‘ಗರ್ಭ ಧರಿಸಿದ್ದಾಗ ಸರ್ಕಾರಿ ಆಸ್ಪತ್ರೆಯ ವೈದ್ಯರು, ಅಂಗನವಾಡಿಯವರು ಹೇಳಿದ ಎಲ್ಲ ನಿಯಮಗಳನ್ನು ಪಾಲಿಸಿದ್ದೇನೆ. ಆದರೆ, ಸರ್ಕಾರದಿಂದ ನೀಡುವ ಧಾನ್ಯಗಳು ಎರಡು ದಿನಕ್ಕೂ ಸಾಲುತ್ತಿಲ್ಲ. ಅಕ್ಕಿ, ತೊಗರಿ ಬೇಳೆ, ಹೆಸರು ಬೇಳೆ, ಸಕ್ಕರೆ, ಬೆಲ್ಲ, ಗೋಧಿ ಎಲ್ಲವನ್ನೂ ಅರ್ಧ ಕೆ.ಜಿ ಮಾತ್ರ ಕೊಡುತ್ತಾರೆ. ಹಾಲಿನ ಪುಡಿ ಒಂದು ಪಾಕೀಟು, ಆರು ಮೊಟ್ಟೆ... ಇದು ಒಂದು ತಿಂಗಳಿಗೆ ಹೇಗೆ ಸಾಲುತ್ತದೆ? ಹೆರಿಗೆ ಸಂದರ್ಭದಲ್ಲಿ ಅನಿವಾರ್ಯ ಆಗಬಹುದು ಎಂದು ಸ್ವಲ್ಪ ಹಣ ಕೂಡಿಟ್ಟುಕೊಳ್ಳಬೇಕಾಯಿತು. ಸಮತೋಲಿತ ಆಹಾರ ಸೇವಿಸಲು ಸಾಧ್ಯವಾಗಲಿಲ್ಲ. ಹೀಗಾಗಿ, ನಮ್ಮ ಮಗಳು ಅಂಗವಿಕಲೆಯಾಗುತ್ತಾಳೇನೋ’ ಎಂದು ಕಣ್ಣೀರಿಟ್ಟರು ಶಾಹೀದಾ.