<p>ರಾಜ್ಯಗಳ ಪುನರ್ರಚನೆಗೆಮತ್ತೆ ಆಯೋಗ</p>.<p><strong>ನವದೆಹಲಿ, ಜುಲೈ 6–</strong> ಕೇಂದ್ರ ಗೃಹ ಸಚಿವ ಖಾತೆ ಚವಾಣ್ರ ಕೈತಪ್ಪಿರುವುದರಿಂದ, ಇನ್ನೊಂದು ರಾಜ್ಯ ಪುನರ್ವಿಂಗಡಣಾ ಆಯೋಗ ನೇಮಕದ ಸ್ಪಷ್ಟ ಸಾಧ್ಯತೆ ಉಂಟಾಗಿದೆ.</p>.<p>ಕಳೆದ 15 ವರ್ಷಗಳಲ್ಲಿ ಬಹುಪಾಲು ತಣ್ಣಗಾಗಿರುವ ಹಲವು ವಿವಾದಗಳು ಅಂಥ ನೇಮಕದಿಂದ ಮತ್ತೆ ಏಳುತ್ತವೆ ಎಂಬುದೇ ಚವಾಣರ ವಾದವಾಗಿದ್ದು, ನೇಮಕದ ಸಲಹೆ ಬಂದಾಗಲೆಲ್ಲ ಅವರು ವಿರೋಧಿಸುತ್ತಿದ್ದರು.</p>.<p>ರಾಜ್ಯಗಳ ಗಾತ್ರ ಹಾಗೂ ಗಡಿಗಳ ಪುನರ್ವಿಮರ್ಶೆಯ ಕಾಲ ಬಂದಿದೆಯಂತ ಕಾಣುತ್ತದೆ ಎಂದು, ಪ್ರಧಾನಿ ಇಂದಿರಾ ಗಾಂಧಿ ಅವರು, ತೆಲಂಗಾಣ ಚಳವಳಿ ಪ್ರಕೋಪಕ್ಕೇರಿದ್ದ ಕಾಲದಲ್ಲಿ ಸಲಹೆ ಮಾಡಿದ್ದರೆಂದು ವರದಿಯಾಗಿದೆ.</p>.<p><strong>ಪ್ರಾದೇಶಿಕ ಮಟ್ಟದಲ್ಲಿ ಚುನಾವಣಾ ಮೈತ್ರಿಗೆ ಸಂಸ್ಥಾ ಕಾಂಗ್ರೆಸ್ ಸಿದ್ಧ</strong></p>.<p><strong>ನವದೆಹಲಿ, ಜುಲೈ 6– </strong>ಸಂಸ್ಥಾ ಕಾಂಗ್ರೆಸ್ ಪಕ್ಷ ಮುಂದಿನ ಸಾರ್ವತ್ರಿಕ ಚುನಾವಣೆಗಳಲ್ಲಿ ಸ್ಪರ್ಧಿಸುವ ದೃಷ್ಟಿಯಿಂದ ರಾಷ್ಟ್ರ ಮಟ್ಟದಲ್ಲಿ ಇತರ ವಿರೋಧ ಪಕ್ಷಗಳ ಜತೆ ಒಡಂಬಡಿಕೆ ಮಾಡಿಕೊಳ್ಳುವುದಕ್ಕಿಂತ ಹೆಚ್ಚಾಗಿ ಪ್ರತೀ ರಾಜ್ಯದಲ್ಲೂ ಸ್ಥಳೀಯ ಪಕ್ಷಗಳ ಜತೆ ಪ್ರಾದೇಶಿಕ ಮೈತ್ರಿಕೂಟಗಳನ್ನು ರಚಿಸಿಕೊಳ್ಳಬಹುದು.</p>.<p>ಸಂಸ್ಥಾ ಕಾಂಗ್ರೆಸ್ ಅಧ್ಯಕ್ಷ ಶ್ರೀ ಎಸ್.ನಿಜಲಿಂಗಪ್ಪನವರು ಇಂದು ಇಲ್ಲಿನ ಪತ್ರಿಕಾ ಗೋಷ್ಠಿಯಲ್ಲಿ ಸುಮಾರು ಒಂದು ಗಂಟೆ ಕಾಲ ಮಾತನಾಡಿದ ಸಮಯದಲ್ಲಿ ಈ ಗ್ರಹಿಕೆಗೆ ಎಡೆಯಿತ್ತರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ರಾಜ್ಯಗಳ ಪುನರ್ರಚನೆಗೆಮತ್ತೆ ಆಯೋಗ</p>.<p><strong>ನವದೆಹಲಿ, ಜುಲೈ 6–</strong> ಕೇಂದ್ರ ಗೃಹ ಸಚಿವ ಖಾತೆ ಚವಾಣ್ರ ಕೈತಪ್ಪಿರುವುದರಿಂದ, ಇನ್ನೊಂದು ರಾಜ್ಯ ಪುನರ್ವಿಂಗಡಣಾ ಆಯೋಗ ನೇಮಕದ ಸ್ಪಷ್ಟ ಸಾಧ್ಯತೆ ಉಂಟಾಗಿದೆ.</p>.<p>ಕಳೆದ 15 ವರ್ಷಗಳಲ್ಲಿ ಬಹುಪಾಲು ತಣ್ಣಗಾಗಿರುವ ಹಲವು ವಿವಾದಗಳು ಅಂಥ ನೇಮಕದಿಂದ ಮತ್ತೆ ಏಳುತ್ತವೆ ಎಂಬುದೇ ಚವಾಣರ ವಾದವಾಗಿದ್ದು, ನೇಮಕದ ಸಲಹೆ ಬಂದಾಗಲೆಲ್ಲ ಅವರು ವಿರೋಧಿಸುತ್ತಿದ್ದರು.</p>.<p>ರಾಜ್ಯಗಳ ಗಾತ್ರ ಹಾಗೂ ಗಡಿಗಳ ಪುನರ್ವಿಮರ್ಶೆಯ ಕಾಲ ಬಂದಿದೆಯಂತ ಕಾಣುತ್ತದೆ ಎಂದು, ಪ್ರಧಾನಿ ಇಂದಿರಾ ಗಾಂಧಿ ಅವರು, ತೆಲಂಗಾಣ ಚಳವಳಿ ಪ್ರಕೋಪಕ್ಕೇರಿದ್ದ ಕಾಲದಲ್ಲಿ ಸಲಹೆ ಮಾಡಿದ್ದರೆಂದು ವರದಿಯಾಗಿದೆ.</p>.<p><strong>ಪ್ರಾದೇಶಿಕ ಮಟ್ಟದಲ್ಲಿ ಚುನಾವಣಾ ಮೈತ್ರಿಗೆ ಸಂಸ್ಥಾ ಕಾಂಗ್ರೆಸ್ ಸಿದ್ಧ</strong></p>.<p><strong>ನವದೆಹಲಿ, ಜುಲೈ 6– </strong>ಸಂಸ್ಥಾ ಕಾಂಗ್ರೆಸ್ ಪಕ್ಷ ಮುಂದಿನ ಸಾರ್ವತ್ರಿಕ ಚುನಾವಣೆಗಳಲ್ಲಿ ಸ್ಪರ್ಧಿಸುವ ದೃಷ್ಟಿಯಿಂದ ರಾಷ್ಟ್ರ ಮಟ್ಟದಲ್ಲಿ ಇತರ ವಿರೋಧ ಪಕ್ಷಗಳ ಜತೆ ಒಡಂಬಡಿಕೆ ಮಾಡಿಕೊಳ್ಳುವುದಕ್ಕಿಂತ ಹೆಚ್ಚಾಗಿ ಪ್ರತೀ ರಾಜ್ಯದಲ್ಲೂ ಸ್ಥಳೀಯ ಪಕ್ಷಗಳ ಜತೆ ಪ್ರಾದೇಶಿಕ ಮೈತ್ರಿಕೂಟಗಳನ್ನು ರಚಿಸಿಕೊಳ್ಳಬಹುದು.</p>.<p>ಸಂಸ್ಥಾ ಕಾಂಗ್ರೆಸ್ ಅಧ್ಯಕ್ಷ ಶ್ರೀ ಎಸ್.ನಿಜಲಿಂಗಪ್ಪನವರು ಇಂದು ಇಲ್ಲಿನ ಪತ್ರಿಕಾ ಗೋಷ್ಠಿಯಲ್ಲಿ ಸುಮಾರು ಒಂದು ಗಂಟೆ ಕಾಲ ಮಾತನಾಡಿದ ಸಮಯದಲ್ಲಿ ಈ ಗ್ರಹಿಕೆಗೆ ಎಡೆಯಿತ್ತರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>