<p><strong>ಭಾರತದ ಪ್ರದೇಶ ಚೀನಾಕ್ಕೆ<br />ರಷ್ಯದ ತಪ್ಪು ಭೂಪಟ: ರಾಜ್ಯಸಭೆಯಲ್ಲಿ ಗಲಭೆ, ಗೊಂದಲ, ಸಭ್ಯಾತ್ಯಾಗ</strong></p>.<p><strong>ನವದೆಹಲಿ, ಆ.6– </strong>ರಷ್ಯ, ತನ್ನ ಭೂಪಟಗಳಲ್ಲಿ ಭಾರತದ ಬಹು ಭಾಗಗಳನ್ನು ಚೀನಾಕ್ಕೆ ಸೇರಿದೆಯೆಂದು ತೋರಿಸಿ ನಡೆಸಿರುವ ‘ಭೂಪಟಾಕ್ರಮಣ’ವನ್ನು ತಡೆಗಟ್ಟುವುದರಲ್ಲಿ ಸರ್ಕಾರ ವಿಫಲವಾಗಿರುವುದರ ವಿರುದ್ಧ ಇಂದು ರಾಜ್ಯಸಭೆಯಲ್ಲಿ ಕೋಲಾಹಲ ಉಂಟಾಗಿ ಸಂಸ್ಥಾ ಕಾಂಗ್ರೆಸ್, ಸ್ವತಂತ್ರ ಮತ್ತು ಜನಸಂಘ ಸದಸ್ಯರು ಸಭಾತ್ಯಾಗ ಮಾಡಿದರು.</p>.<p>ಇಂಥ ಭೂಪಟಗಳನ್ನು ರಷ್ಯವು ಕಳೆದ ಹದಿನಾಲ್ಕು ವರ್ಷಗಳಿಂದ ಮುದ್ರಿಸುತ್ತಿದೆಯೆಂದೂ, ಅದನ್ನು ರಷ್ಯವು ಸರಿಪಡಿಸುವಂತೆ ಮಾಡುವುದರಲ್ಲಿ ಭಾರತದ ಸರ್ಕಾರ ವಿಫಲವಾಗಿದೆಯೆಂದೂ ಅವರು ಆಪಾದಿಸಿದರು.</p>.<p><strong>ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆ: ಲೋಕಸಭೆ ಸದಸ್ಯರ ಅಸಮಾಧಾನ</strong></p>.<p><strong>ನವದೆಹಲಿ, ಆ.6– </strong>ರಾಷ್ಟ್ರದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆ ಬಗ್ಗೆ ಲೋಕಸಭೆ ಇಂದು ನಲವತ್ತು ನಿಮಿಷಗಳ ಚರ್ಚೆ ನಡೆಸಿದಾಗ ಗೊಂದಲಮಯ ವಾತಾವರಣ ಉಂಟಾಯಿತು.</p>.<p>ಯೋಜನಾ ಆಯೋಗದ ಜತೆ ಸಮಾಲೋಚಿಸಿ ಸಂಪುಟ ಕಾರ್ಯಾಲಯದ ಉದ್ಯೋಗ ಕಮಿಷನರ್ ಉದ್ಯೋಗ ಕಲ್ಪಿಸುವಂತಹ ಯೋಜನೆಗಳನ್ನು ರೂಪಿಸುತ್ತಿರುವರೆಂದು ಪ್ರಶ್ನೋತ್ತರ ವೇಳೆಯಲ್ಲಿ ಕಾರ್ಮಿಕ ಸಚಿವ ಡಿ. ಸಂಜೀವಯ್ಯನವರಿತ್ತ ಉತ್ತರ ಸದಸ್ಯರಿಗೆ ಸಮಾಧಾನ ತರಲಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭಾರತದ ಪ್ರದೇಶ ಚೀನಾಕ್ಕೆ<br />ರಷ್ಯದ ತಪ್ಪು ಭೂಪಟ: ರಾಜ್ಯಸಭೆಯಲ್ಲಿ ಗಲಭೆ, ಗೊಂದಲ, ಸಭ್ಯಾತ್ಯಾಗ</strong></p>.<p><strong>ನವದೆಹಲಿ, ಆ.6– </strong>ರಷ್ಯ, ತನ್ನ ಭೂಪಟಗಳಲ್ಲಿ ಭಾರತದ ಬಹು ಭಾಗಗಳನ್ನು ಚೀನಾಕ್ಕೆ ಸೇರಿದೆಯೆಂದು ತೋರಿಸಿ ನಡೆಸಿರುವ ‘ಭೂಪಟಾಕ್ರಮಣ’ವನ್ನು ತಡೆಗಟ್ಟುವುದರಲ್ಲಿ ಸರ್ಕಾರ ವಿಫಲವಾಗಿರುವುದರ ವಿರುದ್ಧ ಇಂದು ರಾಜ್ಯಸಭೆಯಲ್ಲಿ ಕೋಲಾಹಲ ಉಂಟಾಗಿ ಸಂಸ್ಥಾ ಕಾಂಗ್ರೆಸ್, ಸ್ವತಂತ್ರ ಮತ್ತು ಜನಸಂಘ ಸದಸ್ಯರು ಸಭಾತ್ಯಾಗ ಮಾಡಿದರು.</p>.<p>ಇಂಥ ಭೂಪಟಗಳನ್ನು ರಷ್ಯವು ಕಳೆದ ಹದಿನಾಲ್ಕು ವರ್ಷಗಳಿಂದ ಮುದ್ರಿಸುತ್ತಿದೆಯೆಂದೂ, ಅದನ್ನು ರಷ್ಯವು ಸರಿಪಡಿಸುವಂತೆ ಮಾಡುವುದರಲ್ಲಿ ಭಾರತದ ಸರ್ಕಾರ ವಿಫಲವಾಗಿದೆಯೆಂದೂ ಅವರು ಆಪಾದಿಸಿದರು.</p>.<p><strong>ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆ: ಲೋಕಸಭೆ ಸದಸ್ಯರ ಅಸಮಾಧಾನ</strong></p>.<p><strong>ನವದೆಹಲಿ, ಆ.6– </strong>ರಾಷ್ಟ್ರದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆ ಬಗ್ಗೆ ಲೋಕಸಭೆ ಇಂದು ನಲವತ್ತು ನಿಮಿಷಗಳ ಚರ್ಚೆ ನಡೆಸಿದಾಗ ಗೊಂದಲಮಯ ವಾತಾವರಣ ಉಂಟಾಯಿತು.</p>.<p>ಯೋಜನಾ ಆಯೋಗದ ಜತೆ ಸಮಾಲೋಚಿಸಿ ಸಂಪುಟ ಕಾರ್ಯಾಲಯದ ಉದ್ಯೋಗ ಕಮಿಷನರ್ ಉದ್ಯೋಗ ಕಲ್ಪಿಸುವಂತಹ ಯೋಜನೆಗಳನ್ನು ರೂಪಿಸುತ್ತಿರುವರೆಂದು ಪ್ರಶ್ನೋತ್ತರ ವೇಳೆಯಲ್ಲಿ ಕಾರ್ಮಿಕ ಸಚಿವ ಡಿ. ಸಂಜೀವಯ್ಯನವರಿತ್ತ ಉತ್ತರ ಸದಸ್ಯರಿಗೆ ಸಮಾಧಾನ ತರಲಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>