<p>‘ಇದುವರೆಗೂ ಸಾರ್ವಜನಿಕವಾಗಿ ಚುನಾವಣಾ ಪ್ರಚಾರ, ಮನೆ ಬಾಗಿಲಿಗೆ ಬಂದು ಮತ ಯಾಚನೆ ಮಾಡುತ್ತಿದ್ದ ರಾಜಕೀಯ ಪಕ್ಷಗಳು ಈಗ ಮನೆ ಒಳಗೆ ಬರಲು ಶುರುಮಾಡಿವೆ...’ ಎಂದಳು ಸುಮಿ.</p>.<p>‘ವರವೋ ನೆರವೋ ನೀಡಿ ಮತದಾರರ ಮನವೊಲಿಸಲು ಬರುತ್ತಿವೆ’ ಅಂದ ಶಂಕ್ರಿ.</p>.<p>‘ಕಾಂಗ್ರೆಸ್ಸಿನವರು ಗೃಹಲಕ್ಷ್ಮಿ ಯೋಜನೆಯಡಿ ಕುಟುಂಬದ ಯಜಮಾನಿಗೆ ಮಾಸಿಕ ಎರಡು ಸಾವಿರ ರೂಪಾಯಿ ಕೊಡ್ತಾರಂತೆ. ಯಜಮಾನಿ, ಯಜಮಾನ ಎಂಬ ತಾರತಮ್ಯ ಮಾಡದೆ ಬಿಜೆಪಿಯವರು ಬಿಪಿಎಲ್ ಕಾರ್ಡಿರುವ ಕುಟುಂಬಗಳಿಗೆ ತಿಂಗಳಿಗೆ ಎರಡು ಸಾವಿರ ರೂಪಾಯಿ ವಿತರಿಸುತ್ತಾರಂತೆ’.</p>.<p>‘ಚುನಾವಣೆ ಸಂದರ್ಭದಲ್ಲಿ ಕದ್ದುಮುಚ್ಚಿ ಸೀರೆ, ಕುಕ್ಕರ್, ಬೆಳ್ಳಿ ಬಟ್ಟಲು ಹಂಚುತ್ತಿದ್ದವರು ಈಗ ಎಲೆಕ್ಷನ್ ಬೆನಿಫಿಟ್ಗಳನ್ನು ಮುಕ್ತವಾಗಿ ಹಂಚಲು ಹೊರಟಿದ್ದಾರೆ’.</p>.<p>‘ರೇಷನ್ ಕಾರ್ಡಿನಲ್ಲಿ ಅಕ್ಕಿ ಜೊತೆಗೆ ಗ್ಯಾಸ್ ಸಿಲಿಂಡರ್, ಬೇಳೆ, ತರಕಾರಿ, ಸಾಂಬಾರ್ ಪದಾರ್ಥಗಳನ್ನೂ ಉಚಿತವಾಗಿ ಕೊಟ್ಟರೆ ಅನುಕೂಲ ಆಗುತ್ತೇರೀ...’</p>.<p>‘ಚುನಾವಣೆ ಹತ್ತಿರವಾದಂತೆ ಅಂಥ ಘೋಷಣೆಗಳನ್ನೂ ಪಕ್ಷಗಳು ಪ್ರಕಟಿಸಬಹುದು. ಹಬ್ಬಗಳಲ್ಲಿ ಮನೆ ಮಂದಿಗೆಲ್ಲಾ ಹೊಸ ಬಟ್ಟೆ, ಹಬ್ಬದ ಸಾಮಾನುಗಳನ್ನು ಕೊಡುವ ಯೋಜನೆಗಳೂ ಘೋಷಣೆಯಾಗಬಹುದು’.</p>.<p>‘ಆಗಬಹುದು, ಯುಗಾದಿಯಂದು ಮತದಾರರ ಮನೆ ಬಾಗಿಲಿಗೆ ತೋರಣ ಕಟ್ಟಿ, ಹೂರಣ ಕುಟ್ಟಿ, ಒಬ್ಬಟ್ಟು ತಟ್ಟಿ ಬಡಿಸುತ್ತೇವೆ ಅಂತ ಯಾವುದಾದರೂ ಪಕ್ಷದವರು ಹಬ್ಬದ ಆಫರ್ ಅನೌನ್ಸ್ ಮಾಡಬಹುದು’.</p>.<p>‘ನಾವು ಜನನಾಯಕರಲ್ಲ, ಜನಸೇವಕರು ಎಂದು ಹೇಳಿಕೊಳ್ಳುವ ರಾಜಕಾರಣಿಗಳು ಇನ್ನೇನೇನು ಸೇವಾ ಸೌಭಾಗ್ಯಗಳನ್ನು ಮತದಾರರಿಗೆ ಕೊಡುವರೋ ಕಾದು ನೋಡೋಣ, ಕೊಟ್ಟಿದ್ದನ್ನು ಸ್ವೀಕರಿಸೋಣ...’ ಎಂದ ಶಂಕ್ರಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಇದುವರೆಗೂ ಸಾರ್ವಜನಿಕವಾಗಿ ಚುನಾವಣಾ ಪ್ರಚಾರ, ಮನೆ ಬಾಗಿಲಿಗೆ ಬಂದು ಮತ ಯಾಚನೆ ಮಾಡುತ್ತಿದ್ದ ರಾಜಕೀಯ ಪಕ್ಷಗಳು ಈಗ ಮನೆ ಒಳಗೆ ಬರಲು ಶುರುಮಾಡಿವೆ...’ ಎಂದಳು ಸುಮಿ.</p>.<p>‘ವರವೋ ನೆರವೋ ನೀಡಿ ಮತದಾರರ ಮನವೊಲಿಸಲು ಬರುತ್ತಿವೆ’ ಅಂದ ಶಂಕ್ರಿ.</p>.<p>‘ಕಾಂಗ್ರೆಸ್ಸಿನವರು ಗೃಹಲಕ್ಷ್ಮಿ ಯೋಜನೆಯಡಿ ಕುಟುಂಬದ ಯಜಮಾನಿಗೆ ಮಾಸಿಕ ಎರಡು ಸಾವಿರ ರೂಪಾಯಿ ಕೊಡ್ತಾರಂತೆ. ಯಜಮಾನಿ, ಯಜಮಾನ ಎಂಬ ತಾರತಮ್ಯ ಮಾಡದೆ ಬಿಜೆಪಿಯವರು ಬಿಪಿಎಲ್ ಕಾರ್ಡಿರುವ ಕುಟುಂಬಗಳಿಗೆ ತಿಂಗಳಿಗೆ ಎರಡು ಸಾವಿರ ರೂಪಾಯಿ ವಿತರಿಸುತ್ತಾರಂತೆ’.</p>.<p>‘ಚುನಾವಣೆ ಸಂದರ್ಭದಲ್ಲಿ ಕದ್ದುಮುಚ್ಚಿ ಸೀರೆ, ಕುಕ್ಕರ್, ಬೆಳ್ಳಿ ಬಟ್ಟಲು ಹಂಚುತ್ತಿದ್ದವರು ಈಗ ಎಲೆಕ್ಷನ್ ಬೆನಿಫಿಟ್ಗಳನ್ನು ಮುಕ್ತವಾಗಿ ಹಂಚಲು ಹೊರಟಿದ್ದಾರೆ’.</p>.<p>‘ರೇಷನ್ ಕಾರ್ಡಿನಲ್ಲಿ ಅಕ್ಕಿ ಜೊತೆಗೆ ಗ್ಯಾಸ್ ಸಿಲಿಂಡರ್, ಬೇಳೆ, ತರಕಾರಿ, ಸಾಂಬಾರ್ ಪದಾರ್ಥಗಳನ್ನೂ ಉಚಿತವಾಗಿ ಕೊಟ್ಟರೆ ಅನುಕೂಲ ಆಗುತ್ತೇರೀ...’</p>.<p>‘ಚುನಾವಣೆ ಹತ್ತಿರವಾದಂತೆ ಅಂಥ ಘೋಷಣೆಗಳನ್ನೂ ಪಕ್ಷಗಳು ಪ್ರಕಟಿಸಬಹುದು. ಹಬ್ಬಗಳಲ್ಲಿ ಮನೆ ಮಂದಿಗೆಲ್ಲಾ ಹೊಸ ಬಟ್ಟೆ, ಹಬ್ಬದ ಸಾಮಾನುಗಳನ್ನು ಕೊಡುವ ಯೋಜನೆಗಳೂ ಘೋಷಣೆಯಾಗಬಹುದು’.</p>.<p>‘ಆಗಬಹುದು, ಯುಗಾದಿಯಂದು ಮತದಾರರ ಮನೆ ಬಾಗಿಲಿಗೆ ತೋರಣ ಕಟ್ಟಿ, ಹೂರಣ ಕುಟ್ಟಿ, ಒಬ್ಬಟ್ಟು ತಟ್ಟಿ ಬಡಿಸುತ್ತೇವೆ ಅಂತ ಯಾವುದಾದರೂ ಪಕ್ಷದವರು ಹಬ್ಬದ ಆಫರ್ ಅನೌನ್ಸ್ ಮಾಡಬಹುದು’.</p>.<p>‘ನಾವು ಜನನಾಯಕರಲ್ಲ, ಜನಸೇವಕರು ಎಂದು ಹೇಳಿಕೊಳ್ಳುವ ರಾಜಕಾರಣಿಗಳು ಇನ್ನೇನೇನು ಸೇವಾ ಸೌಭಾಗ್ಯಗಳನ್ನು ಮತದಾರರಿಗೆ ಕೊಡುವರೋ ಕಾದು ನೋಡೋಣ, ಕೊಟ್ಟಿದ್ದನ್ನು ಸ್ವೀಕರಿಸೋಣ...’ ಎಂದ ಶಂಕ್ರಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>