ಪ್ರತಿ ಪಕ್ಷ ಧರಣಿ, ಗದ್ದಲ: ರಾಜ್ಯಪಾಲರ ಭಾಷಣ ಮೊಟಕು
ಬೆಂಗಳೂರು, ಮಾರ್ಚ್ 9– ವಿರೋಧ ಪಕ್ಷದ ಸದಸ್ಯರ ಧರಣಿ, ಪ್ರತಿಭಟಣೆ, ಜಾಗಟೆಯ ಸದ್ದು–ಗದ್ದಲಗಳೊಂದಿಗೆ ಕೂಡಿದ್ದ ವಿಧಾನ ಮಂಡಲದ ಜಂಟಿ ಅಧಿವೇಶನದಲ್ಲಿ ಧಿಕ್ಕಾರ, ಆರ್ಭಟಗಳಿಂದ ಕುಪಿತರಾದ ರಾಜ್ಯಪಾಲ ಖುರ್ಷಿದ್ ಆಲಂ ಖಾನ್ ಅವರು ತಮ್ಮ ಭಾಷಣವನ್ನು ಅರ್ಧಕ್ಕೇ ನಿಲ್ಲಿಸಿ ಹೊರ ನಡೆದ ಅಪರೂಪದ ಘಟನೆ ಇಂದು ನಡೆಯಿತು.