ನವದೆಹಲಿ, ಫೆ. 28– ನಿಗದಿಯಾದ ಕಾಲಕ್ಕಿಂತ ಒಂದು ವರ್ಷ ಮೊದಲೇ ನಡೆಯುವಂತೆ ಆಜ್ಞೆ ಮಾಡಿರುವ ಲೋಕಸಭೆಯ ಐದನೇ ಸಾರ್ವತ್ರಿಕ ಚುನಾವಣೆಯ ಮೊದಲ ಹಂತದ ಮತದಾನ ರಾಷ್ಟ್ರದ ಏಳು ರಾಜ್ಯಗಳ ಹಲವು ಭಾಗಗಳಲ್ಲಿ ನಾಳೆ ಆರಂಭವಾಗಲಿವೆ.
ಅಸ್ಸಾಂ, ಬಿಹಾರ, ಗುಜರಾತ್, ಮಧ್ಯಪ್ರದೇಶ, ಮಹಾರಾಷ್ಟ್ರ, ತಮಿಳುನಾಡು, ಉತ್ತರ ಪ್ರದೇಶ, ಅಂಡಮಾನ್ ಮತ್ತು ನಿಕೋಬಾರ್ನಲ್ಲಿ ನಾಳೆ ಮತದಾನ ಸಂಪೂರ್ಣವಾಗಿ ಮುಕ್ತಾಯವಾಗಲಿದೆ.
ವಿದ್ಯಾರ್ಥಿನಿಲಯದಲ್ಲಿ ಭಾರಿ ಶಸ್ತ್ರಾಸ್ತ್ರ ಸಂಗ್ರಹ
ಕಲ್ಕತ್ತ, ಫೆ.28– ದಕ್ಷಿಣ ಕಲ್ಕತ್ತದ ಜಾದವಪುರ ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿಲಯದಲ್ಲಿ ‘ಶಸ್ತ್ರಾಸ್ತ್ರ ಸಂಗ್ರಹ’ ವಿರುವುದನ್ನು ಇಂದು ಪೊಲೀಸರು ಪತ್ತೆ ಹಚ್ಚಿದರು.
ನಕ್ಸಲಿಯರೆಂದು ಶಂಕಿಸಲಾದ ವಿದ್ಯಾರ್ಥಿನಿಲಯದವರು ಹಾಗೂ ಪೊಲೀಸರ ನಡುವೆ ಗುಂಡಿನ ವಿನಿಮಯ ನಡೆಯಿತು. ಗುಂಡಿನ ದಾಳಿಯಲ್ಲಿ 7 ಮಂದಿ ಪೊಲೀಸ್ ಅಧಿಕಾರಿಗಳು ಹಾಗೂ ಇತರರು ಗಾಯಗೊಂಡರು.