘ಆ ಗಡಿಬಿಡಿ ಬ್ಯಾರೆ. ಇಲ್ಲಿ ನೋಡು, ರಾಜಕೀಯದವುಕ್ಕೆ ಏನು ಮಲ್ಲಾಗರು ಬಂದದೆ! ನರಿ, ನಾಯಿ, ತೋಳ, ಗುಲಾಮ, ಲಡ್ಡುಲಸೆ ಅಂತೆಲ್ಲಾ ಬೀದೀಲಿ ಬುಸುಗುಟ್ಕಂದು ಬೋದಾಡತಾವೆ? ಈ ಖೇಲು ಯಾವತ್ತು ಬಂದ್ ಆದದು?’ ನನ್ನ ಬೇಜಾರು ಹೊರಹಾಕಿದೆ.</p>.<p>‘ನೋಡ್ಲಾ, ಅಮಾಸೆ ಟೇಮಿಗೆ ಹುಚ್ಚು ಕೆದರ್ತದಂತೆ. ಹಂಗೇ ಇವುಕ್ಕೆ ಎಲೆಕ್ಷನ್ ಹತ್ತಿರಕ್ಕೆ ಬಂದಾಗ ನಾಲಗೆ ಕೂಗುಯ್ಯಾಲೆ ಹಾಡ್ತದೆ. ಎಲೆಕ್ಷನ್ ಗೆದ್ದಾತಿಂಗೇ ರಾಜೀಕಬೂಲಾಗಿ ಹೆಗಲ ಮ್ಯಾಲೆ ಕೈಯ್ಯಾಕ್ಯಂದು ಗೆಣೆಕಾರರ ಥರಾ ವಾಲಾಡ್ತವೆ’ ತುರೇಮಣೆ ವಿಶ್ಲೇಷಣೆ ಮಾಡಿದರು.</p>.<p>‘ಅದೇ ಯಾಕೆ ಅಂತ?’ ನನ್ನ ಅನುಮಾನ ಹೋಗಿರಲಿಲ್ಲ.</p>.<p>‘ಒಂದಷ್ಟು ಪ್ರಶ್ನೆಗಳಿಗೆ ಉತ್ತರವೇ ಇರಕುಲ್ಲ ಕನೋ. ಉದಾಹರಣೆಗೆ, ಡ್ರಗ್ಸ್ ಕೇಸು ಎಲ್ಲಿಗೆ ಬಂತು? ಪಿಎಸ್ಐ ನೇಮಕಾತಿ ಹಗರಣ ಏನಾಯ್ತು? ಸೈಬರ್ ಕ್ರೈಮ್ ಎಲ್ಲಿಗೋಯ್ತು?’ ಅಂದ್ರು.</p>.<p>‘ಇನ್ನೂ ಅವಲ್ಲೋ! ವೋಟರ್ ಗೇಟ್ ಮುಚ್ಚಿಕ್ಯತ್ತಾ? ಬಿಟ್ಕಾಯಿನ್ ಬಿಟ್ಟೋಯ್ತಾ? ರಸ್ತೆಗುಂಡಿ ಮುಚ್ಚಿಕ್ಯಳದು ಯಾವಾಗ? ಪರ್ಸೆಂಟೇಜ್ ಯಾವಾಗ ಕೊನೆಯಾಯ್ತದೆ? ಒತ್ತುವರಿ ತೆರವು ಪೂರ್ತಿಯಾಗದು ಯಾವಾಗ?’ ಯಂಟಪ್ಪಣ್ಣ ನಿಟ್ಟುಸಿರುಬುಟ್ಟಿತು.</p>.<p>‘ಅಣೈ, ಶಾಸಕರು ವಿಧಾನಸಭೆಗೆ ತಪ್ಪದೇ ಬರದು ಯಾವಾಗ? ಪಕ್ಷಾಂತರ ಎಂದು ನಿಂತದು? ಕುಟುಂಬ ರಾಜಕಾರಣಕ್ಕೆ ಕೊನೆ ಯಾವಾಗ? ಅಧಿಕಾರಿಗಳ ಭ್ರಷ್ಟಾಚಾರ ಯಾವಾಗ ಕೊನೆಯಾದದು? ಸಾಹಿತ್ಯ ಸಮ್ಮೇಳನದ ನಿರ್ಣಯಗಳು ಅಟ್ಟ ಹತ್ತಿ ಕುಂತಂಗೆ, ಇದು ಸುದ್ದಾಗೋದಿಲ್ಲ’ ಅಂತಂದೆ.</p>.<p>‘ಪಾರಿನ್ನಿಂದ ಕಳ್ಳದುಡ್ಡು ತಂದು ದೇಸದ ಜನಕ್ಕೆಲ್ಲಾ ಹಂಚತೀನಿ ಅಂದಿದ್ರಲ್ಲ! ಇದೂ ಹಂಗೀಯೆ?’ ಯಂಟಪ್ಪಣ್ಣ ನೆನಪಿಸಿಕೊಂಡಿತು.</p>.<p>‘ಕೇಳ್ರೋ ‘ನಾ ಖಾವೂಂಗ, ನಾ ಖಾನೇ ದೂಂಗ’ ಅನ್ನೋ ಸುಭಾಷಿತ ಯಾವತ್ತು ದಿಟವಾದದೋ ಆವತ್ತೇ ಇವೆಲ್ಲ ಪ್ರಶ್ನೆಗಳಿಗೂ ಉತ್ತರ ಸಿಕ್ತದೆ!’ ತುರೇಮಣೆ ಕಡ್ಡೆರಡು ತುಂಡಾಗುವಂಗೆ ಮಾತಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>