<p><strong>ಸಂಚು ಭೇದಿಸಿದ ಸಿಓಡಿ</strong></p>.<p>ಹುಬ್ಬಳ್ಳಿ, ಜುಲೈ 15– ಕಳೆದ ಶನಿವಾರ ಇಲ್ಲಿನ ಲೂಥೆರಾನ್ ಚರ್ಚ್ನಲ್ಲಿ ನಡೆದ ಬಾಂಬ್ ಸ್ಫೋಟದ ಘಟನೆಗೆ ಸಂಬಂಧಿಸಿದಂತೆ ಹುಬ್ಬಳ್ಳಿಯ ಇಬ್ಬರು ವ್ಯಕ್ತಿಗಳನ್ನು ಇಂದು ಇಲ್ಲಿ ಬಂಧಿಸುವ ಮೂಲಕ ಸಿಓಡಿ ಪೊಲೀಸರು, ಈ ಪ್ರಕರಣದ ಸಂಚನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.</p>.<p>ಆರೋಪಿಗಳ ಬಂಧನ ವಿಷಯವನ್ನು ಈ ಪ್ರಕರಣದ ತನಿಖೆ ನಡೆಸುತ್ತಿರುವ ಸಿಓಡಿ ಎಸ್.ಪಿ ಎಂ.ಆರ್. ಪೂಜಾರ ಅವರು, ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.</p>.<p>ಬಂಧಿತ ಆರೋಪಿಗಳನ್ನು ರಿಷಿ ಬಸವರಾಜು ಹಿರೇಮಠ (31) ಮತ್ತು ಸೈಯದ್ ಮುನೀರುದ್ದೀನ್ ಮುಲ್ಲಾ (38) ಎಂದು ಗುರುತಿಸಲಾಗಿದೆ. ಇವರಿಬ್ಬರು ಹಳೇ ಹುಬ್ಬಳ್ಳಿಯ ನಿವಾಸಿಗಳು ಮ್ತು ಹೈದರಾಬಾದ್ನ ದೀನದಾರ್ ಚೆನ್ನಬಸವೇಶ್ವರ ಸಿದ್ದಿಖಿ ಸಂಘಟನೆಯ ಹುಬ್ಬಳ್ಳಿ ಶಾಖೆಯ ಜಂಟಿ ಕಾರ್ಯದರ್ಶಿ ಮತ್ತು ಕಾರ್ಯದರ್ಶಿಗಳು.</p>.<p>*****</p>.<p><strong>ದೂರಸಂಪರ್ಕ ಖಾಸಗಿಗೆ: ಏಕಸ್ವಾಮ್ಯಕ್ಕೆ ವಿದಾಯ</strong></p>.<p>ನವದೆಹಲಿ, ಜುಲೈ 15– ನೂತನ ದೂರಸಂಪರ್ಕ ನೀತಿಗೆ ಅನುಗುಣವಾಗಿ ಎಸ್ಟಿಡಿ ಕರೆಗಳನ್ನೊಳಗೊಂಡ ರಾಷ್ಟ್ರೀಯ ದೂರಸಂಪರ್ಕ ನಿರ್ವಹಣೆಯನ್ನು ಇದೇ ಆಗಸ್ಟ್ 15ರ ವೇಳೆಗೆ ಖಾಸಗಿಯವರಿಗೆ ನೀಡಲು ನಿರ್ಧರಿಸಿರುವ ಕೇಂದ್ರ ಸರ್ಕಾರ ಈ ಕ್ಷೇತ್ರದಲ್ಲಿನ ಸರ್ಕಾರದ ಏಕಸ್ವಾಮ್ಯವನ್ನು ಬಿಟ್ಟುಕೊಡಲಿದೆ.</p>.<p>ಮಾಹಿತಿ ತಂತ್ರಜ್ಞಾನ ಸಚಿವರ ಪ್ರಥಮ ಸಮ್ಮೇಳನದಲ್ಲಿ ಈ ನಿರ್ಧಾರವನ್ನು ಪ್ರಕಟಿಸಿದ ಪ್ರಧಾನಿ ಅಟಲ ಬಿಹಾರಿ ವಾಜಪೇಯಿ ಅವರು, ‘ಖಾಸಗಿ ಕಂಪನಿಗಳ ಮೇಲೆ ಯಾವ ಮಿತಿಯನ್ನೂ ಹೇರದೆ ಆಸಕ್ತಿ ತೋರುವ ಎಲ್ಲಾ ಕಂಪನಿಗಳಿಗೂ ಅರ್ಹತೆ ಮೇಲೆ ಅವಕಾಶ ನೀಡಲಾಗುವುದು’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಂಚು ಭೇದಿಸಿದ ಸಿಓಡಿ</strong></p>.<p>ಹುಬ್ಬಳ್ಳಿ, ಜುಲೈ 15– ಕಳೆದ ಶನಿವಾರ ಇಲ್ಲಿನ ಲೂಥೆರಾನ್ ಚರ್ಚ್ನಲ್ಲಿ ನಡೆದ ಬಾಂಬ್ ಸ್ಫೋಟದ ಘಟನೆಗೆ ಸಂಬಂಧಿಸಿದಂತೆ ಹುಬ್ಬಳ್ಳಿಯ ಇಬ್ಬರು ವ್ಯಕ್ತಿಗಳನ್ನು ಇಂದು ಇಲ್ಲಿ ಬಂಧಿಸುವ ಮೂಲಕ ಸಿಓಡಿ ಪೊಲೀಸರು, ಈ ಪ್ರಕರಣದ ಸಂಚನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.</p>.<p>ಆರೋಪಿಗಳ ಬಂಧನ ವಿಷಯವನ್ನು ಈ ಪ್ರಕರಣದ ತನಿಖೆ ನಡೆಸುತ್ತಿರುವ ಸಿಓಡಿ ಎಸ್.ಪಿ ಎಂ.ಆರ್. ಪೂಜಾರ ಅವರು, ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.</p>.<p>ಬಂಧಿತ ಆರೋಪಿಗಳನ್ನು ರಿಷಿ ಬಸವರಾಜು ಹಿರೇಮಠ (31) ಮತ್ತು ಸೈಯದ್ ಮುನೀರುದ್ದೀನ್ ಮುಲ್ಲಾ (38) ಎಂದು ಗುರುತಿಸಲಾಗಿದೆ. ಇವರಿಬ್ಬರು ಹಳೇ ಹುಬ್ಬಳ್ಳಿಯ ನಿವಾಸಿಗಳು ಮ್ತು ಹೈದರಾಬಾದ್ನ ದೀನದಾರ್ ಚೆನ್ನಬಸವೇಶ್ವರ ಸಿದ್ದಿಖಿ ಸಂಘಟನೆಯ ಹುಬ್ಬಳ್ಳಿ ಶಾಖೆಯ ಜಂಟಿ ಕಾರ್ಯದರ್ಶಿ ಮತ್ತು ಕಾರ್ಯದರ್ಶಿಗಳು.</p>.<p>*****</p>.<p><strong>ದೂರಸಂಪರ್ಕ ಖಾಸಗಿಗೆ: ಏಕಸ್ವಾಮ್ಯಕ್ಕೆ ವಿದಾಯ</strong></p>.<p>ನವದೆಹಲಿ, ಜುಲೈ 15– ನೂತನ ದೂರಸಂಪರ್ಕ ನೀತಿಗೆ ಅನುಗುಣವಾಗಿ ಎಸ್ಟಿಡಿ ಕರೆಗಳನ್ನೊಳಗೊಂಡ ರಾಷ್ಟ್ರೀಯ ದೂರಸಂಪರ್ಕ ನಿರ್ವಹಣೆಯನ್ನು ಇದೇ ಆಗಸ್ಟ್ 15ರ ವೇಳೆಗೆ ಖಾಸಗಿಯವರಿಗೆ ನೀಡಲು ನಿರ್ಧರಿಸಿರುವ ಕೇಂದ್ರ ಸರ್ಕಾರ ಈ ಕ್ಷೇತ್ರದಲ್ಲಿನ ಸರ್ಕಾರದ ಏಕಸ್ವಾಮ್ಯವನ್ನು ಬಿಟ್ಟುಕೊಡಲಿದೆ.</p>.<p>ಮಾಹಿತಿ ತಂತ್ರಜ್ಞಾನ ಸಚಿವರ ಪ್ರಥಮ ಸಮ್ಮೇಳನದಲ್ಲಿ ಈ ನಿರ್ಧಾರವನ್ನು ಪ್ರಕಟಿಸಿದ ಪ್ರಧಾನಿ ಅಟಲ ಬಿಹಾರಿ ವಾಜಪೇಯಿ ಅವರು, ‘ಖಾಸಗಿ ಕಂಪನಿಗಳ ಮೇಲೆ ಯಾವ ಮಿತಿಯನ್ನೂ ಹೇರದೆ ಆಸಕ್ತಿ ತೋರುವ ಎಲ್ಲಾ ಕಂಪನಿಗಳಿಗೂ ಅರ್ಹತೆ ಮೇಲೆ ಅವಕಾಶ ನೀಡಲಾಗುವುದು’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>