ಕೇಂದ್ರದ ಗಡಿ ನೀತಿ ವಿರುದ್ಧ ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿಗಳ ಪ್ರಚಂಡ ಪ್ರದರ್ಶನ
ಹುಬ್ಬಳ್ಳಿ,ಡಿ.19– ಮಹಾಜನ್ ವರದಿ ಬಗ್ಗೆ ಕೇಂದ್ರ ಸರ್ಕಾರ ಯಾವ ನಿರ್ಧಾರವನ್ನೂ ಕೈಗೊಳ್ಳದೆ, ಕರ್ನಾಟಕದ ಜನತೆ ಮತ್ತು ಸರ್ಕಾರದ ಇಚ್ಛೆಗೆ ವಿರುದ್ಧವಾಗಿ ಕೇಂದ್ರ ಸರ್ಕಾರ ವರದಿಯನ್ನು ಸಂಸತ್ ಮುಂದೆ ಮಂಡಿಸಿದ ಬಗ್ಗೆ ಪ್ರತಿಭಟಿಸಲು ಹುಬ್ಬಳ್ಳಿ–ಧಾರವಾಡ ನಗರಗಳಲ್ಲಿ ವಿದ್ಯಾರ್ಥಿಗಳು ಇಂದು ಬೃಹತ್ ಪ್ರದರ್ಶನಗಳನ್ನು ನಡೆಸಿದರು.