ಇಂದು ಬೆಳಿಗ್ಗೆ ಎಐಎಡಿಎಂಕೆ ನಾಯಕಿ ಜಯಲಲಿತಾ ಅವರು, ರಾಷ್ಟ್ರಪತಿ ಕೆ.ಆರ್. ನಾರಾಯಣನ್ ಅವರನ್ನು ಭೇಟಿಯಾಗಿ ಸರ್ಕಾರಕ್ಕೆ ನೀಡಿರುವ ತಮ್ಮ ಪಕ್ಷದ ಬೆಂಬಲವನ್ನು ವಾಪಸು ಪಡೆದಿರು ವುದನ್ನು ಅಧಿಕೃತವಾಗಿ ತಿಳಿಸಿದರು. ಇದರೊಂದಿಗೆ ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರದ ಬಹುಮತ ಕುಸಿದು, ರಾಜಕೀಯ ಅಸ್ಥಿರತೆ ತಲೆದೋರಿತು. ಸಂಜೆಯವರೆಗೆ ರಾಜಧಾನಿಯಲ್ಲಿ ರಾಜಕೀಯ ಕೋಲಾಹಲ, ಪ್ರತಿಪಕ್ಷಗಳು ಗುಂಪುಗೂಡಿ ರಾಷ್ಟ್ರಪತಿಗಳ ಬಳಿ ತೆರಳಿ, ಪ್ರಸ್ತುತ ಸರ್ಕಾರ ಬಹುಮತ ಕಳೆದು ಕೊಂಡಿರುವುದನ್ನು ಒತ್ತಿಹೇಳಿ, ವಿಶ್ವಾಸಮತ ಯಾಚಿಸಲು ಸೂಚಿಸುವಂತೆ ಒತ್ತಾಯಿಸಿದ್ದವು. ಲೋಕಸಭೆಯಲ್ಲಿ ವಿಶ್ವಾಸ ಮತ ಯಾಚಿಸುವಂತೆ ವಾಜಪೇಯಿಯವರಿಗೆ ರಾಷ್ಟ್ರಪತಿಯವರು ರಾತ್ರಿ ಸೂಚಿಸಿದರು.