<p><strong>ಕೃಷ್ಣಾ, ವಿ.ಸಿ. ನಾಲಾ ಗುತ್ತಿಗೆ ನ್ಯಾಯಾಂಗ ತನಿಖೆಗೆ ಆಗ್ರಹ<br />ಬೆಂಗಳೂರು, ಸೆ. 2–</strong> ಕೃಷ್ಣಾ ಮೇಲ್ಡಂಡೆ ಯೋಜನೆ ಕಾಮಗಾರಿಗಳಲ್ಲಿ ನಿಯಮಗಳನ್ನು ಉಲ್ಲಂಘಿಸಿ ನೀಡಿರುವ ತುಂಡು ಗುತ್ತಿಗೆ ವ್ಯವಹಾರ: ವಿಶ್ವೇಶ್ವರಯ್ಯ ನಾಲಾ ಆಧುನೀಕರಣ ಯೋಜನೆಯ ಅಸಮರ್ಪಕ ಕಾಮ ಗಾರಿ ಬಗೆಗೆ ನ್ಯಾಯಾಂಗ ವಿಚಾರಣೆ ನಡೆಸು ವಂತೆ ವಿರೋಧ ಪಕ್ಷದ ನಾಯಕ ಎಂ. ಮಲ್ಲಿಕಾರ್ಜುನ ಖರ್ಗೆ ಅವರು ಇಂದು ವಿಧಾನಸಭೆಯಲ್ಲಿ ಸರ್ಕಾರವನ್ನು ಆಗ್ರಹಿಸಿದರು.</p>.<p>ಭಾರಿ ನೀರಾವರಿ ಇಲಾಖೆಯ ಬೇಡಿಕೆ ಮೇಲಿನ ಚರ್ಚೆ ಆರಂಭಿಸಿದ ಅವರು, ನೀರಾವರಿ ಕಾಮಗಾರಿಗಳಲ್ಲಿ ಅನೇಕ ಕಡೆ ನಡೆದಿರುವ ಅವ್ಯವಹಾರಗಳನ್ನೂ ನ್ಯಾಯಾಂಗ ವಿಚಾರಣೆಗೆ ಒಪ್ಪಿಸಬೇಕೆಂದು ಒತ್ತಾಯಿಸಿದರು. ನೀರಾವರಿ ಯೋಜನೆಗಳ ಅನುಷ್ಠಾನದಲ್ಲಿ ನಿರ್ಲಕ್ಷ್ಯ ವೈಫಲ್ಯತೆಯೇ ಈ ಸರ್ಕಾರದ ಸಾಧನೆಯಾಗಿದೆ ಎಂದು ಟೀಕೆಗಳ ಸುರಿಮಳೆಗರೆದರು.</p>.<p><strong>ಖ್ಯಾತ ಅನುವಾದಕ ಅಹೋಬಲ ಶಂಕರ ಇನ್ನಿಲ್ಲ<br />ಬೆಂಗಳೂರು, ಸೆ. 2– </strong>ಶರತ್ ಚಂದ್ರ, ರವೀಂದ್ರನಾಥ ಠಾಗೋರ್ ಮುಂತಾದ ಖ್ಯಾತ ಬಂಗಾಳಿ ಲೇಖಕರ ಮಹತ್ವದ ಕಾದಂಬರಿಗಳನ್ನು ಹಲವು ದಶಕಗಳ ಹಿಂದೆ ಕನ್ನಡಕ್ಕೆ ಅನುವಾದಿಸಿದ್ದ ಖ್ಯಾತ ಸಾಹಿತಿ ಹಾಗೂ ಪತ್ರಕರ್ತ ಅಹೋಬಲ ಶಂಕರ (85) ಅವರು ಇಂದು ಬೆಳಗಿನ ಜಾವ ಮುಂಬೈನಲ್ಲಿ ನಿಧನರಾದರು.</p>.<p>ಬೆಂಗಳೂರಿನವರಾದ ಅವರು ಇಲ್ಲಿನ ಸೆಂಟ್ರಲ್ ಕಾಲೇಜಿನಲ್ಲಿ ಬಿಎಸ್.ಸಿ. ಪದವಿ ಪಡೆದಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೃಷ್ಣಾ, ವಿ.ಸಿ. ನಾಲಾ ಗುತ್ತಿಗೆ ನ್ಯಾಯಾಂಗ ತನಿಖೆಗೆ ಆಗ್ರಹ<br />ಬೆಂಗಳೂರು, ಸೆ. 2–</strong> ಕೃಷ್ಣಾ ಮೇಲ್ಡಂಡೆ ಯೋಜನೆ ಕಾಮಗಾರಿಗಳಲ್ಲಿ ನಿಯಮಗಳನ್ನು ಉಲ್ಲಂಘಿಸಿ ನೀಡಿರುವ ತುಂಡು ಗುತ್ತಿಗೆ ವ್ಯವಹಾರ: ವಿಶ್ವೇಶ್ವರಯ್ಯ ನಾಲಾ ಆಧುನೀಕರಣ ಯೋಜನೆಯ ಅಸಮರ್ಪಕ ಕಾಮ ಗಾರಿ ಬಗೆಗೆ ನ್ಯಾಯಾಂಗ ವಿಚಾರಣೆ ನಡೆಸು ವಂತೆ ವಿರೋಧ ಪಕ್ಷದ ನಾಯಕ ಎಂ. ಮಲ್ಲಿಕಾರ್ಜುನ ಖರ್ಗೆ ಅವರು ಇಂದು ವಿಧಾನಸಭೆಯಲ್ಲಿ ಸರ್ಕಾರವನ್ನು ಆಗ್ರಹಿಸಿದರು.</p>.<p>ಭಾರಿ ನೀರಾವರಿ ಇಲಾಖೆಯ ಬೇಡಿಕೆ ಮೇಲಿನ ಚರ್ಚೆ ಆರಂಭಿಸಿದ ಅವರು, ನೀರಾವರಿ ಕಾಮಗಾರಿಗಳಲ್ಲಿ ಅನೇಕ ಕಡೆ ನಡೆದಿರುವ ಅವ್ಯವಹಾರಗಳನ್ನೂ ನ್ಯಾಯಾಂಗ ವಿಚಾರಣೆಗೆ ಒಪ್ಪಿಸಬೇಕೆಂದು ಒತ್ತಾಯಿಸಿದರು. ನೀರಾವರಿ ಯೋಜನೆಗಳ ಅನುಷ್ಠಾನದಲ್ಲಿ ನಿರ್ಲಕ್ಷ್ಯ ವೈಫಲ್ಯತೆಯೇ ಈ ಸರ್ಕಾರದ ಸಾಧನೆಯಾಗಿದೆ ಎಂದು ಟೀಕೆಗಳ ಸುರಿಮಳೆಗರೆದರು.</p>.<p><strong>ಖ್ಯಾತ ಅನುವಾದಕ ಅಹೋಬಲ ಶಂಕರ ಇನ್ನಿಲ್ಲ<br />ಬೆಂಗಳೂರು, ಸೆ. 2– </strong>ಶರತ್ ಚಂದ್ರ, ರವೀಂದ್ರನಾಥ ಠಾಗೋರ್ ಮುಂತಾದ ಖ್ಯಾತ ಬಂಗಾಳಿ ಲೇಖಕರ ಮಹತ್ವದ ಕಾದಂಬರಿಗಳನ್ನು ಹಲವು ದಶಕಗಳ ಹಿಂದೆ ಕನ್ನಡಕ್ಕೆ ಅನುವಾದಿಸಿದ್ದ ಖ್ಯಾತ ಸಾಹಿತಿ ಹಾಗೂ ಪತ್ರಕರ್ತ ಅಹೋಬಲ ಶಂಕರ (85) ಅವರು ಇಂದು ಬೆಳಗಿನ ಜಾವ ಮುಂಬೈನಲ್ಲಿ ನಿಧನರಾದರು.</p>.<p>ಬೆಂಗಳೂರಿನವರಾದ ಅವರು ಇಲ್ಲಿನ ಸೆಂಟ್ರಲ್ ಕಾಲೇಜಿನಲ್ಲಿ ಬಿಎಸ್.ಸಿ. ಪದವಿ ಪಡೆದಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>