<p>‘ಮೃಗಾಲಯದಲ್ಲಿ ನೌಕರನ ರಕ್ಷಣೆಗೆ ಗುಂಡಿಟ್ಟು ಹುಲಿಯ ಹತ್ಯೆ’</p>.<p>ಮೈಸೂರು, ಅ. 5– ಹುಲಿಯ ಬಾಯಿಂದ ನೌಕರನೊಬ್ಬನನ್ನು ಪಾರು ಮಾಡುವ ಪ್ರಯತ್ನದಲ್ಲಿ ಇಲ್ಲಿನ ಜಯಚಾಮರಾಜೇಂದ್ರ ಮೃಗಾಲಯದಲ್ಲಿ ಭಾನುವಾರ ಮಧ್ಯಾಹ್ನ ಎರಡು ವರ್ಷದ ಹುಲಿಯೊಂದನ್ನು ಗುಂಡಿಟ್ಟು ಕೊಲ್ಲಲಾಯಿತು.</p>.<p>ಆಕಸ್ಮಿಕ ಘಟನೆಯಲ್ಲಿ ಹುಲಿಯ ಹಿಡಿತಕ್ಕೆ ಸಿಕ್ಕ ಮೃಗಾಲಯದ ನೌಕರ ಊಟಿ ಕೃಷ್ಣ ತೀವ್ರವಾಗಿ ಗಾಯಗೊಂಡಿದ್ದರೂ ಪ್ರಾಣಾಪಾಯದಿಂದ ಪಾರಾಗಿದ್ದಾನೆಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಈತನ ಕಾಲನ್ನು ಹುಲಿ ಗಾಯಗೊಳಿಸಿದೆ.</p>.<p>ಇನ್ಸಾಟ್– 2ಡಿ ಉಪಗ್ರಹ ಪೂರ್ಣ ಸ್ಥಗಿತ</p>.<p>ಬೆಂಗಳೂರು, ಅ. 5– ವಿದ್ಯುತ್ ಕೋಶದ ತೊಂದರೆಯಿಂದ ನಿನ್ನೆ ರಾತ್ರಿ ಎರಡನೇ ಬಾರಿ ಭೂ ನಿಯಂತ್ರಣ ಕೇಂದ್ರದ ಸಂಪರ್ಕ ಕಳೆದುಕೊಂಡ ಇನ್ಸಾಟ್– 2ಡಿ ಉಪಗ್ರಹದ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.</p>.<p>ವಿದ್ಯುತ್ತಿನ ವ್ಯತ್ಯಯದಲ್ಲಿ ಉಂಟಾದ ತೊಂದರೆಯಿಂದಾಗಿ ಶಕ್ತಿಯ ಹಂಚಿಕೆಯ ಹಾಗೂ ಮುನ್ನುಗ್ಗುವ ಶಕ್ತಿಯನ್ನು ಕಳೆದುಕೊಂಡು ತಾನು ನಿರ್ವಹಿಸುತ್ತಿದ್ದ ಕಾರ್ಯಗಳನ್ನು ನಿರ್ವಹಿಸಲು ಉಪಗ್ರಹ ಅಸಮರ್ಥವಾಗಿರುವುದರಿಂದ ಅದರ ಸೇವೆಯನ್ನು ಕೈಬಿಡಲಾಗಿದೆ ಎಂದು ಇಸ್ರೊ ಪ್ರಕಟಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಮೃಗಾಲಯದಲ್ಲಿ ನೌಕರನ ರಕ್ಷಣೆಗೆ ಗುಂಡಿಟ್ಟು ಹುಲಿಯ ಹತ್ಯೆ’</p>.<p>ಮೈಸೂರು, ಅ. 5– ಹುಲಿಯ ಬಾಯಿಂದ ನೌಕರನೊಬ್ಬನನ್ನು ಪಾರು ಮಾಡುವ ಪ್ರಯತ್ನದಲ್ಲಿ ಇಲ್ಲಿನ ಜಯಚಾಮರಾಜೇಂದ್ರ ಮೃಗಾಲಯದಲ್ಲಿ ಭಾನುವಾರ ಮಧ್ಯಾಹ್ನ ಎರಡು ವರ್ಷದ ಹುಲಿಯೊಂದನ್ನು ಗುಂಡಿಟ್ಟು ಕೊಲ್ಲಲಾಯಿತು.</p>.<p>ಆಕಸ್ಮಿಕ ಘಟನೆಯಲ್ಲಿ ಹುಲಿಯ ಹಿಡಿತಕ್ಕೆ ಸಿಕ್ಕ ಮೃಗಾಲಯದ ನೌಕರ ಊಟಿ ಕೃಷ್ಣ ತೀವ್ರವಾಗಿ ಗಾಯಗೊಂಡಿದ್ದರೂ ಪ್ರಾಣಾಪಾಯದಿಂದ ಪಾರಾಗಿದ್ದಾನೆಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಈತನ ಕಾಲನ್ನು ಹುಲಿ ಗಾಯಗೊಳಿಸಿದೆ.</p>.<p>ಇನ್ಸಾಟ್– 2ಡಿ ಉಪಗ್ರಹ ಪೂರ್ಣ ಸ್ಥಗಿತ</p>.<p>ಬೆಂಗಳೂರು, ಅ. 5– ವಿದ್ಯುತ್ ಕೋಶದ ತೊಂದರೆಯಿಂದ ನಿನ್ನೆ ರಾತ್ರಿ ಎರಡನೇ ಬಾರಿ ಭೂ ನಿಯಂತ್ರಣ ಕೇಂದ್ರದ ಸಂಪರ್ಕ ಕಳೆದುಕೊಂಡ ಇನ್ಸಾಟ್– 2ಡಿ ಉಪಗ್ರಹದ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.</p>.<p>ವಿದ್ಯುತ್ತಿನ ವ್ಯತ್ಯಯದಲ್ಲಿ ಉಂಟಾದ ತೊಂದರೆಯಿಂದಾಗಿ ಶಕ್ತಿಯ ಹಂಚಿಕೆಯ ಹಾಗೂ ಮುನ್ನುಗ್ಗುವ ಶಕ್ತಿಯನ್ನು ಕಳೆದುಕೊಂಡು ತಾನು ನಿರ್ವಹಿಸುತ್ತಿದ್ದ ಕಾರ್ಯಗಳನ್ನು ನಿರ್ವಹಿಸಲು ಉಪಗ್ರಹ ಅಸಮರ್ಥವಾಗಿರುವುದರಿಂದ ಅದರ ಸೇವೆಯನ್ನು ಕೈಬಿಡಲಾಗಿದೆ ಎಂದು ಇಸ್ರೊ ಪ್ರಕಟಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>