ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ: ಬುಧವಾರ 14.8.1996

Last Updated 13 ಆಗಸ್ಟ್ 2021, 18:50 IST
ಅಕ್ಷರ ಗಾತ್ರ

ತಜ್ಞ ಸಮಿತಿ ಹಠಾತ್ ರದ್ದು

ನವದೆಹಲಿ, ಆ. 13– ಕೃಷ್ಣಾ ಯೋಜನೆಯಲ್ಲಿ ಬಚಾವತ್ ತೀರ್ಪಿನ ಉಲ್ಲಂಘನೆ ಮಾಡಲಾ ಗಿದೆ ಎಂದಿರುವ ಆಂಧ್ರಪ್ರದೇಶ ಮತ್ತು ಕರ್ನಾಟಕದ ಪರಸ್ಪರ ಆರೋಪಗಳ ಬಗೆಗೆ ಖುದ್ದು ಅಧ್ಯಯನ ಮಾಡಿ ವರದಿ ಸಲ್ಲಿಸಲು ತಜ್ಞರ ಸಮಿತಿಯೊಂದನ್ನು ರಚಿಸಲು ಕೈಗೊಂಡಿದ್ದ ತೀರ್ಮಾನವನ್ನು ಕೇಂದ್ರ ಸರ್ಕಾರ ಇಂದು ಕೈಬಿಟ್ಟಿತು.

ಆಂಧ್ರಪ್ರದೇಶದ ಹೈಕೋರ್ಟ್ ಮುಂದೆ ಈಗ ಆಲಮಟ್ಟಿ ಅಣೆಕಟ್ಟು ಎತ್ತರದ ಔಚಿತ್ಯವನ್ನು ಪ್ರಶ್ನಿಸಿರುವ ಅರ್ಜಿಯೊಂದು ವಿಚಾರಣೆಯಲ್ಲಿ ಇರುವುದರಿಂದ ಸಬ್ ಜುಡೀಸ್ ಆಗುವುದೆಂಬ ಕಾರಣವನ್ನು ಸರ್ಕಾರ ನೀಡಿದೆ.

ಆಲಮಟ್ಟಿ: ಸರ್ಕಾರದ ವಿರುದ್ಧ ಅವಿಶ್ವಾಸ ಮಂಡನೆ

ಬೆಂಗಳೂರು, ಆ. 13– ಆಲಮಟ್ಟಿ ಅಣೆಕಟ್ಟೆ ವಿಚಾರದಲ್ಲಿ ಸರ್ಕಾರ ತಪ್ಪುಹಾದಿ ತುಳಿಯುತ್ತಿದೆ ಎಂದು ಧರಣಿ ಹೂಡಿರುವ ಪ್ರತಿಪಕ್ಷಗಳ ಸದಸ್ಯರು, ಗದ್ದಲದ ನಡುವೆಯೇ ಇಂದು ವಿಧಾನಸಭೆಯಲ್ಲಿ ಜೆ.ಎಚ್.ಪಟೇಲ್ ನೇತೃತ್ವದ ಸಚಿವ ಸಂಪುಟದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT