<p><strong>ಅಮರನಾಥ ಹತ್ಯೆ: ನ್ಯಾಯಾಂಗ ತನಿಖೆ ಬೇಡಿಕೆ ತಿರಸ್ಕಾರ</strong></p>.<p>ನವದೆಹಲಿ, ಆಗಸ್ಟ್ 22– ಕಾಶ್ಮೀರದಲ್ಲಿ ನಡೆದ ಅಮರನಾಥ ಯಾತ್ರಿಗಳ ಹತ್ಯಾಕಾಂಡದ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕೆಂಬ ಕಾಂಗ್ರೆಸ್ ಪಕ್ಷದ ಬೇಡಿಕೆಯನ್ನು ಇಂದು ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ತಿರಸ್ಕರಿಸಿತು.</p>.<p>ಘಟನೆಯ ತನಿಖೆಗೆ ನೇಮಿಸಲಾದ ಮೂವರು ಉನ್ನತ ಅಧಿಕಾರಿಗಳ ಸಮಿತಿ, ಹತ್ಯಾಕಾಂಡಕ್ಕೆ ಭದ್ರತಾ ವೈಫಲ್ಯ ಕಾರಣ ಎಂದು ಹೇಳಿದರೆ, ಕಾಂಗ್ರೆಸ್ ಬೇಡಿಕೆಯನ್ನು ಪುನರ್ ಪರಿಶೀಲಿಸಲಾಗುವುದು ಎಂಬ ಅಭಿಪ್ರಾಯವನ್ನು ಸರ್ಕಾರ ಪುನರುಚ್ಚರಿಸಿತು.</p>.<p><strong>ಕೊಡಗಿನಲ್ಲಿ ಮಳೆ; ಮೈದುಂಬಿದ ಕಾವೇರಿ</strong></p>.<p>ಮಡಿಕೇರಿ, ಆಗಸ್ಟ್ 22– ಜಿಲ್ಲೆಯಲ್ಲಿ ವ್ಯಾಪಕವಾಗಿ ಮಳೆ ಸುರಿಯುತ್ತಿದ್ದು, ಬಲಮುರಿ ಬಳಿ ಕಾವೇರಿ ನದಿ ಹಳೇ ಸೇತುವೆಯ ಮೇಲೆ ಮೂರು ಅಡಿಯಷ್ಟು ಎತ್ತರದಲ್ಲಿ ಹರಿಯುತ್ತಿದೆ.</p>.<p>ಕಾವೇರಿ ಜಲಾನಯನ ಪ್ರದೇಶವಾದ ಭಾಗಮಂಡಲದಲ್ಲಿ ಕಾವೇರಿ ನದಿ ಮೈದುಂಬಿ ಹರಿಯುತ್ತಿದ್ದರೂ ಮಳೆ ಬಿಟ್ಟು ಬಿಟ್ಟು ಬರುತ್ತಿರುವುದರಿಂದ ಇದುವರೆಗೆ ಆ ಭಾಗದ ಸಂಚಾರಕ್ಕೆ ತೊಡಕಾಗಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಮರನಾಥ ಹತ್ಯೆ: ನ್ಯಾಯಾಂಗ ತನಿಖೆ ಬೇಡಿಕೆ ತಿರಸ್ಕಾರ</strong></p>.<p>ನವದೆಹಲಿ, ಆಗಸ್ಟ್ 22– ಕಾಶ್ಮೀರದಲ್ಲಿ ನಡೆದ ಅಮರನಾಥ ಯಾತ್ರಿಗಳ ಹತ್ಯಾಕಾಂಡದ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕೆಂಬ ಕಾಂಗ್ರೆಸ್ ಪಕ್ಷದ ಬೇಡಿಕೆಯನ್ನು ಇಂದು ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ತಿರಸ್ಕರಿಸಿತು.</p>.<p>ಘಟನೆಯ ತನಿಖೆಗೆ ನೇಮಿಸಲಾದ ಮೂವರು ಉನ್ನತ ಅಧಿಕಾರಿಗಳ ಸಮಿತಿ, ಹತ್ಯಾಕಾಂಡಕ್ಕೆ ಭದ್ರತಾ ವೈಫಲ್ಯ ಕಾರಣ ಎಂದು ಹೇಳಿದರೆ, ಕಾಂಗ್ರೆಸ್ ಬೇಡಿಕೆಯನ್ನು ಪುನರ್ ಪರಿಶೀಲಿಸಲಾಗುವುದು ಎಂಬ ಅಭಿಪ್ರಾಯವನ್ನು ಸರ್ಕಾರ ಪುನರುಚ್ಚರಿಸಿತು.</p>.<p><strong>ಕೊಡಗಿನಲ್ಲಿ ಮಳೆ; ಮೈದುಂಬಿದ ಕಾವೇರಿ</strong></p>.<p>ಮಡಿಕೇರಿ, ಆಗಸ್ಟ್ 22– ಜಿಲ್ಲೆಯಲ್ಲಿ ವ್ಯಾಪಕವಾಗಿ ಮಳೆ ಸುರಿಯುತ್ತಿದ್ದು, ಬಲಮುರಿ ಬಳಿ ಕಾವೇರಿ ನದಿ ಹಳೇ ಸೇತುವೆಯ ಮೇಲೆ ಮೂರು ಅಡಿಯಷ್ಟು ಎತ್ತರದಲ್ಲಿ ಹರಿಯುತ್ತಿದೆ.</p>.<p>ಕಾವೇರಿ ಜಲಾನಯನ ಪ್ರದೇಶವಾದ ಭಾಗಮಂಡಲದಲ್ಲಿ ಕಾವೇರಿ ನದಿ ಮೈದುಂಬಿ ಹರಿಯುತ್ತಿದ್ದರೂ ಮಳೆ ಬಿಟ್ಟು ಬಿಟ್ಟು ಬರುತ್ತಿರುವುದರಿಂದ ಇದುವರೆಗೆ ಆ ಭಾಗದ ಸಂಚಾರಕ್ಕೆ ತೊಡಕಾಗಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>