<p><strong>ಚುನಾಯಿತ ಸರ್ಕಾರಗಳ ಪತನ ಚಳವಳಿಗಳ ಗುರಿ: ಇಂದಿರಾ ಖಂಡನೆ</strong></p><p><strong>ನವದೆಹಲಿ, ಸೆ. 11–</strong> ಆರ್ಥಿಕ ಸಂಕಷ್ಟಗಳ ಕಾರಣದಿಂದ ಜನರಲ್ಲಿರುವ ಅಸಮಾಧಾನವನ್ನು ಕೆರಳಿಸಿ ಭಾರತಕ್ಕೆ ವಿರೋಧಿಯಾಗಿರುವ ಶಕ್ತಿಗಳು ಚಿಲಿಯಲ್ಲಿನಂತೆ ಇಲ್ಲಿ ಸಹ ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ಸರ್ಕಾರಗಳನ್ನು ಉರುಳಿಸಲು ಪ್ರಯತ್ನಿಸುತ್ತಿವೆಯೆಂದು ಪ್ರಧಾನಿ ಇಂದಿರಾ ಗಾಂಧಿ ಎಚ್ಚರಿಸಿದ್ದಾರೆ.</p><p>ಸಂಸದೀಯ ಕಾಂಗ್ರೆಸ್ ಪಕ್ಷದ ಸಭೆಯಲ್ಲಿ ಮಾತನಾಡಿದ ಅವರು, ಬಿಹಾರ ಮತ್ತಿತರ ಕಡೆ ನಡೆಯುತ್ತಿರುವ ಚಳವಳಿಗಳಲ್ಲಿ ಭಾಗವಹಿಸುತ್ತಿರುವವರಲ್ಲಿ ಆರ್.ಎಸ್.ಎಸ್. ಸದಸ್ಯರು, ನಕ್ಸಲೀಯರು ಮತ್ತು ಆನಂದಮಾರ್ಗಿಗಳು ಇದ್ದಾರೆಂದರು.</p><p>***</p><p><strong>ಎಷ್ಟು ಗರ್ವ?</strong></p><p><strong>ಬೆಂಗಳೂರು, </strong>ಆ. 11– ಈ ಅಧಿಕಾರಿಗೆ ಎಷ್ಟು ಗರ್ವ?</p><p>ಬುಧವಾರ ವಿಧಾನ ಪರಿಷತ್ತಿನಲ್ಲಿ ಈ ಕುಪಿತ ಮಾತು ಹಾಗೂ ಅದೇ ಧಾಟಿಯಲ್ಲಿ ಟೀಕೆ ಬಂದದ್ದು ರಾಜ್ಯದ ಎಕ್ಸೈಜ್ ಕಮಿಷನರ್ ಬಗ್ಗೆ. ಈ ಅಧಿಕಾರಿಯ ಬಗ್ಗೆ ಎಲ್ಲ ಪಕ್ಷಗಳ ಸದಸ್ಯರಿಂದ ಖಂಡನೆ.</p><p>ಪುದುಚೇರಿಯಿಂದ ಮಾಹೆಗೆ ತೆರಳುತ್ತಿದ್ದ ಮದ್ಯವಿದ್ದ ಲಾರಿಯೊಂದನ್ನು ಹಿಡಿದ ಪ್ರಕರಣ ಇದು. ಅಬ್ಕಾರಿ ಕಮಿಷನರ್ ಅವರ ವರ್ತನೆ ಕುರಿತು ರಾಜ್ಯದ ಹೈಕೋರ್ಟ್ ಸಹ<br>ಟೀಕಿಸಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚುನಾಯಿತ ಸರ್ಕಾರಗಳ ಪತನ ಚಳವಳಿಗಳ ಗುರಿ: ಇಂದಿರಾ ಖಂಡನೆ</strong></p><p><strong>ನವದೆಹಲಿ, ಸೆ. 11–</strong> ಆರ್ಥಿಕ ಸಂಕಷ್ಟಗಳ ಕಾರಣದಿಂದ ಜನರಲ್ಲಿರುವ ಅಸಮಾಧಾನವನ್ನು ಕೆರಳಿಸಿ ಭಾರತಕ್ಕೆ ವಿರೋಧಿಯಾಗಿರುವ ಶಕ್ತಿಗಳು ಚಿಲಿಯಲ್ಲಿನಂತೆ ಇಲ್ಲಿ ಸಹ ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ಸರ್ಕಾರಗಳನ್ನು ಉರುಳಿಸಲು ಪ್ರಯತ್ನಿಸುತ್ತಿವೆಯೆಂದು ಪ್ರಧಾನಿ ಇಂದಿರಾ ಗಾಂಧಿ ಎಚ್ಚರಿಸಿದ್ದಾರೆ.</p><p>ಸಂಸದೀಯ ಕಾಂಗ್ರೆಸ್ ಪಕ್ಷದ ಸಭೆಯಲ್ಲಿ ಮಾತನಾಡಿದ ಅವರು, ಬಿಹಾರ ಮತ್ತಿತರ ಕಡೆ ನಡೆಯುತ್ತಿರುವ ಚಳವಳಿಗಳಲ್ಲಿ ಭಾಗವಹಿಸುತ್ತಿರುವವರಲ್ಲಿ ಆರ್.ಎಸ್.ಎಸ್. ಸದಸ್ಯರು, ನಕ್ಸಲೀಯರು ಮತ್ತು ಆನಂದಮಾರ್ಗಿಗಳು ಇದ್ದಾರೆಂದರು.</p><p>***</p><p><strong>ಎಷ್ಟು ಗರ್ವ?</strong></p><p><strong>ಬೆಂಗಳೂರು, </strong>ಆ. 11– ಈ ಅಧಿಕಾರಿಗೆ ಎಷ್ಟು ಗರ್ವ?</p><p>ಬುಧವಾರ ವಿಧಾನ ಪರಿಷತ್ತಿನಲ್ಲಿ ಈ ಕುಪಿತ ಮಾತು ಹಾಗೂ ಅದೇ ಧಾಟಿಯಲ್ಲಿ ಟೀಕೆ ಬಂದದ್ದು ರಾಜ್ಯದ ಎಕ್ಸೈಜ್ ಕಮಿಷನರ್ ಬಗ್ಗೆ. ಈ ಅಧಿಕಾರಿಯ ಬಗ್ಗೆ ಎಲ್ಲ ಪಕ್ಷಗಳ ಸದಸ್ಯರಿಂದ ಖಂಡನೆ.</p><p>ಪುದುಚೇರಿಯಿಂದ ಮಾಹೆಗೆ ತೆರಳುತ್ತಿದ್ದ ಮದ್ಯವಿದ್ದ ಲಾರಿಯೊಂದನ್ನು ಹಿಡಿದ ಪ್ರಕರಣ ಇದು. ಅಬ್ಕಾರಿ ಕಮಿಷನರ್ ಅವರ ವರ್ತನೆ ಕುರಿತು ರಾಜ್ಯದ ಹೈಕೋರ್ಟ್ ಸಹ<br>ಟೀಕಿಸಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>