‘ಲೇಯ್, ವಿಷಯ ಗೊತ್ತಾಯ್ತಾ? ಮುಖ್ಯಮಂತ್ರಿ ಕಚೇರೀಲೆ ಒಂದು ಕಡತ ನಾಪತ್ತೆ ಆಗಿದೆಯಂತೆ’ ಹರಟೆ ಕಟ್ಟೇಲಿ ಕಲ್ಲೇಶಿ ಮಾತು ತೆಗೆದ. ‘ಹುಟ್ಟುಗುಣ ಸುಟ್ರೂ ಹೋಗಲ್ಲ, ಫೈಲು ಅಂದ್ಮೇಲೆ ಅದಕ್ಕೆ ಆವಾಗಾವಾಗ ನಾಪತ್ತೆ ಆಗೋದೇ ಒಂದು ಚಾಳಿ, ಅದಕ್ಕೆ ಮುನಿಸಿಪಾಲಿಟಿ ಆದ್ರೇನು, ಮುಖ್ಯಮಂತ್ರಿ ಆಫೀಸ್ ಆದ್ರೇನು?’ ಎಂದ ಭದ್ರ.