<p>ಬೃಹತ್ ರಾಷ್ಟ್ರವಾದ ಭಾರತ 62 ವರ್ಷಗಳ ಹಿಂದೆ ಸರ್ವತಂತ್ರ ಸ್ವತಂತ್ರ ಗಣರಾಜ್ಯವಾಗಿ ತನ್ನದೇ ಆದ ಸಂವಿಧಾನವನ್ನು ರಚಿಸಿಕೊಂಡು ಜನವರಿ 26 2012ಕ್ಕೆ 62 ವರ್ಷಗಳನ್ನು ಪೂರೈಸಿ, 63ನೇ ವರ್ಷಕ್ಕೆ ಕಾಲಿಡುತ್ತಿದೆ. ಈ ಸಂದರ್ಭದಲ್ಲಿ ಸಂವಿಧಾನದ ರಚನೆ, ಸ್ವರೂಪ ಮತ್ತಿತರ ಅಂಶಗಳ ಬಗ್ಗೆ ಜನತೆ ನೆನಪು ಮಾಡಿಕೊಳ್ಳುವುದು ಕುತೂಹಲಕಾರಿ.<br /> <br /> ಸುಮಾರು ಎರಡು ಶತಮಾನಗಳ ಕಾಲ ಭಾರತವನ್ನಾಳಿದ ಬ್ರಿಟಿಷರು ಭಾರತದಲ್ಲಿ ತಮ್ಮ ಆಳ್ವಿಕೆಯನ್ನು ಕೊನೆಗೊಳಿಸಲು 1947ರಲ್ಲಿ ಭಾರತದ ಸ್ವಾತಂತ್ರ ಶಾಸನವನ್ನು ರೂಪಿಸಿದರು. <br /> <br /> ಅದರ ಪ್ರಕಾರ ಭಾರತ ಮತ್ತು ಪಾಕಿಸ್ತಾನ ವಿಭಜನೆಯಾಗಿ ತಮ್ಮದೇ ಆದ ಸ್ವತಂತ್ರ ಸಂವಿಧಾನವನ್ನು ರಚಿಸಿಕೊಳ್ಳಲು ಅವಕಾಶ ಕಲ್ಪಿಸಲಾಯಿತು. ಆದರೆ, ಭಾರತ ಈ ಕಾಯ್ದೆ ಬರುವ ಮೊದಲೇ ಅಂದರೆ 1946ರಲ್ಲಿಯೇ ತನ್ನ ಸಂವಿಧಾನ ರಚನಾ ಸಮಿತಿಯನ್ನು ರಚನೆ ಮಾಡಿಕೊಂಡಿತು.<br /> <br /> 1946ರಲ್ಲಿ ಬ್ರಿಟಿಷ್ ಕ್ಯಾಬಿನೆಟ್ ಮಿಷನ್ ಪ್ಲಾನ್ ಪ್ರಕಾರ ದೇಶಕ್ಕೆ ಪ್ರತ್ಯೇಕ ಸಂವಿಧಾನವನ್ನು ರೂಪಿಸುವ ಈ ಸಮಿತಿಯ ಮೊದಲ ಸಮಾವೇಶ 1946 ಡಿಸೆಂಬರ್ 9ರಂದು, ಎರಡನೇ ಸಮಾವೇಶ 1947 ಆಗಸ್ಟ್ 14ರಂದು ನಡೆದವು. 1974ರ ನಂತರ ಸಂವಿಧಾನ ರಚನೆಯ ಮೂರು ವರ್ಷಗಳ ಅವಧಿಯಲ್ಲಿ ಭಾರತ ಅನೇಕ ಅಡೆತಡೆಗಳನ್ನು ಎದುರಿಸಬೇಕಾಯಿತು. <br /> <br /> ಬ್ರಿಟಿಷ್ ಕ್ಯಾಬಿನೆಟ್ ಮಿಷನ್ ಭಾರತದ ರಾಜಕೀಯ ಪಕ್ಷಗಳ ಸಹಕಾರದೊಂದಿಗೆ ರಚಿಸಿದ ಸಂವಿಧಾನ ರಚನಾ ಸಮಿತಿಗೆ ಪರೋಕ್ಷ ಚುನಾವಣೆಯ ಮುಖಾಂತರ ಸದಸ್ಯರನ್ನು ಭಾರತದ ವಿವಿಧ ಪ್ರಾಂತ್ಯಗಳ ಶಾಸನ ಸಭೆಗಳ ಪ್ರತಿನಿಧಿಗಳು ಆಯ್ಕೆ ಮಾಡಿದರು.<br /> <br /> ಬ್ರಿಟಿಷ್ ಭಾರತದ ಪ್ರಾಂತ್ಯಗಳಿಗೆ 296 ಸ್ಥಾನಗಳನ್ನು, ಸಂಸ್ಥಾನಿಕ ಪ್ರತಿನಿಧಿಗಳಿಗೆ 93 ಸ್ಥಾನಗಳನ್ನು ಮೀಸಲಿಡಲಾಯಿತು. ಒಟ್ಟು 389 ಸದಸ್ಯರನ್ನೊಳಗೊಂಡ ಸಂವಿಧಾನ ಸಮಿತಿ ರಚನೆಯಾಯಿತು. <br /> <br /> ಡಾ.ರಾಜೇಂದ್ರ ಪ್ರಸಾದ್ ಅವರನ್ನು ಸಮಿತಿಯ ಅಧ್ಯಕ್ಷರನ್ನಾಗಿ, ಟಿ.ಟಿ. ಕೃಷ್ಣಮಾಚಾರಿ ಮತ್ತು ಎಚ್.ಸಿ.ಮುಖರ್ಜಿ ಅವರನ್ನು ಉಪಾಧ್ಯಕ್ಷರನ್ನಾಗಿ, ಸರ್ದಾರ ವಲ್ಲಭ ಭಾಯಿ ಪಟೇಲರನ್ನು ಮೂಲಭೂತ ಹಕ್ಕುಗಳ ಸಲಹಾ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. <br /> <br /> ಅಂಬೇಡ್ಕರ್ ಮತ್ತು ಕರಡು ಸಮಿತಿ: ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಸಂವಿಧಾನ ರಚನಾ ಸಮಿತಿಗೆ ಪಶ್ಚಿಮ ಬಂಗಾಳದಿಂದ ಆಯ್ಕೆ ಮಾಡಲಾಯಿತು. ಕರಡು ಸಮಿತಿಯ ಸಲಹೆಗಾರರು ಬಿ.ಎನ್.ರಾವ್. ಕರಡು ಸಿದ್ಧಪಡಿಸಲು ಡಾ.ಬಿ.ಆರ್.ಅಂಬೇಡ್ಕರ್ ಅವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ಆಗಸ್ಟ್ 29, 1947ರಲ್ಲಿ ರಚಿಸಲಾಯಿತು.<br /> <br /> ಮಹಾನ್ ಮೇಧಾವಿಯಾಗಿದ್ದ ಅಂಬೇಡ್ಕರ್ ಸಂವಿಧಾನದ ಕರಡು ಪ್ರತಿ ಸಿದ್ಧಪಡಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದರು. ಹಲವು ದೇಶಗಳ ಸಂವಿಧಾನವನ್ನು ಅಧ್ಯಯನ ಮಾಡಿ ಕರಡು ಸಂವಿಧಾನವನ್ನು ಸಿದ್ಧಪಡಿಸಿದರು, ಹಾಗಾಗಿ ಅವರನ್ನು ಡಾ.ಎಂ.ವಿ. ಪೈಲಿ ಅವರು `ಸಂವಿಧಾನದ ಜನಕ~ ಎಂದು ಕರೆದಿರುವುದು ಸಮಂಜಸವಾಗಿದೆ.<br /> <br /> ಅವರ ಜೊತೆಗೆ ಸುಚೇತಾ ಕೃಪಲಾನಿ, ವಿಜಯಲಕ್ಷ್ಮಿ ಪಂಡಿತ್, ಸರೋಜಿನಿ ನಾಯ್ಡು ಮತ್ತಿತರರು ಸೇವೆ ಸಲ್ಲಿಸಿದರು. ಸುಮಾರು ಎರಡು ವರ್ಷ ಹನ್ನೊಂದು ತಿಂಗಳು ಹದಿನೆಂಟು ದಿನಗಳ ನಿರಂತರ ಶ್ರಮದಿಂದ ಸಂವಿಧಾನದ ಪ್ರಾಥಮಿಕ ಕರಡನ್ನು ಸಿದ್ಧಪಡಿಸಲಾಯಿತು. <br /> <br /> ಈ ಮೂರು ವರ್ಷಗಳ ಅವಧಿಯಲ್ಲಿ 6.4 ಕೋಟಿ ಹಣ ಇದಕ್ಕೆ ವೆಚ್ಚವಾಯಿತು. ಸುಮಾರು 114 ದಿನಗಳ ಕಾಲ ಕರಡು ಸಂವಿಧಾನದ ಬಗ್ಗೆ ಚರ್ಚೆ ನಡೆದು ನವೆಂಬರ್ 26, 1949ರಂದು ಅಂಗೀಕರಿಸಲಾಯಿತು. <br /> <br /> 395 ವಿಧಿಗಳು, 8 ಅನುಸೂಚಿಗಳು, 22 ಅಧ್ಯಾಯಗಳಿಂದ ಕೂಡಿದ ಸಂವಿಧಾನವು ಜನವರಿ 26, 1950ರಂದು ಜಾರಿಗೆ ಬಂದಿತು. ಸಂವಿಧಾನ ಅಂಗೀಕರಿಸುವ ಸಂದರ್ಭದಲ್ಲಿ ಡಾ. ಅಂಬೇಡ್ಕರ್ ದೇಶದ ಜನತೆಗೆ ಒಂದು ಸಂದೇಶ ಸಾರಿದರು: <br /> <br /> `ಇಂದು ನಮ್ಮ ದೇಶಕ್ಕೆ ಸಂಪೂರ್ಣ ಸ್ವಾತಂತ್ರ್ಯ ಬಂದಿದೆ, ಗಣರಾಜ್ಯ ಸ್ಥಾಪನೆ ಆಗುತ್ತದೆ. ಕೆಲವರು ಸಂವಿಧಾನ ಒಳ್ಳೆಯದು ಎನ್ನುತ್ತಾರೆ, ಇನ್ನೂ ಕೆಲವರು ಒಳ್ಳೆಯದಲ್ಲ ಎನ್ನುತ್ತಾರೆ. ಒಂದು ಸಂವಿಧಾನ ಒಳ್ಳೆಯದು ಅಥವಾ ಕೆಟ್ಟದು ಆಗುವುದು, ಅದರಲ್ಲಿ ಏನು ಬರೆದಿದ್ದಾರೆ ಎನ್ನುವುದರಿಂದಲ್ಲ. <br /> <br /> ಅದು ಒಳ್ಳೆಯದು, ಕೆಟ್ಟದು ಆಗುವುದು ಅದನ್ನು ಆಚರಣೆಯಲ್ಲಿ ತರುವ ಜನರಿಂದ. ಅವರು ಒಳ್ಳೆಯವರಾದರೆ ಒಳ್ಳೆಯ ಸಂವಿಧಾನ, ಕೆಟ್ಟವರಾದರೆ ಕೆಟ್ಟ ಸಂವಿಧಾನ~ ಎಂಬುದು ಅವರ ಸಂದೇಶದ ಸಾರವಾಗಿತ್ತು.<br /> <br /> ವಿವಿಧ ರಾಷ್ಟ್ರಗಳ ಸಂವಿಧಾನದಿಂದ ಎರವಲು ಪಡೆದ ಅಂಶಗಳು ಹೀಗಿವೆ: ಮೂಲಭೂತ ಹಕ್ಕುಗಳು (ಅಮೆರಿಕಾ ಸಂವಿಧಾನ), ಸಂಸದೀಯ ಸರ್ಕಾರ ಪದ್ಧತಿ (ಇಂಗ್ಲೆಂಡ್), ರಾಜ್ಯ ನಿರ್ದೇಶಕ ತತ್ವಗಳು (ಐರ್ಲೆಂಡ್), ಮೂಲಭೂತ ಕರ್ತವ್ಯಗಳು (ರಷ್ಯ) ಮತ್ತು ಕೇಂದ್ರ ಸರ್ಕಾರ ವಿಭಜನೆ (ಕೆನಡಾ).<br /> <br /> 1949 ರಲ್ಲಿ ಅಂಬೇಡ್ಕರ್ ಅವರು ತಮ್ಮ ಕೊನೆಯ ಭಾಷಣದಲ್ಲಿ ಮತ್ತೊಂದು ಎಚ್ಚರಿಕೆಯ ಮಾತನ್ನು ಹೇಳಿದ್ದರು: `ಬಹುಕಾಲದಿಂದ ನಾವು ಸ್ವತಂತ್ರರಾಗಿದ್ದೆವು. ಈಗ ಸ್ವಾತಂತ್ರ್ಯ ಪಡೆದಿದ್ದೇವೆ. ನನಗಿರುವ ಅಂಜಿಕೆ ಮತ್ತು ಸಂದೇಹ ಏನೆಂದರೆ ಈ ಸ್ವಾತಂತ್ರ್ಯವನ್ನು ನಾವು ಉಳಿಸಿಕೊಳುತ್ತೇವೆಯೇ?<br /> <br /> ನಾವು ಈ ದೇಶದಲ್ಲಿರುವ ಜಾತಿ, ಮತ, ಪಂಥ ಅಸಮಾನತೆಯನ್ನು ತೊಲಗಿಸದಿದ್ದರೆ ಅನೈಕ್ಯತೆ ಉಂಟಾಗಿ ಮತ್ತೆ ನಾವು ದಾಸ್ಯದಲ್ಲಿ ಬಿದ್ದು ಹೋದೇವು. ಅಂತಹ ಕಾಲ ಬಾರದಿರಲಿ ಎಂದು ನಾನು ಆಶಿಸುತ್ತೇನೆ~.<br /> <br /> ಇಂದು ಪ್ರತಿಯೊಬ್ಬ ಭಾರತೀಯ ವಿಚಾರವಂತ ಪ್ರಜೆ ನಮ್ಮ ದೇಶದ ಬಗ್ಗೆ ಚಿಂತಿಸಿ ಗಣರಾಜ್ಯದ ರಚನೆ ಮತ್ತು ರಚನೆಯಲ್ಲಿ ಶ್ರಮ ವಹಿಸಿದ ಆದರ್ಶ ವ್ಯಕ್ತಿಗಳ ತತ್ವ, ನಿಷ್ಠೆಗಳ ಬಗ್ಗೆ ಸಂವಿಧಾನದಲ್ಲಿ ಅಳವಡಿಸಿರುವ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಚಿಂತಿಸಬೇಕಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೃಹತ್ ರಾಷ್ಟ್ರವಾದ ಭಾರತ 62 ವರ್ಷಗಳ ಹಿಂದೆ ಸರ್ವತಂತ್ರ ಸ್ವತಂತ್ರ ಗಣರಾಜ್ಯವಾಗಿ ತನ್ನದೇ ಆದ ಸಂವಿಧಾನವನ್ನು ರಚಿಸಿಕೊಂಡು ಜನವರಿ 26 2012ಕ್ಕೆ 62 ವರ್ಷಗಳನ್ನು ಪೂರೈಸಿ, 63ನೇ ವರ್ಷಕ್ಕೆ ಕಾಲಿಡುತ್ತಿದೆ. ಈ ಸಂದರ್ಭದಲ್ಲಿ ಸಂವಿಧಾನದ ರಚನೆ, ಸ್ವರೂಪ ಮತ್ತಿತರ ಅಂಶಗಳ ಬಗ್ಗೆ ಜನತೆ ನೆನಪು ಮಾಡಿಕೊಳ್ಳುವುದು ಕುತೂಹಲಕಾರಿ.<br /> <br /> ಸುಮಾರು ಎರಡು ಶತಮಾನಗಳ ಕಾಲ ಭಾರತವನ್ನಾಳಿದ ಬ್ರಿಟಿಷರು ಭಾರತದಲ್ಲಿ ತಮ್ಮ ಆಳ್ವಿಕೆಯನ್ನು ಕೊನೆಗೊಳಿಸಲು 1947ರಲ್ಲಿ ಭಾರತದ ಸ್ವಾತಂತ್ರ ಶಾಸನವನ್ನು ರೂಪಿಸಿದರು. <br /> <br /> ಅದರ ಪ್ರಕಾರ ಭಾರತ ಮತ್ತು ಪಾಕಿಸ್ತಾನ ವಿಭಜನೆಯಾಗಿ ತಮ್ಮದೇ ಆದ ಸ್ವತಂತ್ರ ಸಂವಿಧಾನವನ್ನು ರಚಿಸಿಕೊಳ್ಳಲು ಅವಕಾಶ ಕಲ್ಪಿಸಲಾಯಿತು. ಆದರೆ, ಭಾರತ ಈ ಕಾಯ್ದೆ ಬರುವ ಮೊದಲೇ ಅಂದರೆ 1946ರಲ್ಲಿಯೇ ತನ್ನ ಸಂವಿಧಾನ ರಚನಾ ಸಮಿತಿಯನ್ನು ರಚನೆ ಮಾಡಿಕೊಂಡಿತು.<br /> <br /> 1946ರಲ್ಲಿ ಬ್ರಿಟಿಷ್ ಕ್ಯಾಬಿನೆಟ್ ಮಿಷನ್ ಪ್ಲಾನ್ ಪ್ರಕಾರ ದೇಶಕ್ಕೆ ಪ್ರತ್ಯೇಕ ಸಂವಿಧಾನವನ್ನು ರೂಪಿಸುವ ಈ ಸಮಿತಿಯ ಮೊದಲ ಸಮಾವೇಶ 1946 ಡಿಸೆಂಬರ್ 9ರಂದು, ಎರಡನೇ ಸಮಾವೇಶ 1947 ಆಗಸ್ಟ್ 14ರಂದು ನಡೆದವು. 1974ರ ನಂತರ ಸಂವಿಧಾನ ರಚನೆಯ ಮೂರು ವರ್ಷಗಳ ಅವಧಿಯಲ್ಲಿ ಭಾರತ ಅನೇಕ ಅಡೆತಡೆಗಳನ್ನು ಎದುರಿಸಬೇಕಾಯಿತು. <br /> <br /> ಬ್ರಿಟಿಷ್ ಕ್ಯಾಬಿನೆಟ್ ಮಿಷನ್ ಭಾರತದ ರಾಜಕೀಯ ಪಕ್ಷಗಳ ಸಹಕಾರದೊಂದಿಗೆ ರಚಿಸಿದ ಸಂವಿಧಾನ ರಚನಾ ಸಮಿತಿಗೆ ಪರೋಕ್ಷ ಚುನಾವಣೆಯ ಮುಖಾಂತರ ಸದಸ್ಯರನ್ನು ಭಾರತದ ವಿವಿಧ ಪ್ರಾಂತ್ಯಗಳ ಶಾಸನ ಸಭೆಗಳ ಪ್ರತಿನಿಧಿಗಳು ಆಯ್ಕೆ ಮಾಡಿದರು.<br /> <br /> ಬ್ರಿಟಿಷ್ ಭಾರತದ ಪ್ರಾಂತ್ಯಗಳಿಗೆ 296 ಸ್ಥಾನಗಳನ್ನು, ಸಂಸ್ಥಾನಿಕ ಪ್ರತಿನಿಧಿಗಳಿಗೆ 93 ಸ್ಥಾನಗಳನ್ನು ಮೀಸಲಿಡಲಾಯಿತು. ಒಟ್ಟು 389 ಸದಸ್ಯರನ್ನೊಳಗೊಂಡ ಸಂವಿಧಾನ ಸಮಿತಿ ರಚನೆಯಾಯಿತು. <br /> <br /> ಡಾ.ರಾಜೇಂದ್ರ ಪ್ರಸಾದ್ ಅವರನ್ನು ಸಮಿತಿಯ ಅಧ್ಯಕ್ಷರನ್ನಾಗಿ, ಟಿ.ಟಿ. ಕೃಷ್ಣಮಾಚಾರಿ ಮತ್ತು ಎಚ್.ಸಿ.ಮುಖರ್ಜಿ ಅವರನ್ನು ಉಪಾಧ್ಯಕ್ಷರನ್ನಾಗಿ, ಸರ್ದಾರ ವಲ್ಲಭ ಭಾಯಿ ಪಟೇಲರನ್ನು ಮೂಲಭೂತ ಹಕ್ಕುಗಳ ಸಲಹಾ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. <br /> <br /> ಅಂಬೇಡ್ಕರ್ ಮತ್ತು ಕರಡು ಸಮಿತಿ: ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಸಂವಿಧಾನ ರಚನಾ ಸಮಿತಿಗೆ ಪಶ್ಚಿಮ ಬಂಗಾಳದಿಂದ ಆಯ್ಕೆ ಮಾಡಲಾಯಿತು. ಕರಡು ಸಮಿತಿಯ ಸಲಹೆಗಾರರು ಬಿ.ಎನ್.ರಾವ್. ಕರಡು ಸಿದ್ಧಪಡಿಸಲು ಡಾ.ಬಿ.ಆರ್.ಅಂಬೇಡ್ಕರ್ ಅವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ಆಗಸ್ಟ್ 29, 1947ರಲ್ಲಿ ರಚಿಸಲಾಯಿತು.<br /> <br /> ಮಹಾನ್ ಮೇಧಾವಿಯಾಗಿದ್ದ ಅಂಬೇಡ್ಕರ್ ಸಂವಿಧಾನದ ಕರಡು ಪ್ರತಿ ಸಿದ್ಧಪಡಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದರು. ಹಲವು ದೇಶಗಳ ಸಂವಿಧಾನವನ್ನು ಅಧ್ಯಯನ ಮಾಡಿ ಕರಡು ಸಂವಿಧಾನವನ್ನು ಸಿದ್ಧಪಡಿಸಿದರು, ಹಾಗಾಗಿ ಅವರನ್ನು ಡಾ.ಎಂ.ವಿ. ಪೈಲಿ ಅವರು `ಸಂವಿಧಾನದ ಜನಕ~ ಎಂದು ಕರೆದಿರುವುದು ಸಮಂಜಸವಾಗಿದೆ.<br /> <br /> ಅವರ ಜೊತೆಗೆ ಸುಚೇತಾ ಕೃಪಲಾನಿ, ವಿಜಯಲಕ್ಷ್ಮಿ ಪಂಡಿತ್, ಸರೋಜಿನಿ ನಾಯ್ಡು ಮತ್ತಿತರರು ಸೇವೆ ಸಲ್ಲಿಸಿದರು. ಸುಮಾರು ಎರಡು ವರ್ಷ ಹನ್ನೊಂದು ತಿಂಗಳು ಹದಿನೆಂಟು ದಿನಗಳ ನಿರಂತರ ಶ್ರಮದಿಂದ ಸಂವಿಧಾನದ ಪ್ರಾಥಮಿಕ ಕರಡನ್ನು ಸಿದ್ಧಪಡಿಸಲಾಯಿತು. <br /> <br /> ಈ ಮೂರು ವರ್ಷಗಳ ಅವಧಿಯಲ್ಲಿ 6.4 ಕೋಟಿ ಹಣ ಇದಕ್ಕೆ ವೆಚ್ಚವಾಯಿತು. ಸುಮಾರು 114 ದಿನಗಳ ಕಾಲ ಕರಡು ಸಂವಿಧಾನದ ಬಗ್ಗೆ ಚರ್ಚೆ ನಡೆದು ನವೆಂಬರ್ 26, 1949ರಂದು ಅಂಗೀಕರಿಸಲಾಯಿತು. <br /> <br /> 395 ವಿಧಿಗಳು, 8 ಅನುಸೂಚಿಗಳು, 22 ಅಧ್ಯಾಯಗಳಿಂದ ಕೂಡಿದ ಸಂವಿಧಾನವು ಜನವರಿ 26, 1950ರಂದು ಜಾರಿಗೆ ಬಂದಿತು. ಸಂವಿಧಾನ ಅಂಗೀಕರಿಸುವ ಸಂದರ್ಭದಲ್ಲಿ ಡಾ. ಅಂಬೇಡ್ಕರ್ ದೇಶದ ಜನತೆಗೆ ಒಂದು ಸಂದೇಶ ಸಾರಿದರು: <br /> <br /> `ಇಂದು ನಮ್ಮ ದೇಶಕ್ಕೆ ಸಂಪೂರ್ಣ ಸ್ವಾತಂತ್ರ್ಯ ಬಂದಿದೆ, ಗಣರಾಜ್ಯ ಸ್ಥಾಪನೆ ಆಗುತ್ತದೆ. ಕೆಲವರು ಸಂವಿಧಾನ ಒಳ್ಳೆಯದು ಎನ್ನುತ್ತಾರೆ, ಇನ್ನೂ ಕೆಲವರು ಒಳ್ಳೆಯದಲ್ಲ ಎನ್ನುತ್ತಾರೆ. ಒಂದು ಸಂವಿಧಾನ ಒಳ್ಳೆಯದು ಅಥವಾ ಕೆಟ್ಟದು ಆಗುವುದು, ಅದರಲ್ಲಿ ಏನು ಬರೆದಿದ್ದಾರೆ ಎನ್ನುವುದರಿಂದಲ್ಲ. <br /> <br /> ಅದು ಒಳ್ಳೆಯದು, ಕೆಟ್ಟದು ಆಗುವುದು ಅದನ್ನು ಆಚರಣೆಯಲ್ಲಿ ತರುವ ಜನರಿಂದ. ಅವರು ಒಳ್ಳೆಯವರಾದರೆ ಒಳ್ಳೆಯ ಸಂವಿಧಾನ, ಕೆಟ್ಟವರಾದರೆ ಕೆಟ್ಟ ಸಂವಿಧಾನ~ ಎಂಬುದು ಅವರ ಸಂದೇಶದ ಸಾರವಾಗಿತ್ತು.<br /> <br /> ವಿವಿಧ ರಾಷ್ಟ್ರಗಳ ಸಂವಿಧಾನದಿಂದ ಎರವಲು ಪಡೆದ ಅಂಶಗಳು ಹೀಗಿವೆ: ಮೂಲಭೂತ ಹಕ್ಕುಗಳು (ಅಮೆರಿಕಾ ಸಂವಿಧಾನ), ಸಂಸದೀಯ ಸರ್ಕಾರ ಪದ್ಧತಿ (ಇಂಗ್ಲೆಂಡ್), ರಾಜ್ಯ ನಿರ್ದೇಶಕ ತತ್ವಗಳು (ಐರ್ಲೆಂಡ್), ಮೂಲಭೂತ ಕರ್ತವ್ಯಗಳು (ರಷ್ಯ) ಮತ್ತು ಕೇಂದ್ರ ಸರ್ಕಾರ ವಿಭಜನೆ (ಕೆನಡಾ).<br /> <br /> 1949 ರಲ್ಲಿ ಅಂಬೇಡ್ಕರ್ ಅವರು ತಮ್ಮ ಕೊನೆಯ ಭಾಷಣದಲ್ಲಿ ಮತ್ತೊಂದು ಎಚ್ಚರಿಕೆಯ ಮಾತನ್ನು ಹೇಳಿದ್ದರು: `ಬಹುಕಾಲದಿಂದ ನಾವು ಸ್ವತಂತ್ರರಾಗಿದ್ದೆವು. ಈಗ ಸ್ವಾತಂತ್ರ್ಯ ಪಡೆದಿದ್ದೇವೆ. ನನಗಿರುವ ಅಂಜಿಕೆ ಮತ್ತು ಸಂದೇಹ ಏನೆಂದರೆ ಈ ಸ್ವಾತಂತ್ರ್ಯವನ್ನು ನಾವು ಉಳಿಸಿಕೊಳುತ್ತೇವೆಯೇ?<br /> <br /> ನಾವು ಈ ದೇಶದಲ್ಲಿರುವ ಜಾತಿ, ಮತ, ಪಂಥ ಅಸಮಾನತೆಯನ್ನು ತೊಲಗಿಸದಿದ್ದರೆ ಅನೈಕ್ಯತೆ ಉಂಟಾಗಿ ಮತ್ತೆ ನಾವು ದಾಸ್ಯದಲ್ಲಿ ಬಿದ್ದು ಹೋದೇವು. ಅಂತಹ ಕಾಲ ಬಾರದಿರಲಿ ಎಂದು ನಾನು ಆಶಿಸುತ್ತೇನೆ~.<br /> <br /> ಇಂದು ಪ್ರತಿಯೊಬ್ಬ ಭಾರತೀಯ ವಿಚಾರವಂತ ಪ್ರಜೆ ನಮ್ಮ ದೇಶದ ಬಗ್ಗೆ ಚಿಂತಿಸಿ ಗಣರಾಜ್ಯದ ರಚನೆ ಮತ್ತು ರಚನೆಯಲ್ಲಿ ಶ್ರಮ ವಹಿಸಿದ ಆದರ್ಶ ವ್ಯಕ್ತಿಗಳ ತತ್ವ, ನಿಷ್ಠೆಗಳ ಬಗ್ಗೆ ಸಂವಿಧಾನದಲ್ಲಿ ಅಳವಡಿಸಿರುವ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಚಿಂತಿಸಬೇಕಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>