ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ| ಶನಿವಾರ 20.4.1996

25 ವರ್ಷಗಳ ಹಿಂದೆ ಶನಿವಾರ 20.4.1996
Last Updated 19 ಏಪ್ರಿಲ್ 2021, 21:42 IST
ಅಕ್ಷರ ಗಾತ್ರ

ಬಾಡಿಗೆ ಹಂತಕನಿಂದ ಶಾಸಕ ಚಿತ್ತರಂಜನ್ ಹತ್ಯೆ

ಬೆಂಗಳೂರು, ಏ. 19– ಭಟ್ಕಳದ ಬಿಜೆಪಿ ಶಾಸಕ ಡಾ. ಚಿತ್ತರಂಜನ್ ಅವರ ನಿಗೂಢ ಕೊಲೆಯ ಹಿಂದಿನ ರಹಸ್ಯವನ್ನು ಭೇದಿಸುವ ಹಾದಿಯಲ್ಲಿ ರಾಜ್ಯದ ಸಿಒಡಿ ಪೊಲೀಸರು ಸ್ವಲ್ಪಮಟ್ಟಿಗೆ ಯಶಸ್ಸು ಸಾಧಿಸಿದ್ದಾರೆ.

ಚಿತ್ತರಂಜನ್ ಅವರ ದಿನಚರಿಯನ್ನು ಅಧ್ಯಯನ ಮಾಡಿದ ಬಾಡಿಗೆ ಹಂತಕನೊಬ್ಬ ದೇಶಿ ಕಾರ್ಖಾನೆಯೊಂದರಲ್ಲಿ ತಯಾರಾದ 12 ಬೋರ್ ಬಂದೂಕು ಬಳಸಿ ಅವರ ಕೊಲೆ ಮಾಡಿದ್ದಾನೆ.

ಭಟ್ಕಳದ ಗಲಭೆಗೂ ಚಿತ್ತರಂಜನ್ ಕೊಲೆಗೂ ಸಂಬಂಧವಿಲ್ಲ. ಹಾಗೆಯೇ ಮುಂಬೈ ಭೂಗತ ಜಗತ್ತು ಅಥವಾ ಪಾಕಿಸ್ತಾನದ ಐಎಸ್‌ಐ ಕೈವಾಡ ಇದರ ಹಿಂದಿಲ್ಲ ಎಂಬ ಅಂಶ ಸಿಒಡಿಯ ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ.

ಚುನಾವಣೆ ಬಳಿಕ ಮತ್ತೆ ಕಾಂಗೈ ಹೋಳು: ವಿ.ಪಿ

ಬೆಂಗಳೂರು, ಏ. 19– ಲೋಕಸಭಾ ಚುನಾವಣೆ ನಂತರ ಕಾಂಗ್ರೆಸ್ ಪಕ್ಷ ಒಡೆದು ಅಲ್ಲಿಂದ ಒಂದಷ್ಟು ಮಂದಿ, ಅತಿದೊಡ್ಡ ಶಕ್ತಿಯಾಗಿ ಬೆಳೆಯುತ್ತಿರುವ ‘ತೃತೀಯ ರಂಗ’ವನ್ನು ಸೇರಲಿದ್ದಾರೆ ಎಂದು ದಳ ನಾಯಕ ವಿ.ಪಿ.ಸಿಂಗ್ ಅವರು ಇಂದು ಇಲ್ಲಿ ಭವಿಷ್ಯ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT