<p><strong>ಕರಾವಳಿಯಲ್ಲಿ ವಿದ್ಯುತ್ ಯೋಜನೆಗೆ ಪರಿಸರ ಖಾತೆ ಅನುಮತಿ ಇಲ್ಲ</strong></p>.<p>ಬೆಂಗಳೂರು, ನ. 4– ದಕ್ಷಿಣ ಕನ್ನಡದ ಕರಾವಳಿ ಪ್ರದೇಶದಲ್ಲಿ ಕೊಜೆಂಟ್ರಿಕ್ಸ್ ವಿದ್ಯುತ್ ಸ್ಥಾವರವೂ ಸೇರಿದಂತೆ ಯಾವುದೇ ಬೃಹತ್ ಉದ್ಯಮಕ್ಕೂ ರಾಜ್ಯದ ಪರಿಸರ ಇಲಾಖೆ ತನ್ನ ಅನುಮತಿಯನ್ನು ಕೊಟ್ಟಿಲ್ಲ ಎಂದು ಇಲಾಖೆಯ ಕಾರ್ಯದರ್ಶಿ ಎ.ಎನ್.ಯಲ್ಲಪ್ಪ ರೆಡ್ಡಿ ಇಂದು ಇಲ್ಲಿ ಹೇಳಿದರು.</p>.<p>ಜೀವಜಾಲ ಸಮತೋಲನ ಮತ್ತು ಪರಿಸರ ದೃಷ್ಟಿಯಿಂದ ಬಹುಸೂಕ್ಷ್ಮ ಪ್ರದೇಶವಾಗಿರುವ ಇದು ಬೃಹತ್ ಕೈಗಾರಿಕೆಗಳ ಸ್ಥಾಪನೆಗೆ ಸೂಕ್ತವಲ್ಲದ ಜಾಗ ಎನ್ನುವುದು ಇಲಾಖೆಯ ಅಭಿಮತ ಎಂದು ಅವರು ವಿವರಿಸಿದರು.</p>.<p><strong>ರಕ್ಷಿತ ಪ್ರಾಣಿಗಳು ಭಕ್ಷಣೆಗೆ</strong></p>.<p>ಬೀಜಿಂಗ್, ನ. 4 (ಡಿಪಿಎ)– ವಿನಾಶದ ಅಂಚಿನಲ್ಲಿರುವ ಪ್ರಾಣಿಗಳ ಮಾಂಸ ಬಳಸುತ್ತಿದ್ದ ಕಾರಣಕ್ಕೆ ಚೀನಾ ದೇಶದ ಅಧಿಕಾರಿಗಳು 19 ಹೋಟೆಲು ಹಾಗೂ ರೆಸ್ಟೊರೆಂಟ್ಗಳ ಲೈಸೆನ್ಸ್ ಅನ್ನು ರದ್ದು ಮಾಡಿದ ಘಟನೆ ಹೈನಾನ್ನ ದಕ್ಷಿಣ ದ್ವೀಪದಲ್ಲಿ ನಡೆದಿದೆ.</p>.<p>ಮೂರು ತಿಂಗಳ ಕಾಲ ಬಂದರು, ರೈಲು ನಿಲ್ದಾಣ, ರೈತರ ಮಾರುಕಟ್ಟೆ, ಅಂಗಡಿಗಳ ಮೇಲೆ ದಾಳಿ ನಡೆಸಿ 6,309 ವನ್ಯಪ್ರಾಣಿಗಳ ಮಾಂಸ ವಶಪಡಿಸಿಕೊಳ್ಳಲಾಯಿತು. ಇದರಲ್ಲಿ, ಸಂರಕ್ಷಿಸಬೇಕಾದ ಪ್ರಾಣಿಗಳ ಪಟ್ಟಿಯಲ್ಲಿ ಮೊದಲ ಆದ್ಯತೆಯಾಗಿರುವ 106 ಮತ್ತು ಎರಡನೇ ಆದ್ಯತೆಯಾಗಿರುವ 3,114 ಪ್ರಾಣಿಗಳ ಮಾಂಸ ಸೇರಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕರಾವಳಿಯಲ್ಲಿ ವಿದ್ಯುತ್ ಯೋಜನೆಗೆ ಪರಿಸರ ಖಾತೆ ಅನುಮತಿ ಇಲ್ಲ</strong></p>.<p>ಬೆಂಗಳೂರು, ನ. 4– ದಕ್ಷಿಣ ಕನ್ನಡದ ಕರಾವಳಿ ಪ್ರದೇಶದಲ್ಲಿ ಕೊಜೆಂಟ್ರಿಕ್ಸ್ ವಿದ್ಯುತ್ ಸ್ಥಾವರವೂ ಸೇರಿದಂತೆ ಯಾವುದೇ ಬೃಹತ್ ಉದ್ಯಮಕ್ಕೂ ರಾಜ್ಯದ ಪರಿಸರ ಇಲಾಖೆ ತನ್ನ ಅನುಮತಿಯನ್ನು ಕೊಟ್ಟಿಲ್ಲ ಎಂದು ಇಲಾಖೆಯ ಕಾರ್ಯದರ್ಶಿ ಎ.ಎನ್.ಯಲ್ಲಪ್ಪ ರೆಡ್ಡಿ ಇಂದು ಇಲ್ಲಿ ಹೇಳಿದರು.</p>.<p>ಜೀವಜಾಲ ಸಮತೋಲನ ಮತ್ತು ಪರಿಸರ ದೃಷ್ಟಿಯಿಂದ ಬಹುಸೂಕ್ಷ್ಮ ಪ್ರದೇಶವಾಗಿರುವ ಇದು ಬೃಹತ್ ಕೈಗಾರಿಕೆಗಳ ಸ್ಥಾಪನೆಗೆ ಸೂಕ್ತವಲ್ಲದ ಜಾಗ ಎನ್ನುವುದು ಇಲಾಖೆಯ ಅಭಿಮತ ಎಂದು ಅವರು ವಿವರಿಸಿದರು.</p>.<p><strong>ರಕ್ಷಿತ ಪ್ರಾಣಿಗಳು ಭಕ್ಷಣೆಗೆ</strong></p>.<p>ಬೀಜಿಂಗ್, ನ. 4 (ಡಿಪಿಎ)– ವಿನಾಶದ ಅಂಚಿನಲ್ಲಿರುವ ಪ್ರಾಣಿಗಳ ಮಾಂಸ ಬಳಸುತ್ತಿದ್ದ ಕಾರಣಕ್ಕೆ ಚೀನಾ ದೇಶದ ಅಧಿಕಾರಿಗಳು 19 ಹೋಟೆಲು ಹಾಗೂ ರೆಸ್ಟೊರೆಂಟ್ಗಳ ಲೈಸೆನ್ಸ್ ಅನ್ನು ರದ್ದು ಮಾಡಿದ ಘಟನೆ ಹೈನಾನ್ನ ದಕ್ಷಿಣ ದ್ವೀಪದಲ್ಲಿ ನಡೆದಿದೆ.</p>.<p>ಮೂರು ತಿಂಗಳ ಕಾಲ ಬಂದರು, ರೈಲು ನಿಲ್ದಾಣ, ರೈತರ ಮಾರುಕಟ್ಟೆ, ಅಂಗಡಿಗಳ ಮೇಲೆ ದಾಳಿ ನಡೆಸಿ 6,309 ವನ್ಯಪ್ರಾಣಿಗಳ ಮಾಂಸ ವಶಪಡಿಸಿಕೊಳ್ಳಲಾಯಿತು. ಇದರಲ್ಲಿ, ಸಂರಕ್ಷಿಸಬೇಕಾದ ಪ್ರಾಣಿಗಳ ಪಟ್ಟಿಯಲ್ಲಿ ಮೊದಲ ಆದ್ಯತೆಯಾಗಿರುವ 106 ಮತ್ತು ಎರಡನೇ ಆದ್ಯತೆಯಾಗಿರುವ 3,114 ಪ್ರಾಣಿಗಳ ಮಾಂಸ ಸೇರಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>