<p><strong>71ರೊಳಗಾಗಿ ಎಲ್ಲ ಸರ್ಕಾರಿ ಕೃಷಿಯೋಗ್ಯ ಜಮೀನಿನ ಹಂಚಿಕೆ</strong></p>.<p><strong>ರಾಜೇಂದ್ರನಗರ, ಅ. 14–</strong> ಸರ್ಕಾರದ ಅಧೀನದಲ್ಲಿರುವ ಕೃಷಿಯೋಗ್ಯ ಬಂಜರು ಜಮೀನನ್ನು ಭೂಹೀನ ಕೃಷಿ ಕಾರ್ಮಿಕರು ಮತ್ತು ಬಡ ರೈತರಿಗೆ 1971ರ ಕೊನೆಯ ವೇಳೆಗೆ ಹಂಚಬೇಕೆಂಬ ಸೂಚನೆಯನ್ನು ಇಲ್ಲಿ ನಡೆಯುತ್ತಿರುವ ಆಡಳಿತ ಎಐಸಿಸಿ ಇಂದು ಅಂಗೀಕರಿಸಿತು.</p>.<p>ನಿರ್ಣಯಕ್ಕೆ ಯಂಗ್ಟರ್ಕ್ ನಾಯಕ ಕೃಷ್ಣಕಾಂತರು ತಂದ ತಿದ್ದುಪಡಿಯನ್ನು ನಿರ್ಣಯ ಮಂಡಿಸಿದ ಚವಾಣರು ಒಪ್ಪಿಕೊಂಡರು. ರಾಜಕೀಯ ಹಾಗೂ ಆರ್ಥಿಕ ವಿಷಯಗಳನ್ನು ಕಾಂಗ್ರೆಸ್ ಇತಿಹಾಸ ದಲ್ಲಿಯೇ ಮೊದಲ ಬಾರಿಗೆ ಒಟ್ಟುಗೂಡಿಸಿರುವ ಈ ನಿರ್ಣಯ, ಬಲಪಂಥೀಯರ ಪ್ರತಿಗಾಮಿತ್ವ, ವಾಮಪಂಥೀಯರ ಸಾಹಸ ಗಳ ವಿರುದ್ಧ ಹೋರಾಡಲು ನಿರ್ಧರಿಸಿದೆ.</p>.<p><strong>ಅಮೆರಿಕಕ್ಕೆ ಭಾರತದ ಛೀಮಾರಿ</strong></p>.<p><strong>ವಿಶ್ವಸಂಸ್ಥೆ, ಅ. 14–</strong> ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರ ಮಾರಾಟ ಮತ್ತೆ ಆರಂಭಿಸಿ, ಆ ಪ್ರದೇಶದಲ್ಲಿ ಬಿಕ್ಕಟ್ಟು ಹಾಗೂ ಅಭದ್ರತೆ ವಿಷಮಿಸುವಂತೆ ಮಾಡಿರುವುದಕ್ಕಾಗಿ ಅಮೆರಿಕ ಸರ್ಕಾರಕ್ಕೆ ಭಾರತ ಛೀಮಾರಿ ಹಾಕಿತು.</p>.<p>ಅಂತರರಾಷ್ಟ್ರೀಯ ಭದ್ರತೆ ಹೆಚ್ಚಿಸುವ ವಿಷಯದ ಮೇಲಿನ ಚರ್ಚೆಯಲ್ಲಿ ಜನರಲ್ ಅಸೆಂಬ್ಲಿಯ ರಾಜಕೀಯ ಸಮಿತಿಯಲ್ಲಿ ನಿನ್ನೆ ಭಾಷಣ ಮಾಡಿದ ಭಾರತದ ವಿದೇಶಾಂಗ ಶಾಖೆ ಉಪಸಚಿವ ಸುರೇಂದ್ರ ಪಾಲ್ಸಿಂಗ್, ತಮ್ಮ ಭಾಷಣದ ಅಂತ್ಯದಲ್ಲಿ ಈ ವಿಷಯದ ಪ್ರಸ್ತಾಪವೆತ್ತಿ, ಸಂಕ್ಷಿಪ್ತವಾಗಿ, ಆದರೆ ಅಷ್ಟೇ ತೀಕ್ಷ್ಣವಾಗಿ ಅಮೆರಿಕವನ್ನು ಖಂಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>71ರೊಳಗಾಗಿ ಎಲ್ಲ ಸರ್ಕಾರಿ ಕೃಷಿಯೋಗ್ಯ ಜಮೀನಿನ ಹಂಚಿಕೆ</strong></p>.<p><strong>ರಾಜೇಂದ್ರನಗರ, ಅ. 14–</strong> ಸರ್ಕಾರದ ಅಧೀನದಲ್ಲಿರುವ ಕೃಷಿಯೋಗ್ಯ ಬಂಜರು ಜಮೀನನ್ನು ಭೂಹೀನ ಕೃಷಿ ಕಾರ್ಮಿಕರು ಮತ್ತು ಬಡ ರೈತರಿಗೆ 1971ರ ಕೊನೆಯ ವೇಳೆಗೆ ಹಂಚಬೇಕೆಂಬ ಸೂಚನೆಯನ್ನು ಇಲ್ಲಿ ನಡೆಯುತ್ತಿರುವ ಆಡಳಿತ ಎಐಸಿಸಿ ಇಂದು ಅಂಗೀಕರಿಸಿತು.</p>.<p>ನಿರ್ಣಯಕ್ಕೆ ಯಂಗ್ಟರ್ಕ್ ನಾಯಕ ಕೃಷ್ಣಕಾಂತರು ತಂದ ತಿದ್ದುಪಡಿಯನ್ನು ನಿರ್ಣಯ ಮಂಡಿಸಿದ ಚವಾಣರು ಒಪ್ಪಿಕೊಂಡರು. ರಾಜಕೀಯ ಹಾಗೂ ಆರ್ಥಿಕ ವಿಷಯಗಳನ್ನು ಕಾಂಗ್ರೆಸ್ ಇತಿಹಾಸ ದಲ್ಲಿಯೇ ಮೊದಲ ಬಾರಿಗೆ ಒಟ್ಟುಗೂಡಿಸಿರುವ ಈ ನಿರ್ಣಯ, ಬಲಪಂಥೀಯರ ಪ್ರತಿಗಾಮಿತ್ವ, ವಾಮಪಂಥೀಯರ ಸಾಹಸ ಗಳ ವಿರುದ್ಧ ಹೋರಾಡಲು ನಿರ್ಧರಿಸಿದೆ.</p>.<p><strong>ಅಮೆರಿಕಕ್ಕೆ ಭಾರತದ ಛೀಮಾರಿ</strong></p>.<p><strong>ವಿಶ್ವಸಂಸ್ಥೆ, ಅ. 14–</strong> ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರ ಮಾರಾಟ ಮತ್ತೆ ಆರಂಭಿಸಿ, ಆ ಪ್ರದೇಶದಲ್ಲಿ ಬಿಕ್ಕಟ್ಟು ಹಾಗೂ ಅಭದ್ರತೆ ವಿಷಮಿಸುವಂತೆ ಮಾಡಿರುವುದಕ್ಕಾಗಿ ಅಮೆರಿಕ ಸರ್ಕಾರಕ್ಕೆ ಭಾರತ ಛೀಮಾರಿ ಹಾಕಿತು.</p>.<p>ಅಂತರರಾಷ್ಟ್ರೀಯ ಭದ್ರತೆ ಹೆಚ್ಚಿಸುವ ವಿಷಯದ ಮೇಲಿನ ಚರ್ಚೆಯಲ್ಲಿ ಜನರಲ್ ಅಸೆಂಬ್ಲಿಯ ರಾಜಕೀಯ ಸಮಿತಿಯಲ್ಲಿ ನಿನ್ನೆ ಭಾಷಣ ಮಾಡಿದ ಭಾರತದ ವಿದೇಶಾಂಗ ಶಾಖೆ ಉಪಸಚಿವ ಸುರೇಂದ್ರ ಪಾಲ್ಸಿಂಗ್, ತಮ್ಮ ಭಾಷಣದ ಅಂತ್ಯದಲ್ಲಿ ಈ ವಿಷಯದ ಪ್ರಸ್ತಾಪವೆತ್ತಿ, ಸಂಕ್ಷಿಪ್ತವಾಗಿ, ಆದರೆ ಅಷ್ಟೇ ತೀಕ್ಷ್ಣವಾಗಿ ಅಮೆರಿಕವನ್ನು ಖಂಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>