ಮೈಸೂರು– ಮಹಾರಾಷ್ಟ್ರ ಗಡಿ ವಿವಾದ: ಗೋಪಾಲಗೌಡ ಮನವಿ
ನವದೆಹಲಿ, ಏ. 1– ಉಭಯ ಪಕ್ಷಗಳಿಗೂ ನೋವಾಗದಂತೆ ಮೈಸೂರು– ಮಹಾರಾಷ್ಟ್ರ ಗಡಿ ವಿವಾದಕ್ಕೆ ಶೀಘ್ರ ಪರಿಹಾರ ಕಂಡುಹಿಡಿಯುವುದರಲ್ಲಿ ಪ್ರಧಾನಮಂತ್ರಿ ಶ್ರೀಮತಿ ಇಂದಿರಾ ಗಾಂಧಿಯವರಿಗೆ ಅಡ್ಡಿಪಡಿಸಬೇಡಿ ಎಂದು ಮೈಸೂರು ಶಾಸಕರ ನಿಯೋಗದ ನಾಯಕ ಎಸ್.ಗೋಪಾಲಗೌಡರು ಇಂದು ಇಲ್ಲಿ ಕೇಂದ್ರ ಗೃಹ ಸಚಿವ ಚವಾಣರಿಗೆ ಮನವಿ ಮಾಡಿಕೊಂಡರು.