ಭಕ್ತಿಗೀತೆ, ಸಂಪ್ರದಾಯದ ಹಾಡು, ಪ್ರದೇಶ ಸಮಾಚಾರ, ವಾರ್ತೆಗಳು, ಚಿತ್ರಗೀತೆ, ಕೃಷಿರಂಗ, ಕೃಷಿವಾರ್ತೆ, ಭಾವಸಂಗಮ, ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ರಾತ್ರಿ ಮಲಗುವ ವೇಳೆಗೆ ನಾಟಕ... ಹೀಗೆ ಆಯಾ ಸಮಯ, ಸಂದರ್ಭಕ್ಕೆ ತಕ್ಕಂಥ ಕಾರ್ಯಕ್ರಮಗಳನ್ನು ಅಂದಿನ ಆಕಾಶವಾಣಿ ಬಿತ್ತರಿಸುತ್ತಿತ್ತು. ಕಾರ್ಯಕ್ರಮಗಳ ಹೆಸರು ಗಳೆಲ್ಲವೂ ಜನರ ಅನುಭವ, ಭಾವನೆಗಳನ್ನು ಬಿಂಬಿಸುವಂತೆ ಇರುತ್ತಿದ್ದವು. ಹೀಗಾಗಿ ಆಕಾಶವಾಣಿಯ ಧ್ಯೇಯವಾಕ್ಯ ‘ಬಹುಜನ ಹಿತಾಯ, ಬಹುಜನ ಸುಖಾಯ’ ಕೂಡ ಅದನ್ನೇ ಬಯಸುತ್ತಿತ್ತು. ಆದರೆ ಇಂದು ಹಲವಾರು ಕಾರ್ಯಕ್ರಮಗಳ ಹೆಸರು, ಸಮಯವನ್ನು ಬದಲಿಸಿರುವುದು ಖಂಡಿತವಾಗಿಯೂ ಜನರ ಚಿತ್ತಭಿತ್ತಿಯಿಂದ ಆಕಾಶವಾಣಿಯನ್ನು ಕಿತ್ತೊಗೆಯುವ ಹುನ್ನಾರವೆಂದರೆ ತಪ್ಪಿಲ್ಲ.