<p><strong>ಇಂದಿರಾ ಆಸ್ತಿ ನಾಲ್ಕು ಎಕರೆ ಭೂಮಿ ಮಾತ್ರ<br />ನವದೆಹಲಿ, ನ. 26–</strong> ದೆಹಲಿ ಸಮೀಪದಲ್ಲಿರುವ ನಾಲ್ಕು ಎಕರೆ ಜಮೀನನ್ನು ಬಿಟ್ಟರೆ ತಮಗೆ ಭಾರತದಲ್ಲಿ ಅಥವಾ ವಿದೇಶಗಳಲ್ಲಿ ಬೇರೆಲ್ಲಿಯೂ ಯಾವ ಆಸ್ತಿಯೂ ಇಲ್ಲವೆಂದು ಪ್ರಧಾನಿ ಇಂದಿರಾ ಗಾಂಧಿ ಇಂದು ರಾಜ್ಯಸಭೆಗೆ ತಿಳಿಸಿದರು.</p>.<p>ಕೇಂದ್ರ ಸಚಿವರುಗಳ ಆಸ್ತಿ ಕುರಿತ ನಿರಂಜನ ವರ್ಮ ಮತ್ತು ರಾಜ್ನಾರಾಯಣ್ರ ಪ್ರಶ್ನೆಗೆ ಉತ್ತರವಿತ್ತ ಇಂದಿರಾ ಗಾಂಧಿ, ಕೇಂದ್ರ ಸಚಿವರು ಅವರ ಹಾಗೂ ಅವರ ಹತ್ತಿರದ ಬಂಧುಗಳ ಆಸ್ತಿ ವಿವರಗಳನ್ನು ತಮಗೆ ತಿಳಿಸುವುದಾಗಿಯೂ ಅದನ್ನು ರಹಸ್ಯ ವಿಷಯವಾಗಿ ಪರಿಗಣಿಸಲಾಗಿದೆಯೆಂದೂ ತಿಳಿಸಿದರು.</p>.<p><strong>ಭಾರತದಿಂದ ಭೂಗರ್ಭ ಅಣು ಸ್ಫೋಟ ಸಂಭವ ಎಂದು ಪ್ರಧಾನಿ<br />ನವದೆಹಲಿ, ನ. 26–</strong> ಶಾಂತಿಯುತ ಉದ್ದೇಶಗಳಿಗಾಗಿ ಅಣುಶಕ್ತಿಯನ್ನು ಬಳಸುವ ಸರ್ಕಾರದ ನೀತಿಯಲ್ಲಿ ‘ಭೂಗರ್ಭದಲ್ಲಿ ಅಣುಸಾಧನ ಸ್ಫೋಟವೂ ಸೇರಿದೆ’ ಎಂದು ಪ್ರಧಾನಿ ಇಂದಿರಾ ಗಾಂಧಿಯವರು ಇಂದು ರಾಜ್ಯಸಭೆಯಲ್ಲಿ ಹೇಳಿದರು.</p>.<p>ಭೂಗರ್ಭ ಅಣುಸಾಧನ ಸ್ಫೋಟಗಳ ಬಗೆಗೆ ಭಾರತವು ತನ್ನ ತಾಂತ್ರಿಕ ಜ್ಞಾನವನ್ನು ಅಭಿವೃದ್ಧಿಗೊಳಿಸಿಕೊಳ್ಳುತ್ತಿದೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಇಂದಿರಾ ಆಸ್ತಿ ನಾಲ್ಕು ಎಕರೆ ಭೂಮಿ ಮಾತ್ರ<br />ನವದೆಹಲಿ, ನ. 26–</strong> ದೆಹಲಿ ಸಮೀಪದಲ್ಲಿರುವ ನಾಲ್ಕು ಎಕರೆ ಜಮೀನನ್ನು ಬಿಟ್ಟರೆ ತಮಗೆ ಭಾರತದಲ್ಲಿ ಅಥವಾ ವಿದೇಶಗಳಲ್ಲಿ ಬೇರೆಲ್ಲಿಯೂ ಯಾವ ಆಸ್ತಿಯೂ ಇಲ್ಲವೆಂದು ಪ್ರಧಾನಿ ಇಂದಿರಾ ಗಾಂಧಿ ಇಂದು ರಾಜ್ಯಸಭೆಗೆ ತಿಳಿಸಿದರು.</p>.<p>ಕೇಂದ್ರ ಸಚಿವರುಗಳ ಆಸ್ತಿ ಕುರಿತ ನಿರಂಜನ ವರ್ಮ ಮತ್ತು ರಾಜ್ನಾರಾಯಣ್ರ ಪ್ರಶ್ನೆಗೆ ಉತ್ತರವಿತ್ತ ಇಂದಿರಾ ಗಾಂಧಿ, ಕೇಂದ್ರ ಸಚಿವರು ಅವರ ಹಾಗೂ ಅವರ ಹತ್ತಿರದ ಬಂಧುಗಳ ಆಸ್ತಿ ವಿವರಗಳನ್ನು ತಮಗೆ ತಿಳಿಸುವುದಾಗಿಯೂ ಅದನ್ನು ರಹಸ್ಯ ವಿಷಯವಾಗಿ ಪರಿಗಣಿಸಲಾಗಿದೆಯೆಂದೂ ತಿಳಿಸಿದರು.</p>.<p><strong>ಭಾರತದಿಂದ ಭೂಗರ್ಭ ಅಣು ಸ್ಫೋಟ ಸಂಭವ ಎಂದು ಪ್ರಧಾನಿ<br />ನವದೆಹಲಿ, ನ. 26–</strong> ಶಾಂತಿಯುತ ಉದ್ದೇಶಗಳಿಗಾಗಿ ಅಣುಶಕ್ತಿಯನ್ನು ಬಳಸುವ ಸರ್ಕಾರದ ನೀತಿಯಲ್ಲಿ ‘ಭೂಗರ್ಭದಲ್ಲಿ ಅಣುಸಾಧನ ಸ್ಫೋಟವೂ ಸೇರಿದೆ’ ಎಂದು ಪ್ರಧಾನಿ ಇಂದಿರಾ ಗಾಂಧಿಯವರು ಇಂದು ರಾಜ್ಯಸಭೆಯಲ್ಲಿ ಹೇಳಿದರು.</p>.<p>ಭೂಗರ್ಭ ಅಣುಸಾಧನ ಸ್ಫೋಟಗಳ ಬಗೆಗೆ ಭಾರತವು ತನ್ನ ತಾಂತ್ರಿಕ ಜ್ಞಾನವನ್ನು ಅಭಿವೃದ್ಧಿಗೊಳಿಸಿಕೊಳ್ಳುತ್ತಿದೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>