<p><strong>‘ಇನ್ಸಾಟ್–2ಸಿ’ ಉಪಗ್ರಹ ಯಶಸ್ವಿ ಉಡಾವಣೆ</strong></p>.<p><strong>ಬೆಂಗಳೂರು, ಡಿ. 7–</strong> ಫ್ರೆಂಚ್ ಗಯಾನಾದಿಂದ ಇಂದು ಬೆಳಗಿನ ಜಾವ ಏರಿಯನ್– 4 ರಾಕೆಟ್ನ ಹೆಗಲೇರಿ ಮುಗಿಲಿಗೆ ಚಿಮ್ಮಿದ ‘ಇನ್ಸಾಟ್–2ಸಿ’ ಸಂಪರ್ಕ ಉಪಗ್ರಹ ಯಶಸ್ವಿಯಾಗಿ ನಿಗದಿತ ಕಕ್ಷೆ ತಲುಪಿದ್ದು, ಹಾಸನದ ನಿಯಂತ್ರಣ ಕೇಂದ್ರಕ್ಕೆ ಬಂದ ವರದಿಗಳ ಪ್ರಕಾರ ‘ಕ್ಷೇಮವಾಗಿದೆ’.</p>.<p>24 ಟ್ರಾನ್ಸ್ಪಾಂಡರ್ಗಳಿರುವ ‘ಇನ್ಸಾಟ್–2ಸಿ’ಯಿಂದ ದೂರದರ್ಶನ ಮತ್ತು ದೂರ ಸಂಪರ್ಕ ಇಲಾಖೆ ಗರಿಷ್ಠ ಲಾಭ ಪಡೆಯಲಿವೆ. ಈವರೆಗೆ<br />ಟ್ರಾನ್ಸ್ಪಾಂಡರ್ಗಳನ್ನು ಹಂಚಿಲ್ಲವಾದರೂ ಈ ಎರಡು ಇಲಾಖೆಗಳಿಗೇ ಇವುಗಳ ಸೇವೆ ದೊರೆಯುವುದು ಖಚಿತ. ‘ಇನ್ಸಾಟ್’ ಉಪಗ್ರಹ ಕುಟುಂಬದ ಒಟ್ಟು ಟ್ರಾನ್ಸ್ಪಾಂಡರ್ಗಳ ಸಂಖ್ಯೆ ಇದರೊಂದಿಗೆ 58ಕ್ಕೆ ಏರಲಿದೆ.</p>.<p><strong>ಪ್ರಧಾನಿ ಕಚೇರಿಯಲ್ಲೇ ಕಡತ ನಾಪತ್ತೆ</strong></p>.<p><strong>ನವದೆಹಲಿ, ಡಿ. 7 (ಪಿಟಿಐ)–</strong> ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹತ್ಯೆ ಪ್ರಕರಣದ ವಿಚಾರಣೆ ನಡೆಸುತ್ತಿರುವ ಜೈನ್ ಆಯೋಗ ಕೋರಿರುವ ಪ್ರಮುಖ ಕಡತವೊಂದು ಪ್ರಧಾನಿ ಕಚೇರಿಯಿಂದಲೇ ಕಾಣೆಯಾಗಿದೆ ಎಂದು ಕೇಂದ್ರ ಸರ್ಕಾರ ಇಂದು ಒಪ್ಪಿಕೊಂಡಿತು.</p>.<p>ಗೃಹ ಖಾತೆಯ ನಿರ್ದೇಶನದ ಮೇರೆಗೆ 1991ರ ಜುಲೈನಲ್ಲಿ ಪ್ರಧಾನಿಯವರ ಆಗಿನ ಆಪ್ತ ಕಾರ್ಯದರ್ಶಿಯವರಿಗೆ ಈ ಕಡತವನ್ನು ಕಳುಹಿಸಲಾಗಿತ್ತು. ಈ ಕಡತ ಬೇಕು ಎಂದು ಜೈನ್ ಆಯೋಗ ಕೇಳಿದೆ. ಆದರೆ ಗೃಹ ಖಾತೆ ಈ ಕಡತವನ್ನು ಇನ್ನೂ ಆಯೋಗಕ್ಕೆ ಹಿಂತಿರುಗಿಸಿಲ್ಲ ಎಂದು ರಾಜೀವ್ ಹತ್ಯೆ ತನಿಖೆಯನ್ನು ಸಮನ್ವಯಗೊಳಿಸುತ್ತಿರುವ ವಾಣಿಜ್ಯ ಸಚಿವ ಪಿ.ಚಿದಂಬರಂ ಲೋಕಸಭೆಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>‘ಇನ್ಸಾಟ್–2ಸಿ’ ಉಪಗ್ರಹ ಯಶಸ್ವಿ ಉಡಾವಣೆ</strong></p>.<p><strong>ಬೆಂಗಳೂರು, ಡಿ. 7–</strong> ಫ್ರೆಂಚ್ ಗಯಾನಾದಿಂದ ಇಂದು ಬೆಳಗಿನ ಜಾವ ಏರಿಯನ್– 4 ರಾಕೆಟ್ನ ಹೆಗಲೇರಿ ಮುಗಿಲಿಗೆ ಚಿಮ್ಮಿದ ‘ಇನ್ಸಾಟ್–2ಸಿ’ ಸಂಪರ್ಕ ಉಪಗ್ರಹ ಯಶಸ್ವಿಯಾಗಿ ನಿಗದಿತ ಕಕ್ಷೆ ತಲುಪಿದ್ದು, ಹಾಸನದ ನಿಯಂತ್ರಣ ಕೇಂದ್ರಕ್ಕೆ ಬಂದ ವರದಿಗಳ ಪ್ರಕಾರ ‘ಕ್ಷೇಮವಾಗಿದೆ’.</p>.<p>24 ಟ್ರಾನ್ಸ್ಪಾಂಡರ್ಗಳಿರುವ ‘ಇನ್ಸಾಟ್–2ಸಿ’ಯಿಂದ ದೂರದರ್ಶನ ಮತ್ತು ದೂರ ಸಂಪರ್ಕ ಇಲಾಖೆ ಗರಿಷ್ಠ ಲಾಭ ಪಡೆಯಲಿವೆ. ಈವರೆಗೆ<br />ಟ್ರಾನ್ಸ್ಪಾಂಡರ್ಗಳನ್ನು ಹಂಚಿಲ್ಲವಾದರೂ ಈ ಎರಡು ಇಲಾಖೆಗಳಿಗೇ ಇವುಗಳ ಸೇವೆ ದೊರೆಯುವುದು ಖಚಿತ. ‘ಇನ್ಸಾಟ್’ ಉಪಗ್ರಹ ಕುಟುಂಬದ ಒಟ್ಟು ಟ್ರಾನ್ಸ್ಪಾಂಡರ್ಗಳ ಸಂಖ್ಯೆ ಇದರೊಂದಿಗೆ 58ಕ್ಕೆ ಏರಲಿದೆ.</p>.<p><strong>ಪ್ರಧಾನಿ ಕಚೇರಿಯಲ್ಲೇ ಕಡತ ನಾಪತ್ತೆ</strong></p>.<p><strong>ನವದೆಹಲಿ, ಡಿ. 7 (ಪಿಟಿಐ)–</strong> ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹತ್ಯೆ ಪ್ರಕರಣದ ವಿಚಾರಣೆ ನಡೆಸುತ್ತಿರುವ ಜೈನ್ ಆಯೋಗ ಕೋರಿರುವ ಪ್ರಮುಖ ಕಡತವೊಂದು ಪ್ರಧಾನಿ ಕಚೇರಿಯಿಂದಲೇ ಕಾಣೆಯಾಗಿದೆ ಎಂದು ಕೇಂದ್ರ ಸರ್ಕಾರ ಇಂದು ಒಪ್ಪಿಕೊಂಡಿತು.</p>.<p>ಗೃಹ ಖಾತೆಯ ನಿರ್ದೇಶನದ ಮೇರೆಗೆ 1991ರ ಜುಲೈನಲ್ಲಿ ಪ್ರಧಾನಿಯವರ ಆಗಿನ ಆಪ್ತ ಕಾರ್ಯದರ್ಶಿಯವರಿಗೆ ಈ ಕಡತವನ್ನು ಕಳುಹಿಸಲಾಗಿತ್ತು. ಈ ಕಡತ ಬೇಕು ಎಂದು ಜೈನ್ ಆಯೋಗ ಕೇಳಿದೆ. ಆದರೆ ಗೃಹ ಖಾತೆ ಈ ಕಡತವನ್ನು ಇನ್ನೂ ಆಯೋಗಕ್ಕೆ ಹಿಂತಿರುಗಿಸಿಲ್ಲ ಎಂದು ರಾಜೀವ್ ಹತ್ಯೆ ತನಿಖೆಯನ್ನು ಸಮನ್ವಯಗೊಳಿಸುತ್ತಿರುವ ವಾಣಿಜ್ಯ ಸಚಿವ ಪಿ.ಚಿದಂಬರಂ ಲೋಕಸಭೆಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>