<p><strong>ಶನಿವಾರ 21/7/1973</strong></p>.<h2>ಯೋಜನಾ ಕಾರ್ಯಕ್ರಮ ರೂಪಿಸಲು ಕಾರ್ಮಿಕ ನಾಯಕರಿಗೆ ಧರ್ ಕರೆ</h2>.<p>ನವದೆಹಲಿ, ಜುಲೈ 20– ‘ಸಂಘಟಿತ ಪಟ್ಟಭದ್ರ ಹಿತಗಳು’ ಯೋಜನಾ ವ್ಯವಸ್ಥೆ ವಿರುದ್ಧ ದಾಳಿ ಮಾಡುತ್ತಿರುವಾಗ ರಾಷ್ಟ್ರದಲ್ಲಿ ಕಾರ್ಮಿಕ ಚಳವಳಿ ನಾಯಕರು ಯೋಜನೆ ಬಗ್ಗೆ ಕಾರ್ಯವಿಧಾನವೊಂದನ್ನು ಒಪ್ಪಿಕೊಳ್ಳಬೇಕೆಂದು ಯೋಜನಾ ಸಚಿವ ಡಿ.ಪಿ. ಧರ್ ಅವರು ಇಂದು ಕರೆಕೊಟ್ಟರು.</p>.<p>ಐದನೇ ಯೋಜನೆಯ ಕರಡು ಕುರಿತು ಚರ್ಚಿಸಲು ಕಾರ್ಮಿಕ ಸಂಘಗಳ ನಾಯಕರು ಸೇರಿದ್ದ ಮೊದಲ ಸಭೆಯನ್ನುದ್ದೇಶಿಸಿ ಮಾತನಾಡಿದ ಧರ್ ಅವರು ಯೋಜನೆಯ ತತ್ವ ಮತ್ತು ವ್ಯವಸ್ಥೆಗೆ ಸಂಘಟಿತ ಕಾರ್ಮಿಕ ವರ್ಗ ಬದ್ಧವಾಗಿದೆ ಎಂದರು.</p>.<h2>ವಾಟರ್ಗೇಟ್ ಹಗರಣ: ಸೆನೆಟ್ ಸಮಿತಿಗೆ ಧ್ವನಿಮುದ್ರಿಕೆ ಒಪ್ಪಿಸಲು ನಿಕ್ಸನ್ ನಿರಾಕರಣೆ</h2>.<p>ವಾಷಿಂಗ್ಟನ್, ಜುಲೈ 20– ವಾಟರ್ಗೇಟ್ ಹಗರಣಕ್ಕೆ ಸಂಬಂಧಿಸಿದಂತೆ ತಮ್ಮ ಸಲಹೆಗಾರರ ಜೊತೆ ನಡೆಸಿದ ಸಮಾಲೋಚನೆಯ ಧ್ವನಿ ಮುದ್ರಿಕೆಗಳನ್ನು ಅಧ್ಯಕ್ಷ ನಿಕ್ಸನ್ ಅವರು ಸೆನೆಟ್ ಸಮಿತಿಗೆ ಒಪ್ಪಿಸುವುದಿಲ್ಲವೆಂದು ‘ದಿ ನ್ಯೂಯಾರ್ಕ್ ಟೈಮ್ಸ್’ ಮತ್ತು ‘ದಿ ವಾಷಿಂಗ್ಟನ್ ಪೋಸ್ಟ್’ ಇಂದು ವರದಿ ಮಾಡಿದೆ.</p>.<p>ಧ್ವನಿ ಮುದ್ರಿಕೆಗಳನ್ನು ನೀಡಲು ನಿರಾಕರಿಸಿ ಅಧ್ಯಕ್ಷ ನಿಕ್ಸನ್ ಅವರು ವಾರಾಂತ್ಯದಲ್ಲಿ ಸೆನೆಟ್ ಸಮಿತಿಗೆ ಪತ್ರ ಬರೆಯಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶನಿವಾರ 21/7/1973</strong></p>.<h2>ಯೋಜನಾ ಕಾರ್ಯಕ್ರಮ ರೂಪಿಸಲು ಕಾರ್ಮಿಕ ನಾಯಕರಿಗೆ ಧರ್ ಕರೆ</h2>.<p>ನವದೆಹಲಿ, ಜುಲೈ 20– ‘ಸಂಘಟಿತ ಪಟ್ಟಭದ್ರ ಹಿತಗಳು’ ಯೋಜನಾ ವ್ಯವಸ್ಥೆ ವಿರುದ್ಧ ದಾಳಿ ಮಾಡುತ್ತಿರುವಾಗ ರಾಷ್ಟ್ರದಲ್ಲಿ ಕಾರ್ಮಿಕ ಚಳವಳಿ ನಾಯಕರು ಯೋಜನೆ ಬಗ್ಗೆ ಕಾರ್ಯವಿಧಾನವೊಂದನ್ನು ಒಪ್ಪಿಕೊಳ್ಳಬೇಕೆಂದು ಯೋಜನಾ ಸಚಿವ ಡಿ.ಪಿ. ಧರ್ ಅವರು ಇಂದು ಕರೆಕೊಟ್ಟರು.</p>.<p>ಐದನೇ ಯೋಜನೆಯ ಕರಡು ಕುರಿತು ಚರ್ಚಿಸಲು ಕಾರ್ಮಿಕ ಸಂಘಗಳ ನಾಯಕರು ಸೇರಿದ್ದ ಮೊದಲ ಸಭೆಯನ್ನುದ್ದೇಶಿಸಿ ಮಾತನಾಡಿದ ಧರ್ ಅವರು ಯೋಜನೆಯ ತತ್ವ ಮತ್ತು ವ್ಯವಸ್ಥೆಗೆ ಸಂಘಟಿತ ಕಾರ್ಮಿಕ ವರ್ಗ ಬದ್ಧವಾಗಿದೆ ಎಂದರು.</p>.<h2>ವಾಟರ್ಗೇಟ್ ಹಗರಣ: ಸೆನೆಟ್ ಸಮಿತಿಗೆ ಧ್ವನಿಮುದ್ರಿಕೆ ಒಪ್ಪಿಸಲು ನಿಕ್ಸನ್ ನಿರಾಕರಣೆ</h2>.<p>ವಾಷಿಂಗ್ಟನ್, ಜುಲೈ 20– ವಾಟರ್ಗೇಟ್ ಹಗರಣಕ್ಕೆ ಸಂಬಂಧಿಸಿದಂತೆ ತಮ್ಮ ಸಲಹೆಗಾರರ ಜೊತೆ ನಡೆಸಿದ ಸಮಾಲೋಚನೆಯ ಧ್ವನಿ ಮುದ್ರಿಕೆಗಳನ್ನು ಅಧ್ಯಕ್ಷ ನಿಕ್ಸನ್ ಅವರು ಸೆನೆಟ್ ಸಮಿತಿಗೆ ಒಪ್ಪಿಸುವುದಿಲ್ಲವೆಂದು ‘ದಿ ನ್ಯೂಯಾರ್ಕ್ ಟೈಮ್ಸ್’ ಮತ್ತು ‘ದಿ ವಾಷಿಂಗ್ಟನ್ ಪೋಸ್ಟ್’ ಇಂದು ವರದಿ ಮಾಡಿದೆ.</p>.<p>ಧ್ವನಿ ಮುದ್ರಿಕೆಗಳನ್ನು ನೀಡಲು ನಿರಾಕರಿಸಿ ಅಧ್ಯಕ್ಷ ನಿಕ್ಸನ್ ಅವರು ವಾರಾಂತ್ಯದಲ್ಲಿ ಸೆನೆಟ್ ಸಮಿತಿಗೆ ಪತ್ರ ಬರೆಯಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>