<p><strong>ನೀರು ಬಿಡದಿರಲು ರಾಜ್ಯದ ದೃಢ ಸಂಕಲ್ಪ<br />ಬೆಂಗಳೂರು, ಡಿ. 27–</strong> ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ರಾಜ್ಯಕ್ಕೆ ಆಗಿರುವ ಅನ್ಯಾಯದ ಬಗ್ಗೆ ಇಂದು ಇಲ್ಲಿ ಸೇರಿದ್ದ ಸರ್ವ ಪಕ್ಷಗಳ ಸಭೆಯು ಸುದೀರ್ಘವಾಗಿ ಚರ್ಚಿಸಿ ರಾಜ್ಯದ ರೈತರ ಹಿತ ರಕ್ಷಿಸಲು ಒಮ್ಮತದ ನಿಲುವು ತೆಗೆದುಕೊಳ್ಳಲು ನಿರ್ಧರಿಸಿತು. ಇಂದಿನ ಸಭೆ ಅಪೂರ್ಣಗೊಂಡಿದ್ದು ನಾಳೆ ಮುಂದುವರಿಯಲಿದೆ.</p>.<p>ತಮಿಳುನಾಡಿಗೆ 11 ಟಿಎಂಸಿ ಅಡಿ ನೀರು ಬಿಡುವಂತೆ ಕಾವೇರಿ ನ್ಯಾಯಮಂಡಲಿ ನೀಡಿರುವ ಆದೇಶ ಜಾರಿಗೊಳಿಸುವಂತೆ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್ಗೆ ಸಲ್ಲಿಸಿರುವ ಮೇಲ್ಮನವಿ ನಾಳೆ ವಿಚಾರಣೆಗೆ ಬರಲಿದ್ದು, ಅಲ್ಲಿ ಬರುವ ತೀರ್ಪು ಗಮನಿಸಿ ಸರ್ವಪಕ್ಷಗಳು ಅಂತಿಮ ನಿರ್ಧಾರ ತೆಗೆದುಕೊಳ್ಳಲಿವೆ.</p>.<p><strong>ಖ್ಯಾತ ಲೇಖಕಿ ಸಾವಿತ್ರಮ್ಮ ನಿಧನ<br />ಬೆಂಗಳೂರು, ಡಿ. 27–</strong> ಕನ್ನಡದ ಖ್ಯಾತ ಲೇಖಕಿ ಎಚ್.ವಿ. ಸಾವಿತ್ರಮ್ಮ ಇಂದು ಸಂಜೆ ತೀವ್ರ ಹೃದಯಾಘಾತದಿಂದ ನಿಧನ ಹೊಂದಿದರು. ಅವರಿಗೆ 82 ವರ್ಷವಾಗಿತ್ತು.</p>.<p>ಕಾದಂಬರಿಗಾರ್ತಿಯಾಗಿ, ಅನುವಾದಕಿಯಾಗಿ, ಸಣ್ಣ ಕತೆಗಾರ್ತಿಯಾಗಿ ಎಚ್.ವಿ. ಸಾವಿತ್ರಮ್ಮ ಅವರು ಸಲ್ಲಿಸಿದ ಸೇವೆ ಅನುಪಮವಾದುದು.</p>.<p>1992ರಲ್ಲಿ ನೀಡಲಾದ ಕರ್ನಾಟಕ ಲೇಖಕಿಯರ ಸಂಘದ ‘ಅನುಪಮ’ ಪ್ರಶಸ್ತಿಯನ್ನು ಗಳಿಸಿದ ಮೊದಲ ಲೇಖಕಿ ಇವರು. ‘ಸೀತೆ, ರಾಮ, ರಾವಣ’ (1980), ‘ವಿಮುಕ್ತಿ’ (1990) ಇವರ ಕಾದಂಬರಿಗಳು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನೀರು ಬಿಡದಿರಲು ರಾಜ್ಯದ ದೃಢ ಸಂಕಲ್ಪ<br />ಬೆಂಗಳೂರು, ಡಿ. 27–</strong> ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ರಾಜ್ಯಕ್ಕೆ ಆಗಿರುವ ಅನ್ಯಾಯದ ಬಗ್ಗೆ ಇಂದು ಇಲ್ಲಿ ಸೇರಿದ್ದ ಸರ್ವ ಪಕ್ಷಗಳ ಸಭೆಯು ಸುದೀರ್ಘವಾಗಿ ಚರ್ಚಿಸಿ ರಾಜ್ಯದ ರೈತರ ಹಿತ ರಕ್ಷಿಸಲು ಒಮ್ಮತದ ನಿಲುವು ತೆಗೆದುಕೊಳ್ಳಲು ನಿರ್ಧರಿಸಿತು. ಇಂದಿನ ಸಭೆ ಅಪೂರ್ಣಗೊಂಡಿದ್ದು ನಾಳೆ ಮುಂದುವರಿಯಲಿದೆ.</p>.<p>ತಮಿಳುನಾಡಿಗೆ 11 ಟಿಎಂಸಿ ಅಡಿ ನೀರು ಬಿಡುವಂತೆ ಕಾವೇರಿ ನ್ಯಾಯಮಂಡಲಿ ನೀಡಿರುವ ಆದೇಶ ಜಾರಿಗೊಳಿಸುವಂತೆ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್ಗೆ ಸಲ್ಲಿಸಿರುವ ಮೇಲ್ಮನವಿ ನಾಳೆ ವಿಚಾರಣೆಗೆ ಬರಲಿದ್ದು, ಅಲ್ಲಿ ಬರುವ ತೀರ್ಪು ಗಮನಿಸಿ ಸರ್ವಪಕ್ಷಗಳು ಅಂತಿಮ ನಿರ್ಧಾರ ತೆಗೆದುಕೊಳ್ಳಲಿವೆ.</p>.<p><strong>ಖ್ಯಾತ ಲೇಖಕಿ ಸಾವಿತ್ರಮ್ಮ ನಿಧನ<br />ಬೆಂಗಳೂರು, ಡಿ. 27–</strong> ಕನ್ನಡದ ಖ್ಯಾತ ಲೇಖಕಿ ಎಚ್.ವಿ. ಸಾವಿತ್ರಮ್ಮ ಇಂದು ಸಂಜೆ ತೀವ್ರ ಹೃದಯಾಘಾತದಿಂದ ನಿಧನ ಹೊಂದಿದರು. ಅವರಿಗೆ 82 ವರ್ಷವಾಗಿತ್ತು.</p>.<p>ಕಾದಂಬರಿಗಾರ್ತಿಯಾಗಿ, ಅನುವಾದಕಿಯಾಗಿ, ಸಣ್ಣ ಕತೆಗಾರ್ತಿಯಾಗಿ ಎಚ್.ವಿ. ಸಾವಿತ್ರಮ್ಮ ಅವರು ಸಲ್ಲಿಸಿದ ಸೇವೆ ಅನುಪಮವಾದುದು.</p>.<p>1992ರಲ್ಲಿ ನೀಡಲಾದ ಕರ್ನಾಟಕ ಲೇಖಕಿಯರ ಸಂಘದ ‘ಅನುಪಮ’ ಪ್ರಶಸ್ತಿಯನ್ನು ಗಳಿಸಿದ ಮೊದಲ ಲೇಖಕಿ ಇವರು. ‘ಸೀತೆ, ರಾಮ, ರಾವಣ’ (1980), ‘ವಿಮುಕ್ತಿ’ (1990) ಇವರ ಕಾದಂಬರಿಗಳು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>