ಮುಖ್ಯ ನ್ಯಾಯಮೂರ್ತಿ ಪುನ್ಚಿ ಪ್ರಮಾಣವಚನ ನವದೆಹಲಿ, ಜ. 18– ಸುಪ್ರೀಂ ಕೋರ್ಟಿನ 28ನೇ ಮುಖ್ಯ ನ್ಯಾಯಮೂರ್ತಿಯಾಗಿ, ಮದನ್ ಮೋಹನ್ ಪುನ್ಚಿ ಅವರು ಇಂದು ಪ್ರಮಾಣವಚನ ಸ್ವೀಕರಿಸಿದರು.
ರಾಷ್ಟ್ರಪತಿ ಭವನದ ಅಶೋಕಾ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ಕೆ.ಆರ್.ನಾರಾಯಣನ್ ಅವರು ಪುನ್ಚಿ ಅವರಿಗೆ ಪ್ರಮಾಣವಚನ ಬೋಧಿಸಿದರು.
ದಳಕ್ಕೆ ಜಾಲಪ್ಪ ರಾಜೀನಾಮೆ ನವದೆಹಲಿ, ಜ. 18– ಕಳೆದ ಕೆಲವು ವಾರಗಳಿಂದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರೊಂದಿಗೆ ವೈಮನಸ್ಯ ಹೊಂದಿದ್ದ ಕೇಂದ್ರ ಜವಳಿ ಸಚಿವ ಆರ್.ಎಲ್.ಜಾಲಪ್ಪ ಅವರು ಇಂದು ಅಂತಿಮವಾಗಿ ಜನತಾದಳದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರು.
ಇಂದು ಬೆಳಿಗ್ಗೆ ಇಲ್ಲಿ ಜನತಾದಳದ ಅಧ್ಯಕ್ಷ ಶರದ್ ಯಾದವ್ ಅವರನ್ನು ಭೇಟಿ ಮಾಡಿ ರಾಜೀನಾಮೆ ಪತ್ರವನ್ನು ಸಲ್ಲಿಸಿದರು.