<p>‘ಎಲೆಕ್ಷನ್ನಿಗೆ ನಿಂತುಕಂಡಿದ್ರಲ್ಲ ಬುಡಿ ಸಾ, ಗೆಲ್ಲದಿದ್ರೂ ಪರವಾಗಿಲ್ಲ, ಪವಿತ್ರವಾಗಿದಿರ. ನಿಮ್ಮ ಗೋರಾಟವ ಪಾರ್ಟಿ ಅರ್ಥ ಮಾಡಿಕ್ಯಬಕು!’ ಅಂತ ತುರೇಮಣೆ ಫೋನಲ್ಲಿ ಯಾರಿಗೋ ಬೋಧನೆ ಮಾಡ್ತಿದ್ರು. ‘ಇದೇನು ಸಾರ್ ಯಾರಿಗೆ ಕಿವಿ ಕಚ್ಚತಾ ಇದೀರ!’ ಅಂದೆ ನಾನು.</p>.<p>‘ಎಲೆಕ್ಷನ್ನಿಗೆ ಸುಮ್ಮನೆ ನಿಂತುಕಂಡ್ರೆ ಸಾಕು ಅಂತ ಕೋರ್ಟು ಏಳ್ಯದೆ. ಪುಣ್ಯಕೋಟಿ ಸರ್ಕಾರಕ್ಕೆ ಅಡಿಪಾಯ ಹಾಕಿದ್ದು ಅಣ್ತಮ್ಮರಾದ ಕ್ವಾಟೆ ಹಕ್ಕುರಾಯರು. ಮಂತ್ರಿ ಪದವಿಗೆ ಅಡ್ವಾನ್ಸ್ ಬುಕ್ ಮಾಡಿಕ್ಯಂಡು ರಾಜ್ಯ ಸ್ಥಾಪನೆಗೆ ಎದೆಗೆ ಎದೆ ಕೊಟ್ಟು ಹೋರಾಟ ಮಾಡಿದ ಬುಕ್ಕುರಾಯ ನಾನು. ಗೆದ್ದೋರು- ಸೋತೋರು ಅಂತ ಮಕ ನೋಡದೆ ಎಲ್ಲ ಓರಾಟಗಾರರಿಗೆ ದಿವಿನಾಗಿರೋ ಪದವಿ ಕೊಡದೇ ಇರೋದು ಯಾವ ನ್ಯಾಯ? ಮಾತಿಗೆ ತಪ್ಪಿದರೆ ಸಿಎಂ ಇದ್ಯಾರಣ್ಯರ ಮ್ಯಾಲೆ ಬುಕ್ಕು ಬರೆಯದೇಯ’ ಅಂತ ಹೆದರಿಸ್ತಾವ್ರಲ್ಲೋ ಇಸ್ವಣ್ಣಾರು!’ ಅಂತಂದ್ರು.</p>.<p>‘ಇಸ್ವಣ್ಣರ ಹಕ್ಕಿ ಶಕುನ ಇದ್ದುದ್ದೇ ಬುಡಿ ಸಾ. ಇಕ್ಕಡೆ ಲಾಬಿಗಾರರೆಲ್ಲಾ ನನಗೆ ಹೋಮು, ಬೆಳಗಾಂ ಕಂದನಿಗೆ ಜಲಸಂಪನ್ಮೂಲ, ಅವನಿಗೆ ಗ್ರಹ, ನನಗೆ ಬೆಂಗಳೂರು ಅಭಿವೃದ್ಧಿ ಅಂತ ಪಾಲು-ಪಾರೀಕತ್ತು ಮಾಡಿಕ್ಯಂಡವುರಂತೆ. ಹೈಕಮಾಂಡ್ ಹಕ್ಕು-ಬುಕ್ಕುಗಳಿಗೆ ಹಕ್ಕಿಲ್ಲ ಅಂದದಂತೆ!’ ಅಂತ ನನ್ನ ಬೇಜಾರು ಆಚೆ ಹಾಕಿದೆ.</p>.<p>‘ಪಾಪ ಸಿಎಂ ಸಯಾಬ್ರಿಗೆ ಸಂಪುಟ ವಿಸ್ತರಣೆ ಕೊರೋನಾ ವೈರಸ್ ಥರಾ ಆಗಿಬುಟ್ಟದೆ. ಬರೀ ಕೆಮ್ಮು, ಸುಸ್ತು! ಅದ ಬುಟ್ಟಾಕು, ನಿರ್ಮಲಕ್ಕಾರು ಮೂಗಿಗೆ, ಮೊಣಕೈಗೆ ತುಪ್ಪ ಹಚ್ಚಿ ಸುಸ್ತಾಗಿ<br />ಬುಟ್ರಲ್ಲಪ್ಪಾ’ ಅಂದ್ರು ತುರೇಮಣೆ.</p>.<p>‘ಅಯ್ ಬುಡಿ ಸಾ, ಉಪಾದ್ರಿಗೆ ಮಂತ್ರಕ್ಕಿಂತ ಉಗುಳೇ ಜಾಸ್ತಿ ಅಂದಂಗೆ ಸಂಬಳಕ್ಕಿಂತಾ ಟ್ಯಾಕ್ಸೇ ಜಾಸ್ತಿಯಾಗ್ಯದೆ. ಬಿಜೆಪಿ ಆಪೀಸಲ್ಲಿ ಕಸ ಗುಡಿಸಿಕ್ಯಂಡು ಪಾರ್ಟ್ಟೈಂ ಕೆಲಸ ಮಾಡಮು ಅಂತಿದೀನಿ ಸಾ’ ನನ್ನ ವಿಚಾರ ಹೇಳಿದೆ.</p>.<p>‘ಲೇ ಬ್ಯಾಡ ಕನೋ, ಅದಕ್ಕೇ ಈಗ ಕಿತ್ತಾಟ ನಡಿತಾ ಅದೆ. ಆಮೇಲೆ ಮಕುಟಳ್ಳಿಯೋರು ಬಂದು ಪರಕೆ ಕಿತ್ತುಗತ್ತರೆ’ ಅಂತ ತುರೇಮಣೆ ಅಂದ್ರು.</p>.<p>ಕಸ ಗುಡಿಸಕ್ಕೂ ಬೆಲೆ ಬಂತಲ್ಲಾ, ಅಚ್ಛೇ ದಿನ್ ಅಂದ್ರೆ ಇದೇನಾ!</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಎಲೆಕ್ಷನ್ನಿಗೆ ನಿಂತುಕಂಡಿದ್ರಲ್ಲ ಬುಡಿ ಸಾ, ಗೆಲ್ಲದಿದ್ರೂ ಪರವಾಗಿಲ್ಲ, ಪವಿತ್ರವಾಗಿದಿರ. ನಿಮ್ಮ ಗೋರಾಟವ ಪಾರ್ಟಿ ಅರ್ಥ ಮಾಡಿಕ್ಯಬಕು!’ ಅಂತ ತುರೇಮಣೆ ಫೋನಲ್ಲಿ ಯಾರಿಗೋ ಬೋಧನೆ ಮಾಡ್ತಿದ್ರು. ‘ಇದೇನು ಸಾರ್ ಯಾರಿಗೆ ಕಿವಿ ಕಚ್ಚತಾ ಇದೀರ!’ ಅಂದೆ ನಾನು.</p>.<p>‘ಎಲೆಕ್ಷನ್ನಿಗೆ ಸುಮ್ಮನೆ ನಿಂತುಕಂಡ್ರೆ ಸಾಕು ಅಂತ ಕೋರ್ಟು ಏಳ್ಯದೆ. ಪುಣ್ಯಕೋಟಿ ಸರ್ಕಾರಕ್ಕೆ ಅಡಿಪಾಯ ಹಾಕಿದ್ದು ಅಣ್ತಮ್ಮರಾದ ಕ್ವಾಟೆ ಹಕ್ಕುರಾಯರು. ಮಂತ್ರಿ ಪದವಿಗೆ ಅಡ್ವಾನ್ಸ್ ಬುಕ್ ಮಾಡಿಕ್ಯಂಡು ರಾಜ್ಯ ಸ್ಥಾಪನೆಗೆ ಎದೆಗೆ ಎದೆ ಕೊಟ್ಟು ಹೋರಾಟ ಮಾಡಿದ ಬುಕ್ಕುರಾಯ ನಾನು. ಗೆದ್ದೋರು- ಸೋತೋರು ಅಂತ ಮಕ ನೋಡದೆ ಎಲ್ಲ ಓರಾಟಗಾರರಿಗೆ ದಿವಿನಾಗಿರೋ ಪದವಿ ಕೊಡದೇ ಇರೋದು ಯಾವ ನ್ಯಾಯ? ಮಾತಿಗೆ ತಪ್ಪಿದರೆ ಸಿಎಂ ಇದ್ಯಾರಣ್ಯರ ಮ್ಯಾಲೆ ಬುಕ್ಕು ಬರೆಯದೇಯ’ ಅಂತ ಹೆದರಿಸ್ತಾವ್ರಲ್ಲೋ ಇಸ್ವಣ್ಣಾರು!’ ಅಂತಂದ್ರು.</p>.<p>‘ಇಸ್ವಣ್ಣರ ಹಕ್ಕಿ ಶಕುನ ಇದ್ದುದ್ದೇ ಬುಡಿ ಸಾ. ಇಕ್ಕಡೆ ಲಾಬಿಗಾರರೆಲ್ಲಾ ನನಗೆ ಹೋಮು, ಬೆಳಗಾಂ ಕಂದನಿಗೆ ಜಲಸಂಪನ್ಮೂಲ, ಅವನಿಗೆ ಗ್ರಹ, ನನಗೆ ಬೆಂಗಳೂರು ಅಭಿವೃದ್ಧಿ ಅಂತ ಪಾಲು-ಪಾರೀಕತ್ತು ಮಾಡಿಕ್ಯಂಡವುರಂತೆ. ಹೈಕಮಾಂಡ್ ಹಕ್ಕು-ಬುಕ್ಕುಗಳಿಗೆ ಹಕ್ಕಿಲ್ಲ ಅಂದದಂತೆ!’ ಅಂತ ನನ್ನ ಬೇಜಾರು ಆಚೆ ಹಾಕಿದೆ.</p>.<p>‘ಪಾಪ ಸಿಎಂ ಸಯಾಬ್ರಿಗೆ ಸಂಪುಟ ವಿಸ್ತರಣೆ ಕೊರೋನಾ ವೈರಸ್ ಥರಾ ಆಗಿಬುಟ್ಟದೆ. ಬರೀ ಕೆಮ್ಮು, ಸುಸ್ತು! ಅದ ಬುಟ್ಟಾಕು, ನಿರ್ಮಲಕ್ಕಾರು ಮೂಗಿಗೆ, ಮೊಣಕೈಗೆ ತುಪ್ಪ ಹಚ್ಚಿ ಸುಸ್ತಾಗಿ<br />ಬುಟ್ರಲ್ಲಪ್ಪಾ’ ಅಂದ್ರು ತುರೇಮಣೆ.</p>.<p>‘ಅಯ್ ಬುಡಿ ಸಾ, ಉಪಾದ್ರಿಗೆ ಮಂತ್ರಕ್ಕಿಂತ ಉಗುಳೇ ಜಾಸ್ತಿ ಅಂದಂಗೆ ಸಂಬಳಕ್ಕಿಂತಾ ಟ್ಯಾಕ್ಸೇ ಜಾಸ್ತಿಯಾಗ್ಯದೆ. ಬಿಜೆಪಿ ಆಪೀಸಲ್ಲಿ ಕಸ ಗುಡಿಸಿಕ್ಯಂಡು ಪಾರ್ಟ್ಟೈಂ ಕೆಲಸ ಮಾಡಮು ಅಂತಿದೀನಿ ಸಾ’ ನನ್ನ ವಿಚಾರ ಹೇಳಿದೆ.</p>.<p>‘ಲೇ ಬ್ಯಾಡ ಕನೋ, ಅದಕ್ಕೇ ಈಗ ಕಿತ್ತಾಟ ನಡಿತಾ ಅದೆ. ಆಮೇಲೆ ಮಕುಟಳ್ಳಿಯೋರು ಬಂದು ಪರಕೆ ಕಿತ್ತುಗತ್ತರೆ’ ಅಂತ ತುರೇಮಣೆ ಅಂದ್ರು.</p>.<p>ಕಸ ಗುಡಿಸಕ್ಕೂ ಬೆಲೆ ಬಂತಲ್ಲಾ, ಅಚ್ಛೇ ದಿನ್ ಅಂದ್ರೆ ಇದೇನಾ!</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>