<p>ಖಾಸಗಿ ಸಕ್ಕರೆ ಕಾರ್ಖಾನೆಗಳ ರಾಷ್ಟ್ರೀಕರಣಕ್ಕೆ ಶಿಫಾರಸು</p>.<p>ನವದೆಹಲಿ, ಏ. 15– ಸಹಕಾರಿ ಕ್ಷೇತ್ರಕ್ಕೆ ಸೇರದಿರುವ ಸಕ್ಕರೆ ಕಾರ್ಖಾನೆಗಳನ್ನು <br>ರಾಷ್ಟ್ರೀಕರಿಸಬೇಕೆಂದು ಸಕ್ಕರೆ ಉದ್ಯಮ ವಿಚಾರಣಾ ಆಯೋಗವು ಶಿಫಾರಸು ಮಾಡಿದೆ.</p>.<p>ಸಹಕಾರೇತರ ಕಾರ್ಖಾನೆಗಳವರು ತಮ್ಮ ಸಂಸ್ಥೆಗಳನ್ನು ಸಾರ್ವಜನಿಕರ ಷೇರು ಬಂಡವಾಳಕ್ಕೂ ಅವಕಾಶವಿರುವ ಉದ್ಯಮ ಸಂಸ್ಥೆಗಳನ್ನಾಗಿ ನಿಶ್ಚಿತ ಅವಧಿಯೊಳಗೆ ಪರಿವರ್ತಿಸಲು ಒಪ್ಪಿಕೊಂಡರೆ ಅವನ್ನು ರಾಷ್ಟ್ರೀಕರಿಸಬಾರದೆಂದು ಆಯೋಗದ ಅಧ್ಯಕ್ಷರನ್ನೂ ಒಳಗೊಂಡಂತೆ ಅರ್ಧದಷ್ಟು ಸದಸ್ಯರು ಅಭಿಪ್ರಾಯಪಟ್ಟಿದ್ದರು. ಆದರೂ ಇನ್ನರ್ಧ ಜನ ರಾಷ್ಟ್ರೀಕರಣದ ಪರವಾಗಿ ಶಿಫಾರಸು ಮಾಡಿದರು.</p>.<p>ಅಧ್ಯಕ್ಷ ವಿ. ಭಾರ್ಗವ ಹಾಗೂ ಇತರ ನಾಲ್ವರು ಒಂದು ಶಿಫಾರಸನ್ನು, ಇನ್ನು ಐವರು ಇನ್ನೊಂದು ಶಿಫಾರಸನ್ನು ನೀಡಿದರು.</p>.<p>ಕಚ್ಚಾ ವಸ್ತುಗಳ ಪೋಲು ನಿಲ್ಲಿಸಿ ಉದ್ಯಮಿಗಳಿಗೆ ಪ್ರಧಾನಿ ಇಂದಿರಾ ಕರೆ</p>.<p>ನವದೆಹಲಿ, ಏ. 15– ಕೊರತೆಯಿರುವ ಕೈಗಾರಿಕಾ ಕಚ್ಚಾವಸ್ತುಗಳು ಪೋಲಾಗುವು ದನ್ನು ತಡೆಯಲು ಹಾಗೂ ಉತ್ಪಾದನಾವೃದ್ಧಿಗೆ ಬಂಡವಾಳ ದೊರೆಯುವಂತೆ ಉಳಿತಾಯ ಹೆಚ್ಚಿಸಲು ಸಹಕಾರ ನೀಡಬೇಕು ಎಂದು ಉದ್ಯಮಿಗಳಿಗೆ ಪ್ರಧಾನಿ ಇಂದಿರಾ ಗಾಂಧಿ ಅವರು ಇಂದು ಕರೆ ನೀಡಿದರು.</p>.<p>ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಸಂಘಗಳ ಫೆಡರೇಷನ್ನಿನ ವಾರ್ಷಿಕ <br>ಅಧಿವೇಶನವನ್ನು ಉದ್ಘಾಟಿಸಿದ ಅವರು, ವಿಶ್ವದಾದ್ಯಂತ ಉಲ್ಬಣಗೊಂಡಿರುವ ಕಚ್ಚಾವಸ್ತು ಕೊರತೆ ಹಾಗೂ ದುಬಾರಿ ಬೆಲೆಗಳನ್ನು ಪ್ರಸ್ತಾಪಿಸಿ, ಇಂಥ ಪರಿಸ್ಥಿತಿಯಲ್ಲೂ ರಾಷ್ಟ್ರದಲ್ಲಿ ಅವುಗಳು ಸಾಕಷ್ಟು <br>ಪೋಲಾಗುತ್ತಿರುವುದು ಸರಿಯಲ್ಲ ಎಂದರು.</p>.<p>ಎಲ್.ಎಂ.ಪಿ. ಮಾದರಿಯ ಅಲ್ಪಾವಧಿ ವೈದ್ಯಕೀಯ ಶಿಕ್ಷಣಕ್ಕೆ ಎಚ್ಚೆನ್ ಕರೆ</p>.<p>ಬೆಂಗಳೂರು, ಏ. 15– ದೇಶದ ಅಗತ್ಯವನ್ನು ಪೂರೈಸಬಲ್ಲ ಹಾಗೂ ಬಡವರ ಮಕ್ಕಳಿಗೂ ಕೈಗೆಟಕುವ ಹಿಂದಿನ ಎಲ್.ಎಂ.ಪಿ. ಮಾದರಿಯ ಅಲ್ಪಾವಧಿಯ ವೈದ್ಯಕೀಯ ಶಿಕ್ಷಣವನ್ನು ಜಾರಿಗೆ ತರುವುದು ಅಗತ್ಯ ಎಂದು ಬೆಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ. ಎಚ್. ನರಸಿಂಹಯ್ಯ ಅವರು ಇಂದು ಇಲ್ಲಿ ನುಡಿದರು.</p>.<p>ಭಾರತದ ವಿದ್ಯಾರ್ಥಿ ದಾದಿಯರ ಸಂಘದ ರಾಜ್ಯಮಟ್ಟದ ಸಮ್ಮೇಳನ ಉದ್ಘಾಟಿಸಿದ ಅವರು, ಇಂದಿನ <br>ಎಂ.ಬಿ.ಬಿ.ಎಸ್. ಶಿಕ್ಷಣ ಸಾಮಾನ್ಯರ ಮಕ್ಕಳಿಗೆ ದೊರಕದಷ್ಟು ದುಬಾರಿಯಾಗಿದ್ದು ಒಬ್ಬ ವೈದ್ಯ ತಯಾರಾಗಲು ಒಂದು ಲಕ್ಷ ರೂಪಾಯಿ ವೆಚ್ಚ ಮಾಡಬೇಕಾದ ಪ್ರಸಂಗ ಇದೆ ಎಂದರು.</p>.<p>ಪ್ರತಿಯೊಬ್ಬ ವೈದ್ಯನೂ ಪ್ರತಿಯೊಂದು ವಿಭಾಗದಲ್ಲೂ ಪರಿಣತನಾಗಿರಬೇಕೆಂಬ ಭಾವನೆ ತಪ್ಪು ಎಂದು ಅವರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಖಾಸಗಿ ಸಕ್ಕರೆ ಕಾರ್ಖಾನೆಗಳ ರಾಷ್ಟ್ರೀಕರಣಕ್ಕೆ ಶಿಫಾರಸು</p>.<p>ನವದೆಹಲಿ, ಏ. 15– ಸಹಕಾರಿ ಕ್ಷೇತ್ರಕ್ಕೆ ಸೇರದಿರುವ ಸಕ್ಕರೆ ಕಾರ್ಖಾನೆಗಳನ್ನು <br>ರಾಷ್ಟ್ರೀಕರಿಸಬೇಕೆಂದು ಸಕ್ಕರೆ ಉದ್ಯಮ ವಿಚಾರಣಾ ಆಯೋಗವು ಶಿಫಾರಸು ಮಾಡಿದೆ.</p>.<p>ಸಹಕಾರೇತರ ಕಾರ್ಖಾನೆಗಳವರು ತಮ್ಮ ಸಂಸ್ಥೆಗಳನ್ನು ಸಾರ್ವಜನಿಕರ ಷೇರು ಬಂಡವಾಳಕ್ಕೂ ಅವಕಾಶವಿರುವ ಉದ್ಯಮ ಸಂಸ್ಥೆಗಳನ್ನಾಗಿ ನಿಶ್ಚಿತ ಅವಧಿಯೊಳಗೆ ಪರಿವರ್ತಿಸಲು ಒಪ್ಪಿಕೊಂಡರೆ ಅವನ್ನು ರಾಷ್ಟ್ರೀಕರಿಸಬಾರದೆಂದು ಆಯೋಗದ ಅಧ್ಯಕ್ಷರನ್ನೂ ಒಳಗೊಂಡಂತೆ ಅರ್ಧದಷ್ಟು ಸದಸ್ಯರು ಅಭಿಪ್ರಾಯಪಟ್ಟಿದ್ದರು. ಆದರೂ ಇನ್ನರ್ಧ ಜನ ರಾಷ್ಟ್ರೀಕರಣದ ಪರವಾಗಿ ಶಿಫಾರಸು ಮಾಡಿದರು.</p>.<p>ಅಧ್ಯಕ್ಷ ವಿ. ಭಾರ್ಗವ ಹಾಗೂ ಇತರ ನಾಲ್ವರು ಒಂದು ಶಿಫಾರಸನ್ನು, ಇನ್ನು ಐವರು ಇನ್ನೊಂದು ಶಿಫಾರಸನ್ನು ನೀಡಿದರು.</p>.<p>ಕಚ್ಚಾ ವಸ್ತುಗಳ ಪೋಲು ನಿಲ್ಲಿಸಿ ಉದ್ಯಮಿಗಳಿಗೆ ಪ್ರಧಾನಿ ಇಂದಿರಾ ಕರೆ</p>.<p>ನವದೆಹಲಿ, ಏ. 15– ಕೊರತೆಯಿರುವ ಕೈಗಾರಿಕಾ ಕಚ್ಚಾವಸ್ತುಗಳು ಪೋಲಾಗುವು ದನ್ನು ತಡೆಯಲು ಹಾಗೂ ಉತ್ಪಾದನಾವೃದ್ಧಿಗೆ ಬಂಡವಾಳ ದೊರೆಯುವಂತೆ ಉಳಿತಾಯ ಹೆಚ್ಚಿಸಲು ಸಹಕಾರ ನೀಡಬೇಕು ಎಂದು ಉದ್ಯಮಿಗಳಿಗೆ ಪ್ರಧಾನಿ ಇಂದಿರಾ ಗಾಂಧಿ ಅವರು ಇಂದು ಕರೆ ನೀಡಿದರು.</p>.<p>ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಸಂಘಗಳ ಫೆಡರೇಷನ್ನಿನ ವಾರ್ಷಿಕ <br>ಅಧಿವೇಶನವನ್ನು ಉದ್ಘಾಟಿಸಿದ ಅವರು, ವಿಶ್ವದಾದ್ಯಂತ ಉಲ್ಬಣಗೊಂಡಿರುವ ಕಚ್ಚಾವಸ್ತು ಕೊರತೆ ಹಾಗೂ ದುಬಾರಿ ಬೆಲೆಗಳನ್ನು ಪ್ರಸ್ತಾಪಿಸಿ, ಇಂಥ ಪರಿಸ್ಥಿತಿಯಲ್ಲೂ ರಾಷ್ಟ್ರದಲ್ಲಿ ಅವುಗಳು ಸಾಕಷ್ಟು <br>ಪೋಲಾಗುತ್ತಿರುವುದು ಸರಿಯಲ್ಲ ಎಂದರು.</p>.<p>ಎಲ್.ಎಂ.ಪಿ. ಮಾದರಿಯ ಅಲ್ಪಾವಧಿ ವೈದ್ಯಕೀಯ ಶಿಕ್ಷಣಕ್ಕೆ ಎಚ್ಚೆನ್ ಕರೆ</p>.<p>ಬೆಂಗಳೂರು, ಏ. 15– ದೇಶದ ಅಗತ್ಯವನ್ನು ಪೂರೈಸಬಲ್ಲ ಹಾಗೂ ಬಡವರ ಮಕ್ಕಳಿಗೂ ಕೈಗೆಟಕುವ ಹಿಂದಿನ ಎಲ್.ಎಂ.ಪಿ. ಮಾದರಿಯ ಅಲ್ಪಾವಧಿಯ ವೈದ್ಯಕೀಯ ಶಿಕ್ಷಣವನ್ನು ಜಾರಿಗೆ ತರುವುದು ಅಗತ್ಯ ಎಂದು ಬೆಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ. ಎಚ್. ನರಸಿಂಹಯ್ಯ ಅವರು ಇಂದು ಇಲ್ಲಿ ನುಡಿದರು.</p>.<p>ಭಾರತದ ವಿದ್ಯಾರ್ಥಿ ದಾದಿಯರ ಸಂಘದ ರಾಜ್ಯಮಟ್ಟದ ಸಮ್ಮೇಳನ ಉದ್ಘಾಟಿಸಿದ ಅವರು, ಇಂದಿನ <br>ಎಂ.ಬಿ.ಬಿ.ಎಸ್. ಶಿಕ್ಷಣ ಸಾಮಾನ್ಯರ ಮಕ್ಕಳಿಗೆ ದೊರಕದಷ್ಟು ದುಬಾರಿಯಾಗಿದ್ದು ಒಬ್ಬ ವೈದ್ಯ ತಯಾರಾಗಲು ಒಂದು ಲಕ್ಷ ರೂಪಾಯಿ ವೆಚ್ಚ ಮಾಡಬೇಕಾದ ಪ್ರಸಂಗ ಇದೆ ಎಂದರು.</p>.<p>ಪ್ರತಿಯೊಬ್ಬ ವೈದ್ಯನೂ ಪ್ರತಿಯೊಂದು ವಿಭಾಗದಲ್ಲೂ ಪರಿಣತನಾಗಿರಬೇಕೆಂಬ ಭಾವನೆ ತಪ್ಪು ಎಂದು ಅವರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>