<p><strong>ಅಪೊಲೊ– 13ರಲ್ಲಿ ತೀವ್ರ ತಾಂತ್ರಿಕ ತೊಂದರೆ: ಚಂದ್ರಸ್ಪರ್ಶ ಕಾರ್ಯಕ್ರಮ ರದ್ದು</strong></p>.<p>ಹ್ಯೂಸ್ಟನ್, ಏ. 14– ಬಾಹ್ಯಾಕಾಶ ನೌಕೆಯಲ್ಲಿ ಅನಿರೀಕ್ಷಿತ ಯಾಂತ್ರಿಕ ತೊಂದರೆ ಉಂಟಾದ ಕಾರಣ ಚಂದ್ರನ ಮೇಲೆ ಇಳಿಯುವ ಕಾರ್ಯಕ್ರಮವನ್ನು ರದ್ದು ಗೊಳಿಸಿರುವ ಅಪೊಲೊ– 13ರ ಮೂವರು ಗಗನಯಾತ್ರಿಗಳು ಈಗ ಭೂಮಿಗೆ ಹಿಂದಿರುಗುವ ಸಿದ್ಧತೆ ನಡೆಸಿದ್ದಾರೆ.</p>.<p>ಉಳಿವಿಗಾಗಿ ಬಾಹ್ಯಾಂತರಿಕ್ಷದಲ್ಲೇ ದೀರ್ಘ ಹೋರಾಟ ನಡೆಸಿರುವ ಗಗನಯಾತ್ರಿಗಳು ಎಲ್ಲವೂ ಸುಲಲಿತವಾಗಿ ಸಾಗಿದರೆ ಶುಕ್ರವಾರ ರಾತ್ರಿ ಭಾರತೀಯ ವೇಳೆ 11.17 ಗಂಟೆಗೆ ಧರೆಗಿಳಿಯುವರು.</p>.<p><strong>ಆಹಾರಧಾನ್ಯ ಸಗಟು ವ್ಯಾಪಾರ ರಾಷ್ಟ್ರೀಕರಣ ಉದ್ದೇಶ ಇಲ್ಲ: ರಾಂ</strong></p>.<p>ನವದೆಹಲಿ, ಏ. 14– ಆಹಾರ ಧಾನ್ಯಗಳ ಸಗಟು ವ್ಯಾಪಾರವನ್ನು ರಾಷ್ಟ್ರೀಕರಣಗೊಳಿಸುವ ಉದ್ದೇಶ ಸರ್ಕಾರಕ್ಕಿಲ್ಲ ಎಂದು ಕೃಷಿ ಮತ್ತು ಆಹಾರ ಸಚಿವ ಜಗಜೀವನರಾಂ ಅವರು ಇಂದು ಲೋಕಸಭೆಗೆ ತಿಳಿಸಿದರು.</p>.<p>ಆದರೆ ರೈತರು ಮತ್ತು ಬಳಕೆದಾರರ ಹಿತದೃಷ್ಟಿಯಿಂದ, ಪರಿಸ್ಥಿತಿ ಒದಗಿದಾಗ ಸರ್ಕಾರಿ ರಂಗದ ಸಂಸ್ಥೆಗಳ ಮೂಲಕ ವ್ಯಾಪಾರ ನಡೆಸುವ ಅವಕಾಶವನ್ನು ಸರ್ಕಾರ ವಿಸ್ತರಿಸುವುದೆಂದೂ ಕೆಲವು ಸಾವಿರ ವರ್ತಕರಿಗಿಂತ ಕೋಟ್ಯಂತರ ರೈತರ, ಬಳಕೆದಾರರ ಹಿತದೃಷ್ಟಿ ಹೆಚ್ಚಿನದೆಂದೂ ಅವರು ಸ್ಪಷ್ಟಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಪೊಲೊ– 13ರಲ್ಲಿ ತೀವ್ರ ತಾಂತ್ರಿಕ ತೊಂದರೆ: ಚಂದ್ರಸ್ಪರ್ಶ ಕಾರ್ಯಕ್ರಮ ರದ್ದು</strong></p>.<p>ಹ್ಯೂಸ್ಟನ್, ಏ. 14– ಬಾಹ್ಯಾಕಾಶ ನೌಕೆಯಲ್ಲಿ ಅನಿರೀಕ್ಷಿತ ಯಾಂತ್ರಿಕ ತೊಂದರೆ ಉಂಟಾದ ಕಾರಣ ಚಂದ್ರನ ಮೇಲೆ ಇಳಿಯುವ ಕಾರ್ಯಕ್ರಮವನ್ನು ರದ್ದು ಗೊಳಿಸಿರುವ ಅಪೊಲೊ– 13ರ ಮೂವರು ಗಗನಯಾತ್ರಿಗಳು ಈಗ ಭೂಮಿಗೆ ಹಿಂದಿರುಗುವ ಸಿದ್ಧತೆ ನಡೆಸಿದ್ದಾರೆ.</p>.<p>ಉಳಿವಿಗಾಗಿ ಬಾಹ್ಯಾಂತರಿಕ್ಷದಲ್ಲೇ ದೀರ್ಘ ಹೋರಾಟ ನಡೆಸಿರುವ ಗಗನಯಾತ್ರಿಗಳು ಎಲ್ಲವೂ ಸುಲಲಿತವಾಗಿ ಸಾಗಿದರೆ ಶುಕ್ರವಾರ ರಾತ್ರಿ ಭಾರತೀಯ ವೇಳೆ 11.17 ಗಂಟೆಗೆ ಧರೆಗಿಳಿಯುವರು.</p>.<p><strong>ಆಹಾರಧಾನ್ಯ ಸಗಟು ವ್ಯಾಪಾರ ರಾಷ್ಟ್ರೀಕರಣ ಉದ್ದೇಶ ಇಲ್ಲ: ರಾಂ</strong></p>.<p>ನವದೆಹಲಿ, ಏ. 14– ಆಹಾರ ಧಾನ್ಯಗಳ ಸಗಟು ವ್ಯಾಪಾರವನ್ನು ರಾಷ್ಟ್ರೀಕರಣಗೊಳಿಸುವ ಉದ್ದೇಶ ಸರ್ಕಾರಕ್ಕಿಲ್ಲ ಎಂದು ಕೃಷಿ ಮತ್ತು ಆಹಾರ ಸಚಿವ ಜಗಜೀವನರಾಂ ಅವರು ಇಂದು ಲೋಕಸಭೆಗೆ ತಿಳಿಸಿದರು.</p>.<p>ಆದರೆ ರೈತರು ಮತ್ತು ಬಳಕೆದಾರರ ಹಿತದೃಷ್ಟಿಯಿಂದ, ಪರಿಸ್ಥಿತಿ ಒದಗಿದಾಗ ಸರ್ಕಾರಿ ರಂಗದ ಸಂಸ್ಥೆಗಳ ಮೂಲಕ ವ್ಯಾಪಾರ ನಡೆಸುವ ಅವಕಾಶವನ್ನು ಸರ್ಕಾರ ವಿಸ್ತರಿಸುವುದೆಂದೂ ಕೆಲವು ಸಾವಿರ ವರ್ತಕರಿಗಿಂತ ಕೋಟ್ಯಂತರ ರೈತರ, ಬಳಕೆದಾರರ ಹಿತದೃಷ್ಟಿ ಹೆಚ್ಚಿನದೆಂದೂ ಅವರು ಸ್ಪಷ್ಟಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>