<p><strong>‘ನಿರಕ್ಷರತೆ ಹೋದರೇ ಪ್ರಜಾಸತ್ತೆಗೆ ಯಶಸ್ಸು’</strong></p>.<p><strong>ಬೆಂಗಳೂರು, ಸೆ. 8–</strong> ಭಾರತದಲ್ಲಿ ಸಂಸದೀಯ ಪ್ರಜಾಪ್ರಭುತ್ವ, ಸಮಾಜವಾದ, ಯೋಜನಾಬದ್ಧ ಬೆಳವಣಿಗೆ ಯಶಸ್ವಿಯಾಗಬೇಕಾದರೆ ಆದಷ್ಟು ಬೇಗ ನಿರಕ್ಷರತೆಯನ್ನು ತೊಡೆಯಬೇಕೆಂದು ಕೇಂದ್ರದ ಶಿಕ್ಷಣ ಸಚಿವ ಡಾ. ವಿ.ಕೆ.ಆರ್.ವಿ. ರಾವ್ರವರು ಇಂದು ಇಲ್ಲಿ ಕರೆ ನೀಡಿದರು.</p>.<p>ವಿಧಾನಸೌಧದಲ್ಲಿ ವಯಸ್ಕರ ಶಿಕ್ಷಣ ಕುರಿತ ರಾಷ್ಟ್ರೀಯ ವಿಚಾರಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಡಾ. ರಾವ್ರವರು ‘ಅನಕ್ಷರತೆ ಮತ್ತು ಹಿಂದುಳಿದಿರುವಿಕೆ ಒಟ್ಟಾಗಿರುತ್ತವೆ’ ಎಂದರು.</p>.<p>1980–81ರ ವೇಳೆಗೆ ಭಾರತದ ಜನಸಂಖ್ಯೆಯು 695 ದಶಲಕ್ಷದಷ್ಟಾಗಿ 1981ರಲ್ಲಿಯೂ ಸುಮಾರು 385 ದಶಲಕ್ಷ ಮಂದಿ ಅನಕ್ಷರಸ್ಥರು ಇರುವರೆಂದು ಅಂದಾಜು ಮಾಡಲಾಗಿದೆಯೆಂದೂ 15ರಿಂದ 44ರ ವಯೋವರ್ಗದಲ್ಲಿಯಾದರೂ ಅನಕ್ಷರತೆ ಇಲ್ಲದಂತೆ ಮಾಡಬೇಕಾಗಿದೆಯೆಂದೂ ತಿಳಿಸಿದರು.</p>.<p><strong>ಮಹಾಜನ್ ವರದಿ ಪರಿಶೀಲನೆಗೆ ಸಂಸತ್ ಸಮಿತಿ: ಚವಾಣ್</strong></p>.<p><strong>ಪಣಜಿ, ಸೆ. 8–</strong> ಮಹಾಜನ್ ಆಯೋಗದ ವರದಿಯನ್ನು ಪರಿಶೀಲಿಸುವುದಕ್ಕಾಗಿ ಸಂಸತ್ ಸಮಿತಿಯೊಂದನ್ನು ನೇಮಕ ಮಾಡುವುದು ಮೈಸೂರು–ಮಹಾರಾಷ್ಟ್ರ ಗಡಿ ವಿವಾದದ ಇತ್ಯರ್ಥದ ಸಲಹೆಗಳಲ್ಲೊಂದಾಗಿದೆ ಎಂದು ಕೇಂದ್ರ ಅರ್ಥ ಮಂತ್ರಿ ಶ್ರೀ ವೈ.ಬಿ. ಚವಾಣ್ ಅವರು ಇಂದು ಇಲ್ಲಿ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>‘ನಿರಕ್ಷರತೆ ಹೋದರೇ ಪ್ರಜಾಸತ್ತೆಗೆ ಯಶಸ್ಸು’</strong></p>.<p><strong>ಬೆಂಗಳೂರು, ಸೆ. 8–</strong> ಭಾರತದಲ್ಲಿ ಸಂಸದೀಯ ಪ್ರಜಾಪ್ರಭುತ್ವ, ಸಮಾಜವಾದ, ಯೋಜನಾಬದ್ಧ ಬೆಳವಣಿಗೆ ಯಶಸ್ವಿಯಾಗಬೇಕಾದರೆ ಆದಷ್ಟು ಬೇಗ ನಿರಕ್ಷರತೆಯನ್ನು ತೊಡೆಯಬೇಕೆಂದು ಕೇಂದ್ರದ ಶಿಕ್ಷಣ ಸಚಿವ ಡಾ. ವಿ.ಕೆ.ಆರ್.ವಿ. ರಾವ್ರವರು ಇಂದು ಇಲ್ಲಿ ಕರೆ ನೀಡಿದರು.</p>.<p>ವಿಧಾನಸೌಧದಲ್ಲಿ ವಯಸ್ಕರ ಶಿಕ್ಷಣ ಕುರಿತ ರಾಷ್ಟ್ರೀಯ ವಿಚಾರಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಡಾ. ರಾವ್ರವರು ‘ಅನಕ್ಷರತೆ ಮತ್ತು ಹಿಂದುಳಿದಿರುವಿಕೆ ಒಟ್ಟಾಗಿರುತ್ತವೆ’ ಎಂದರು.</p>.<p>1980–81ರ ವೇಳೆಗೆ ಭಾರತದ ಜನಸಂಖ್ಯೆಯು 695 ದಶಲಕ್ಷದಷ್ಟಾಗಿ 1981ರಲ್ಲಿಯೂ ಸುಮಾರು 385 ದಶಲಕ್ಷ ಮಂದಿ ಅನಕ್ಷರಸ್ಥರು ಇರುವರೆಂದು ಅಂದಾಜು ಮಾಡಲಾಗಿದೆಯೆಂದೂ 15ರಿಂದ 44ರ ವಯೋವರ್ಗದಲ್ಲಿಯಾದರೂ ಅನಕ್ಷರತೆ ಇಲ್ಲದಂತೆ ಮಾಡಬೇಕಾಗಿದೆಯೆಂದೂ ತಿಳಿಸಿದರು.</p>.<p><strong>ಮಹಾಜನ್ ವರದಿ ಪರಿಶೀಲನೆಗೆ ಸಂಸತ್ ಸಮಿತಿ: ಚವಾಣ್</strong></p>.<p><strong>ಪಣಜಿ, ಸೆ. 8–</strong> ಮಹಾಜನ್ ಆಯೋಗದ ವರದಿಯನ್ನು ಪರಿಶೀಲಿಸುವುದಕ್ಕಾಗಿ ಸಂಸತ್ ಸಮಿತಿಯೊಂದನ್ನು ನೇಮಕ ಮಾಡುವುದು ಮೈಸೂರು–ಮಹಾರಾಷ್ಟ್ರ ಗಡಿ ವಿವಾದದ ಇತ್ಯರ್ಥದ ಸಲಹೆಗಳಲ್ಲೊಂದಾಗಿದೆ ಎಂದು ಕೇಂದ್ರ ಅರ್ಥ ಮಂತ್ರಿ ಶ್ರೀ ವೈ.ಬಿ. ಚವಾಣ್ ಅವರು ಇಂದು ಇಲ್ಲಿ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>