<p><strong>ಬಾಂಗ್ಲಾ ದೇಶಕ್ಕೆ ನಿರಾಶ್ರಿತರ ವಾಪಸ್: ಭಾರತದ ದೃಢ ನಿರ್ಧಾರ</strong></p>.<p><strong>ನವದೆಹಲಿ, ಜೂನ್ 17–</strong> ಬಾಂಗ್ಲಾದೇಶ<br />ದಲ್ಲಿ ಪರಿಸ್ಥಿತಿ ಸುಧಾರಿಸಿದ ಕೂಡಲೇ ನಿರಾಶ್ರಿತರನ್ನು ವಾಪಸು ಕಳುಹಿಸಿಬಿಡಲು ಭಾರತ ನಿರ್ಧರಿಸಿದೆ ಎಂದು ಪ್ರಧಾನಿ ಇಂದಿರಾಗಾಂಧಿ ಇಂದು ಮತ್ತೆ<br />ಸ್ಪಷ್ಟಪಡಿಸಿದರು.</p>.<p>ವೃತ್ತ ಪತ್ರಿಕೆಗಳ ಆರ್ಥಿಕ ವಿಭಾಗದ ಸಂಪಾದಕರುಗಳೊಂದಿಗೆ ಅವರು ಮಾತನಾಡುತ್ತಿದ್ದರು. ಒಂದು ಗಂಟೆ ಕಾಲ ನಡೆದ ಈ ಸಭೆಯಲ್ಲಿ ನಿರಾಶ್ರಿತರ ವಲಸೆಯಿಂದ ಉದ್ಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಅವರಿಗೆ ಪ್ರಶ್ನೆಗಳನ್ನು ಕೇಳಲಾಯಿತು.</p>.<p>60 ಲಕ್ಷಕ್ಕೂ ಹೆಚ್ಚಿರುವ ಬಾಂಗ್ಲಾ ನಿರಾಶ್ರಿತರು ಭಾರತಕ್ಕೆ ಹೊರಲಾರದ ಹೊಣೆಯಾಗಿದ್ದಾರೆ. ಇಂಥ ಹೊಣೆಯನ್ನು ಇಷ್ಟು ಅತ್ಯಲ್ಪ ಅವಧಿಯಲ್ಲಿ ಹೊರುವ ಸಂದರ್ಭ ವಿಶ್ವದಲ್ಲಿ ಯಾವ ರಾಷ್ಟ್ರಕ್ಕೂ ಉಂಟಾಗಿರಲಿಲ್ಲ ಎಂದೂ ಪ್ರಧಾನಿ ನುಡಿದರು.</p>.<p><strong>ಕಾಸರಗೋಡಿನಲ್ಲಿ ಹರಿಜನರಿಗೆ ಚಿಪ್ಪಿನಲ್ಲಿ ಟೀ</strong></p>.<p><strong>ಕೊಚ್ಚಿ, ಜೂನ್ 17– </strong>ಕೇರಳದ ಕಾಸರಗೋಡು ತಾಲ್ಲೂಕಿನಲ್ಲಿ ಹರಿಜನ ಮತ್ತು ಗಿರಿಜನರು ಇಂದೂ ಕೂಡ<br />ಅಸ್ಪೃಶ್ಯತೆಯಿಂದ ತೊಂದರೆಗೀಡಾಗಿದ್ದಾರೆ.</p>.<p>ಕೇರಳದ ಹರಿಜನ ಕ್ಷೇಮಾಭ್ಯುದಯ ಖಾತೆ ಸಚಿವ ಪಿ.ಕೆ. ರಾಘವನ್ ಅವರು ಇಂದು ಈ ವಿಷಯವನ್ನು ಇಲ್ಲಿ ಪ್ರಕಟಿಸುತ್ತ ಈ ಜನರಿಗೆ, ಟೀ ಅಂಗಡಿ ಮತ್ತು ಹೋಟೆಲ್ಗಳಲ್ಲಿ ಗಾಜಿನ ಲೋಟಗಳಿಗೆ ಬದಲು ತೆಂಗಿನ ಚಿಪ್ಪುಗಳಲ್ಲಿ ಟೀ ಕೊಡಲಾಗುತ್ತಿದೆ ಎಂದು ತಿಳಿಸಿದರು.</p>.<p>ಅಸ್ಪೃಶ್ಯತೆ ಕುರಿತ ಕಾನೂನನ್ನು ಜಾರಿಗೆ ತರಲು ತೀವ್ರ ಕ್ರಮ ಕೈಗೊಳ್ಳುವ ವಿಷಯ ಸರ್ಕಾರದ ಪರಿಶೀಲನೆಯಲ್ಲಿರುವುದಾಗಿ ಅವರು ನುಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾಂಗ್ಲಾ ದೇಶಕ್ಕೆ ನಿರಾಶ್ರಿತರ ವಾಪಸ್: ಭಾರತದ ದೃಢ ನಿರ್ಧಾರ</strong></p>.<p><strong>ನವದೆಹಲಿ, ಜೂನ್ 17–</strong> ಬಾಂಗ್ಲಾದೇಶ<br />ದಲ್ಲಿ ಪರಿಸ್ಥಿತಿ ಸುಧಾರಿಸಿದ ಕೂಡಲೇ ನಿರಾಶ್ರಿತರನ್ನು ವಾಪಸು ಕಳುಹಿಸಿಬಿಡಲು ಭಾರತ ನಿರ್ಧರಿಸಿದೆ ಎಂದು ಪ್ರಧಾನಿ ಇಂದಿರಾಗಾಂಧಿ ಇಂದು ಮತ್ತೆ<br />ಸ್ಪಷ್ಟಪಡಿಸಿದರು.</p>.<p>ವೃತ್ತ ಪತ್ರಿಕೆಗಳ ಆರ್ಥಿಕ ವಿಭಾಗದ ಸಂಪಾದಕರುಗಳೊಂದಿಗೆ ಅವರು ಮಾತನಾಡುತ್ತಿದ್ದರು. ಒಂದು ಗಂಟೆ ಕಾಲ ನಡೆದ ಈ ಸಭೆಯಲ್ಲಿ ನಿರಾಶ್ರಿತರ ವಲಸೆಯಿಂದ ಉದ್ಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಅವರಿಗೆ ಪ್ರಶ್ನೆಗಳನ್ನು ಕೇಳಲಾಯಿತು.</p>.<p>60 ಲಕ್ಷಕ್ಕೂ ಹೆಚ್ಚಿರುವ ಬಾಂಗ್ಲಾ ನಿರಾಶ್ರಿತರು ಭಾರತಕ್ಕೆ ಹೊರಲಾರದ ಹೊಣೆಯಾಗಿದ್ದಾರೆ. ಇಂಥ ಹೊಣೆಯನ್ನು ಇಷ್ಟು ಅತ್ಯಲ್ಪ ಅವಧಿಯಲ್ಲಿ ಹೊರುವ ಸಂದರ್ಭ ವಿಶ್ವದಲ್ಲಿ ಯಾವ ರಾಷ್ಟ್ರಕ್ಕೂ ಉಂಟಾಗಿರಲಿಲ್ಲ ಎಂದೂ ಪ್ರಧಾನಿ ನುಡಿದರು.</p>.<p><strong>ಕಾಸರಗೋಡಿನಲ್ಲಿ ಹರಿಜನರಿಗೆ ಚಿಪ್ಪಿನಲ್ಲಿ ಟೀ</strong></p>.<p><strong>ಕೊಚ್ಚಿ, ಜೂನ್ 17– </strong>ಕೇರಳದ ಕಾಸರಗೋಡು ತಾಲ್ಲೂಕಿನಲ್ಲಿ ಹರಿಜನ ಮತ್ತು ಗಿರಿಜನರು ಇಂದೂ ಕೂಡ<br />ಅಸ್ಪೃಶ್ಯತೆಯಿಂದ ತೊಂದರೆಗೀಡಾಗಿದ್ದಾರೆ.</p>.<p>ಕೇರಳದ ಹರಿಜನ ಕ್ಷೇಮಾಭ್ಯುದಯ ಖಾತೆ ಸಚಿವ ಪಿ.ಕೆ. ರಾಘವನ್ ಅವರು ಇಂದು ಈ ವಿಷಯವನ್ನು ಇಲ್ಲಿ ಪ್ರಕಟಿಸುತ್ತ ಈ ಜನರಿಗೆ, ಟೀ ಅಂಗಡಿ ಮತ್ತು ಹೋಟೆಲ್ಗಳಲ್ಲಿ ಗಾಜಿನ ಲೋಟಗಳಿಗೆ ಬದಲು ತೆಂಗಿನ ಚಿಪ್ಪುಗಳಲ್ಲಿ ಟೀ ಕೊಡಲಾಗುತ್ತಿದೆ ಎಂದು ತಿಳಿಸಿದರು.</p>.<p>ಅಸ್ಪೃಶ್ಯತೆ ಕುರಿತ ಕಾನೂನನ್ನು ಜಾರಿಗೆ ತರಲು ತೀವ್ರ ಕ್ರಮ ಕೈಗೊಳ್ಳುವ ವಿಷಯ ಸರ್ಕಾರದ ಪರಿಶೀಲನೆಯಲ್ಲಿರುವುದಾಗಿ ಅವರು ನುಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>