<p><strong>ಹಂಗಾಮಿ ಬಾಂಗ್ಲಾದೇಶ ಸರ್ಕಾರ ರಚನೆ; ಢಾಕಾ ಕಡೆಗೆ ದಂಡಯಾತ್ರೆ</strong></p>.<p>ಕಲ್ಕತ್ತ, ಮಾರ್ಚ್ 28– ಹಂಗಾಮಿ ಬಾಂಗ್ಲಾ ದೇಶ್ ಸರ್ಕಾರವನ್ನು ರಚಿಸಲಾಗಿದೆಯೆಂದು ಸ್ವತಂತ್ರ ಬಾಂಗ್ಲಾ ರೇಡಿಯೊ ಇಂದು ಪ್ರಕಟಿಸಿ ತನ್ನ ವಿಮೋಚನಾ ಸೇನೆಯು ಚಿತ್ತಗಾಂಗಿನಿಂದ ಢಾಕಾಗೆ ದಂಡಯಾತ್ರೆ ಹೊರಟಿದೆಯೆಂದು ತಿಳಿಸಿತು.</p>.<p>ಹೊಸ ಸರ್ಕಾರಕ್ಕೆ ಕೂಡಲೇ ಮಾನ್ಯತೆ ನೀಡಬೇಕೆಂದು ವಿಶ್ವದ ಎಲ್ಲ ಸ್ವತಂತ್ರ ರಾಷ್ಟ್ರಗಳಿಗೆ ಅದರಲ್ಲೂ ನೆರೆರಾಷ್ಟ್ರಗಳಿಗೆ ರೇಡಿಯೊ ಮನವಿ ಮಾಡಿಕೊಂಡಿದೆ.</p>.<p>ಚಿತ್ತಗಾಂಗ್ನಲ್ಲಿರುವ ತಮ್ಮ ಕ್ರಾಂತಿಕಾರಿ ಪ್ರಧಾನ ನೆಲೆಯಿಂದ ವಿಮೋಚನೆ ಸಮರವನ್ನು ನಿರ್ದೇಶಿಸು ತ್ತಿರುವ ‘ಬಾಂಗ್ಲಾ ಬಂಧು’ ಶೇಖ್ ಮುಜೀಬುರ್ ರಹಮಾನ್ರವರು ಸರ್ಕಾರಕ್ಕೆ ಮಾರ್ಗದರ್ಶನ ನೀಡುವರೆಂದೂ ರೇಡಿಯೊ ಹೇಳಿದೆ.</p>.<p><strong>‘ಮನ ಒಲಿಸುವ ಶಾಸ್ತ್ರ’ ಸಾಹಿತ್ಯ ಕಿರುಕುಳ ಆಗಬಾರದು: ಬೇಂದ್ರೆ</strong></p>.<p>ಬೆಂಗಳೂರು, ಮಾರ್ಚ್ 28– ಸಾಹಿತ್ಯವನ್ನು ‘ಮನ ಒಲಿಸುವ ಶಾಸ್ತ್ರ’ ಎಂದು ಇಂದು ಇಲ್ಲಿ ಕರೆದ ಕವಿ ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರು ‘ಸಾಹಿತ್ಯವು ಕಿರುಕುಳ ಆಗಬಾರದು’ ಎಂದರು.</p>.<p>ಸಹಕಾರ, ಸಹಭಾವವಿಲ್ಲದವನಿಗೆ ಸಾಹಿತ್ಯವಿಲ್ಲವೆಂದ ಅವರು, ‘ಸಾಹಿತ್ಯದಲ್ಲಿ ಬಹಿಷ್ಕಾರದ ಮಾತಿಲ್ಲ. ಸಾಹಿತ್ಯದಲ್ಲಿ ಸ್ಪರ್ಶಜನ್ಯ ರೋಗ ಸಲ್ಲದು’ ಎಂದರು.</p>.<p>ಬೆಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಆಶ್ರಯದಲ್ಲಿ ‘ಹೊಸಗನ್ನಡ ಕಾವ್ಯದ ಎರಡು ಮಾರ್ಗಗಳು’ ಕುರಿತ ಮೂರು ದಿನಗಳ ವಿಚಾರ ಸಂಕಿರಣವನ್ನು ಉದ್ಘಾಟಿಸಿದ ಬೇಂದ್ರೆಯವರು, ‘ಸಾಂಕೇತಿಕ ಸಾಹಿತ್ಯದಲ್ಲಿ ಸಹನೆ ಅಭ್ಯಾಸ ಮಾಡದಿದ್ದರೆ ಜೀವನದಲ್ಲಿ ಸಹನೆ ಹೇಗೆ ಬರುತ್ತೆ?’ ಎಂದು ಕೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಂಗಾಮಿ ಬಾಂಗ್ಲಾದೇಶ ಸರ್ಕಾರ ರಚನೆ; ಢಾಕಾ ಕಡೆಗೆ ದಂಡಯಾತ್ರೆ</strong></p>.<p>ಕಲ್ಕತ್ತ, ಮಾರ್ಚ್ 28– ಹಂಗಾಮಿ ಬಾಂಗ್ಲಾ ದೇಶ್ ಸರ್ಕಾರವನ್ನು ರಚಿಸಲಾಗಿದೆಯೆಂದು ಸ್ವತಂತ್ರ ಬಾಂಗ್ಲಾ ರೇಡಿಯೊ ಇಂದು ಪ್ರಕಟಿಸಿ ತನ್ನ ವಿಮೋಚನಾ ಸೇನೆಯು ಚಿತ್ತಗಾಂಗಿನಿಂದ ಢಾಕಾಗೆ ದಂಡಯಾತ್ರೆ ಹೊರಟಿದೆಯೆಂದು ತಿಳಿಸಿತು.</p>.<p>ಹೊಸ ಸರ್ಕಾರಕ್ಕೆ ಕೂಡಲೇ ಮಾನ್ಯತೆ ನೀಡಬೇಕೆಂದು ವಿಶ್ವದ ಎಲ್ಲ ಸ್ವತಂತ್ರ ರಾಷ್ಟ್ರಗಳಿಗೆ ಅದರಲ್ಲೂ ನೆರೆರಾಷ್ಟ್ರಗಳಿಗೆ ರೇಡಿಯೊ ಮನವಿ ಮಾಡಿಕೊಂಡಿದೆ.</p>.<p>ಚಿತ್ತಗಾಂಗ್ನಲ್ಲಿರುವ ತಮ್ಮ ಕ್ರಾಂತಿಕಾರಿ ಪ್ರಧಾನ ನೆಲೆಯಿಂದ ವಿಮೋಚನೆ ಸಮರವನ್ನು ನಿರ್ದೇಶಿಸು ತ್ತಿರುವ ‘ಬಾಂಗ್ಲಾ ಬಂಧು’ ಶೇಖ್ ಮುಜೀಬುರ್ ರಹಮಾನ್ರವರು ಸರ್ಕಾರಕ್ಕೆ ಮಾರ್ಗದರ್ಶನ ನೀಡುವರೆಂದೂ ರೇಡಿಯೊ ಹೇಳಿದೆ.</p>.<p><strong>‘ಮನ ಒಲಿಸುವ ಶಾಸ್ತ್ರ’ ಸಾಹಿತ್ಯ ಕಿರುಕುಳ ಆಗಬಾರದು: ಬೇಂದ್ರೆ</strong></p>.<p>ಬೆಂಗಳೂರು, ಮಾರ್ಚ್ 28– ಸಾಹಿತ್ಯವನ್ನು ‘ಮನ ಒಲಿಸುವ ಶಾಸ್ತ್ರ’ ಎಂದು ಇಂದು ಇಲ್ಲಿ ಕರೆದ ಕವಿ ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರು ‘ಸಾಹಿತ್ಯವು ಕಿರುಕುಳ ಆಗಬಾರದು’ ಎಂದರು.</p>.<p>ಸಹಕಾರ, ಸಹಭಾವವಿಲ್ಲದವನಿಗೆ ಸಾಹಿತ್ಯವಿಲ್ಲವೆಂದ ಅವರು, ‘ಸಾಹಿತ್ಯದಲ್ಲಿ ಬಹಿಷ್ಕಾರದ ಮಾತಿಲ್ಲ. ಸಾಹಿತ್ಯದಲ್ಲಿ ಸ್ಪರ್ಶಜನ್ಯ ರೋಗ ಸಲ್ಲದು’ ಎಂದರು.</p>.<p>ಬೆಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಆಶ್ರಯದಲ್ಲಿ ‘ಹೊಸಗನ್ನಡ ಕಾವ್ಯದ ಎರಡು ಮಾರ್ಗಗಳು’ ಕುರಿತ ಮೂರು ದಿನಗಳ ವಿಚಾರ ಸಂಕಿರಣವನ್ನು ಉದ್ಘಾಟಿಸಿದ ಬೇಂದ್ರೆಯವರು, ‘ಸಾಂಕೇತಿಕ ಸಾಹಿತ್ಯದಲ್ಲಿ ಸಹನೆ ಅಭ್ಯಾಸ ಮಾಡದಿದ್ದರೆ ಜೀವನದಲ್ಲಿ ಸಹನೆ ಹೇಗೆ ಬರುತ್ತೆ?’ ಎಂದು ಕೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>