<p><strong>ಬಾಡಿಗೆ ಹಂತಕನಿಂದ ಶಾಸಕ ಚಿತ್ತರಂಜನ್ ಹತ್ಯೆ</strong></p>.<p><strong>ಬೆಂಗಳೂರು, ಏ. 19–</strong> ಭಟ್ಕಳದ ಬಿಜೆಪಿ ಶಾಸಕ ಡಾ. ಚಿತ್ತರಂಜನ್ ಅವರ ನಿಗೂಢ ಕೊಲೆಯ ಹಿಂದಿನ ರಹಸ್ಯವನ್ನು ಭೇದಿಸುವ ಹಾದಿಯಲ್ಲಿ ರಾಜ್ಯದ ಸಿಒಡಿ ಪೊಲೀಸರು ಸ್ವಲ್ಪಮಟ್ಟಿಗೆ ಯಶಸ್ಸು ಸಾಧಿಸಿದ್ದಾರೆ.</p>.<p>ಚಿತ್ತರಂಜನ್ ಅವರ ದಿನಚರಿಯನ್ನು ಅಧ್ಯಯನ ಮಾಡಿದ ಬಾಡಿಗೆ ಹಂತಕನೊಬ್ಬ ದೇಶಿ ಕಾರ್ಖಾನೆಯೊಂದರಲ್ಲಿ ತಯಾರಾದ 12 ಬೋರ್ ಬಂದೂಕು ಬಳಸಿ ಅವರ ಕೊಲೆ ಮಾಡಿದ್ದಾನೆ.</p>.<p>ಭಟ್ಕಳದ ಗಲಭೆಗೂ ಚಿತ್ತರಂಜನ್ ಕೊಲೆಗೂ ಸಂಬಂಧವಿಲ್ಲ. ಹಾಗೆಯೇ ಮುಂಬೈ ಭೂಗತ ಜಗತ್ತು ಅಥವಾ ಪಾಕಿಸ್ತಾನದ ಐಎಸ್ಐ ಕೈವಾಡ ಇದರ ಹಿಂದಿಲ್ಲ ಎಂಬ ಅಂಶ ಸಿಒಡಿಯ ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ.</p>.<p><strong>ಚುನಾವಣೆ ಬಳಿಕ ಮತ್ತೆ ಕಾಂಗೈ ಹೋಳು: ವಿ.ಪಿ</strong></p>.<p><strong>ಬೆಂಗಳೂರು, ಏ. 19– </strong>ಲೋಕಸಭಾ ಚುನಾವಣೆ ನಂತರ ಕಾಂಗ್ರೆಸ್ ಪಕ್ಷ ಒಡೆದು ಅಲ್ಲಿಂದ ಒಂದಷ್ಟು ಮಂದಿ, ಅತಿದೊಡ್ಡ ಶಕ್ತಿಯಾಗಿ ಬೆಳೆಯುತ್ತಿರುವ ‘ತೃತೀಯ ರಂಗ’ವನ್ನು ಸೇರಲಿದ್ದಾರೆ ಎಂದು ದಳ ನಾಯಕ ವಿ.ಪಿ.ಸಿಂಗ್ ಅವರು ಇಂದು ಇಲ್ಲಿ ಭವಿಷ್ಯ ನುಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾಡಿಗೆ ಹಂತಕನಿಂದ ಶಾಸಕ ಚಿತ್ತರಂಜನ್ ಹತ್ಯೆ</strong></p>.<p><strong>ಬೆಂಗಳೂರು, ಏ. 19–</strong> ಭಟ್ಕಳದ ಬಿಜೆಪಿ ಶಾಸಕ ಡಾ. ಚಿತ್ತರಂಜನ್ ಅವರ ನಿಗೂಢ ಕೊಲೆಯ ಹಿಂದಿನ ರಹಸ್ಯವನ್ನು ಭೇದಿಸುವ ಹಾದಿಯಲ್ಲಿ ರಾಜ್ಯದ ಸಿಒಡಿ ಪೊಲೀಸರು ಸ್ವಲ್ಪಮಟ್ಟಿಗೆ ಯಶಸ್ಸು ಸಾಧಿಸಿದ್ದಾರೆ.</p>.<p>ಚಿತ್ತರಂಜನ್ ಅವರ ದಿನಚರಿಯನ್ನು ಅಧ್ಯಯನ ಮಾಡಿದ ಬಾಡಿಗೆ ಹಂತಕನೊಬ್ಬ ದೇಶಿ ಕಾರ್ಖಾನೆಯೊಂದರಲ್ಲಿ ತಯಾರಾದ 12 ಬೋರ್ ಬಂದೂಕು ಬಳಸಿ ಅವರ ಕೊಲೆ ಮಾಡಿದ್ದಾನೆ.</p>.<p>ಭಟ್ಕಳದ ಗಲಭೆಗೂ ಚಿತ್ತರಂಜನ್ ಕೊಲೆಗೂ ಸಂಬಂಧವಿಲ್ಲ. ಹಾಗೆಯೇ ಮುಂಬೈ ಭೂಗತ ಜಗತ್ತು ಅಥವಾ ಪಾಕಿಸ್ತಾನದ ಐಎಸ್ಐ ಕೈವಾಡ ಇದರ ಹಿಂದಿಲ್ಲ ಎಂಬ ಅಂಶ ಸಿಒಡಿಯ ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ.</p>.<p><strong>ಚುನಾವಣೆ ಬಳಿಕ ಮತ್ತೆ ಕಾಂಗೈ ಹೋಳು: ವಿ.ಪಿ</strong></p>.<p><strong>ಬೆಂಗಳೂರು, ಏ. 19– </strong>ಲೋಕಸಭಾ ಚುನಾವಣೆ ನಂತರ ಕಾಂಗ್ರೆಸ್ ಪಕ್ಷ ಒಡೆದು ಅಲ್ಲಿಂದ ಒಂದಷ್ಟು ಮಂದಿ, ಅತಿದೊಡ್ಡ ಶಕ್ತಿಯಾಗಿ ಬೆಳೆಯುತ್ತಿರುವ ‘ತೃತೀಯ ರಂಗ’ವನ್ನು ಸೇರಲಿದ್ದಾರೆ ಎಂದು ದಳ ನಾಯಕ ವಿ.ಪಿ.ಸಿಂಗ್ ಅವರು ಇಂದು ಇಲ್ಲಿ ಭವಿಷ್ಯ ನುಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>