ನವದೆಹಲಿ, ಏ. 16– ವಿಶ್ವಾಸಮತದ ಮೇಲಿನ ಮತದಾನಕ್ಕೆ ಮುನ್ನಾದಿನವಾದ ಇಂದು, ಡಿಎಂಕೆ ಮತ್ತು ಓಂಪ್ರಕಾಶ ಚೌತಾಲ ಅವರ ಇಂಡಿಯನ್ ನ್ಯಾಷನಲ್ ಲೋಕದಳವು ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸರ್ಕಾರಕ್ಕೆ ಬೆಂಬಲ ಘೋಷಿಸಿದ್ದರಿಂದ ಹಾಗೂ ಬಿಎಸ್ಪಿ ತಟಸ್ಥ ನೀತಿ ಪ್ರಕಟಿಸಿದ್ದರಿಂದ, ಆಳುವ ಬಣ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.