<p>ನಮ್ಮೂರಲ್ಲಿ ಕಾಂಗಕ್ಕ, ತೆನೆಯಪ್ಪರ ಮನೆ ಜಗಳ ದಿನಪರ್ತಿ ನಡೀತಿತ್ತು. ಒಬ್ಬರು ಏನನ್ನ ಮಾತಾಡಿದ್ರೆ ಅದಕ್ಕೆ ಇನ್ನೊಬ್ಬರು ನಾಕು ಸೇರಿಸಿ ಬೈಯ್ಯತಿದ್ದರು. ದಿನಾ ಒಬ್ಬರನ್ನ ಒಬ್ಬರು ಬೈಯ್ಯದಿದ್ದರೆ ಇಬ್ಬರಿಗೂ ಉಂಡನ್ನ ಅರಗುತ್ತಿರಲಿಲ್ಲ. ಇವರಿಬ್ಬರ ಜಗಳದಲ್ಲಿ ಜನ ನಿಸೂರಾಗಿ ಬದುಕಾಟ ಮಾಡಂಗೇ ಇರಲಿಲ್ಲ. ಈ ಜಗಳಕ್ಕೆ ಕಮಲಕ್ಕನ ಮನೇರು ತೆನೆಯಪ್ಪನ ಪರವಾಗಿ ದಿನಾ ಪುಳ್ಳೆ ಹಾಕಿ ಬೆಂಕಿಯಲ್ಲಿ ನಚ್ಚಗಾಯ್ತಿದ್ರು.</p><p>‘ಹೆಣ್ಣುಮಕ್ಕಳಿಗೆ ಗೌರವ ಕೊಡದು ಕಲೀಬೇಕು ಕಪ್ಪ? ಕಡದು-ಬಳದು ಮಾತಾಡದು ಬುಡ್ರಿ’ ಕಾಂಗಕ್ಕನ ತಮ್ಮ ಚೊಂಬು ಹಿಡಕಂದು ಬೆಳಬೆಳಿಗ್ಗೇಲೆ ರೇಗತಿದ್ದ.</p><p>‘ನಾವೇನು ಕಂಡೋರ ಆಸ್ತಿ ಹೊಡಕಂದು ದೊಡ್ಡೋರಾಗಿಲ್ಲ ಬ್ರದರ್. ಅದೇಟು ಜನಕೆ ನೀವು ನಾಮ ತೇದಿದ್ದೀರಿ ಅಂತ ಗೊತ್ತದೆ’ ಅಂತ ತೆನೆಯಪ್ಪ ಬೋದು ಕೆಡಗತಿದ್ದ.</p><p>‘ಅಯ್ಯೋ ಬುಡಣ್ಣ, ಕಾಂಗಕ್ಕನ ಮನೆ ಜನಕ್ಕೆ ಉಣ್ಣಕ್ಕಿಕ್ಕಕ್ಕೆ ಅಕ್ಕಿ ಇಲ್ಲ ಅಂತ ಕಾಸು ಕೊಡ್ತಾವ್ರೆ. ಮಾತು ಮಾತಿಗೂ ಕ್ಯಾತೆ ತೆಗದು ಗಾಳಿಗರಾವು ಹಿಡಿದೋರಂಗಾಡ್ತರೆ’ ಕಮಲಕ್ಕನ ತಮ್ಮ ಚಿಪ್ಪು ಎಸೆದ.</p><p>‘ಅಲ್ಲ ಕನ್ರಯ್ಯಾ, ನೀವುನೀವೆ ಸನ್ನಿ ಹಿಡಿದೋರ ಥರ ಹೊಡೆದಾಡತಿದ್ರೆ ಸರೀಕರು ಏನಂದುಕ್ಯಂಬಲ್ಲ. ನಿಮ್ಮ ದಾರಿಗೆ ನೀವೇ ಮುಳ್ಳು ಮುರುಕತಿದ್ದೀರಿ. ರಾಜಕೀಯದ ಕಾರುಬಾರು ಅಂದ್ರೆ ಹಿಂಗೇನಾ? ಎಲೆಕ್ಷನ್ ಮುಗಿದ್ರೆ ಸಾಕಾಗ್ಯದೆ’ ಯಂಟಪ್ಪಣ್ಣ ಬೆರಗಾಯ್ತು.</p><p>‘ಹ್ಞೂಂಕನಣೈ, ಇನ್ನೇನು ಕ್ಯಾಮೆ ಇದ್ದದು ರಾಜಕೀಯದೋರಿಗೆ. ಬಾಯಿಚಪಲದ ಜಗಳಕ್ಕೆ ಕಾರಣವೇ ಬೇಕಾಗಿಲ್ಲ. ಬಾಯಿ ತೆಗುದ್ರೆ ಚಂಬಿಂಗ್ ಚಿಪ್ಪಿಂಗ್ ಶುರು ಮಾಡ್ತರೆ. ಜನಕ್ಕೆ ಇದೇ ಇವರ ಕೊಡುಗೆ’ ಅಂತಂದ ಚಂದ್ರು.</p><p>‘ನೋಡಿರ್ಲಾ, ರಾಜಕೀಯದಲ್ಲಿ ಎದುರಾಗೋ ಚಂಬು-ಚಿಪ್ಪಿನ ಒಳೇಟುಗಳನ್ನು ತಿಳಿದುಕೊಂಡು ಅವನ್ನು ತಪ್ಪಾಗಿ ಅರ್ಥೈಸಿ ತಪ್ಪು ಪರಿಹಾರಗಳನ್ನು ಕೊಡುವ ಎಡವಟ್ಟಿನ ಕಲೆಯೇ ರಾಜಕೀಯ. ಅದುನ್ನೇ ಈಗ ರಾಜಕಾರಣಿಗಳು ಮಾಡ್ತಿರದು’– ರಾಜಕೀಯಕ್ಕೆ ತುರೇಮಣೆ ಹೊಸ ವಿಶ್ಲೇಷಣೆ ಕೊಟ್ಟರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನಮ್ಮೂರಲ್ಲಿ ಕಾಂಗಕ್ಕ, ತೆನೆಯಪ್ಪರ ಮನೆ ಜಗಳ ದಿನಪರ್ತಿ ನಡೀತಿತ್ತು. ಒಬ್ಬರು ಏನನ್ನ ಮಾತಾಡಿದ್ರೆ ಅದಕ್ಕೆ ಇನ್ನೊಬ್ಬರು ನಾಕು ಸೇರಿಸಿ ಬೈಯ್ಯತಿದ್ದರು. ದಿನಾ ಒಬ್ಬರನ್ನ ಒಬ್ಬರು ಬೈಯ್ಯದಿದ್ದರೆ ಇಬ್ಬರಿಗೂ ಉಂಡನ್ನ ಅರಗುತ್ತಿರಲಿಲ್ಲ. ಇವರಿಬ್ಬರ ಜಗಳದಲ್ಲಿ ಜನ ನಿಸೂರಾಗಿ ಬದುಕಾಟ ಮಾಡಂಗೇ ಇರಲಿಲ್ಲ. ಈ ಜಗಳಕ್ಕೆ ಕಮಲಕ್ಕನ ಮನೇರು ತೆನೆಯಪ್ಪನ ಪರವಾಗಿ ದಿನಾ ಪುಳ್ಳೆ ಹಾಕಿ ಬೆಂಕಿಯಲ್ಲಿ ನಚ್ಚಗಾಯ್ತಿದ್ರು.</p><p>‘ಹೆಣ್ಣುಮಕ್ಕಳಿಗೆ ಗೌರವ ಕೊಡದು ಕಲೀಬೇಕು ಕಪ್ಪ? ಕಡದು-ಬಳದು ಮಾತಾಡದು ಬುಡ್ರಿ’ ಕಾಂಗಕ್ಕನ ತಮ್ಮ ಚೊಂಬು ಹಿಡಕಂದು ಬೆಳಬೆಳಿಗ್ಗೇಲೆ ರೇಗತಿದ್ದ.</p><p>‘ನಾವೇನು ಕಂಡೋರ ಆಸ್ತಿ ಹೊಡಕಂದು ದೊಡ್ಡೋರಾಗಿಲ್ಲ ಬ್ರದರ್. ಅದೇಟು ಜನಕೆ ನೀವು ನಾಮ ತೇದಿದ್ದೀರಿ ಅಂತ ಗೊತ್ತದೆ’ ಅಂತ ತೆನೆಯಪ್ಪ ಬೋದು ಕೆಡಗತಿದ್ದ.</p><p>‘ಅಯ್ಯೋ ಬುಡಣ್ಣ, ಕಾಂಗಕ್ಕನ ಮನೆ ಜನಕ್ಕೆ ಉಣ್ಣಕ್ಕಿಕ್ಕಕ್ಕೆ ಅಕ್ಕಿ ಇಲ್ಲ ಅಂತ ಕಾಸು ಕೊಡ್ತಾವ್ರೆ. ಮಾತು ಮಾತಿಗೂ ಕ್ಯಾತೆ ತೆಗದು ಗಾಳಿಗರಾವು ಹಿಡಿದೋರಂಗಾಡ್ತರೆ’ ಕಮಲಕ್ಕನ ತಮ್ಮ ಚಿಪ್ಪು ಎಸೆದ.</p><p>‘ಅಲ್ಲ ಕನ್ರಯ್ಯಾ, ನೀವುನೀವೆ ಸನ್ನಿ ಹಿಡಿದೋರ ಥರ ಹೊಡೆದಾಡತಿದ್ರೆ ಸರೀಕರು ಏನಂದುಕ್ಯಂಬಲ್ಲ. ನಿಮ್ಮ ದಾರಿಗೆ ನೀವೇ ಮುಳ್ಳು ಮುರುಕತಿದ್ದೀರಿ. ರಾಜಕೀಯದ ಕಾರುಬಾರು ಅಂದ್ರೆ ಹಿಂಗೇನಾ? ಎಲೆಕ್ಷನ್ ಮುಗಿದ್ರೆ ಸಾಕಾಗ್ಯದೆ’ ಯಂಟಪ್ಪಣ್ಣ ಬೆರಗಾಯ್ತು.</p><p>‘ಹ್ಞೂಂಕನಣೈ, ಇನ್ನೇನು ಕ್ಯಾಮೆ ಇದ್ದದು ರಾಜಕೀಯದೋರಿಗೆ. ಬಾಯಿಚಪಲದ ಜಗಳಕ್ಕೆ ಕಾರಣವೇ ಬೇಕಾಗಿಲ್ಲ. ಬಾಯಿ ತೆಗುದ್ರೆ ಚಂಬಿಂಗ್ ಚಿಪ್ಪಿಂಗ್ ಶುರು ಮಾಡ್ತರೆ. ಜನಕ್ಕೆ ಇದೇ ಇವರ ಕೊಡುಗೆ’ ಅಂತಂದ ಚಂದ್ರು.</p><p>‘ನೋಡಿರ್ಲಾ, ರಾಜಕೀಯದಲ್ಲಿ ಎದುರಾಗೋ ಚಂಬು-ಚಿಪ್ಪಿನ ಒಳೇಟುಗಳನ್ನು ತಿಳಿದುಕೊಂಡು ಅವನ್ನು ತಪ್ಪಾಗಿ ಅರ್ಥೈಸಿ ತಪ್ಪು ಪರಿಹಾರಗಳನ್ನು ಕೊಡುವ ಎಡವಟ್ಟಿನ ಕಲೆಯೇ ರಾಜಕೀಯ. ಅದುನ್ನೇ ಈಗ ರಾಜಕಾರಣಿಗಳು ಮಾಡ್ತಿರದು’– ರಾಜಕೀಯಕ್ಕೆ ತುರೇಮಣೆ ಹೊಸ ವಿಶ್ಲೇಷಣೆ ಕೊಟ್ಟರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>