ಕನಕಗಿರಿ ತಾಲ್ಲೂಕಿನ ಕನಕಾ ಪುರ ಗ್ರಾಮದ ಯಲ್ಲಾಲಿಂಗ 2015ರಲ್ಲಿ ಊರಿನಲ್ಲಿ ಚರಂಡಿ, ರಸ್ತೆ ಹಾಗೂ ಜನತಾ ಮನೆಗಳ ಅವ್ಯವಸ್ಥೆ ಕುರಿತು ಸ್ಥಳೀಯ ಟಿವಿ ವಾಹಿನಿಗೆ ಬೈಟ್ ನೀಡಿದ್ದ. ಅದು ಎರಡು ದಿನ ಪ್ರಸಾರಗೊಂಡಿತ್ತು. ಇನ್ನಷ್ಟು ಕಾಮಗಾರಿಗಳ ಬಗ್ಗೆಯೂ ಮಾಹಿತಿ ಹಕ್ಕು ಕಾಯ್ದೆಯಡಿ ವಿವರ ಪಡೆದಿದ್ದ. ಇದು ಕೆಲ ರಾಜಕೀಯ ವ್ಯಕ್ತಿಗಳ ಮತ್ತು ಅವರ ಹಿಂಬಾಲಕರ ಸಿಟ್ಟಿಗೆ ಕಾರಣವಾ ಗಿತ್ತು. ಗಂಗಾವತಿಯಿಂದ ಗಿಣಿಗೇರಾವರೆಗೆ ಪ್ರಯಾಣಿಸಿದ್ದ ಯಲ್ಲಾಲಿಂಗ ಅವರನ್ನು ಬೈಕ್ ಮೇಲೆ ಹಿಂಬಾಲಿಸಿ ಕೊಪ್ಪಳ ರೈಲು ನಿಲ್ದಾಣದಲ್ಲಿ ಹಿಡಿದಿದ್ದರು. ಹಳಿಗಳ ಮೇಲೆ ಹೊಡೆದ ಕಾರಣ ಯಲ್ಲಾಲಿಂಗ ಅಲ್ಲಿಯೇ ಕುಸಿದು ಬಿದ್ದ. ಹಳಿಗಳ ಮೇಲೆ ಮಲಗಿಸಿದ್ದರಿಂದ ರೈಲು ಹರಿದು ದೇಹ ಎರಡು ತುಂಡಾಗಿತ್ತು. ಇದರ ಬಗ್ಗೆ ಸಿಐಡಿ ಕೂಡ ವರದಿಯಲ್ಲಿ ತಿಳಿಸಿದೆ.