<p><strong>ಹೆಚ್ಚುವರಿ ಜಮೀನು ಲೆಕ್ಕ ಮಾತ್ರ ಅವಶ್ಯ: ಸದ್ಯಕ್ಕೆ ವರ್ಗೀಕರಣ ಅನಗತ್ಯ</strong></p><p>ಬೆಂಗಳೂರು, ಮೇ 29– ಕರ್ನಾಟಕ ಭೂಸುಧಾರಣಾ ಶಾಸನಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ಇಂದು ಹೊರಡಿಸಿದ ಸುಗ್ರೀವಾಜ್ಞೆಯು, ರೈತರು ತಮ್ಮ ಹೆಚ್ಚುವರಿ ಜಮೀನಿನ ಪ್ರಮಾಣ ವಿವರಗಳನ್ನು ಸರ್ಕಾರಕ್ಕೆ ಸಲ್ಲಿಸುವಾಗ, ಜಮೀನು ವರ್ಗೀಕರಣ ವಿವರಗಳನ್ನು ಸಲ್ಲಿಸಬೇಕಾದ ಅಗತ್ಯವಿಲ್ಲ ಎಂದು ತಿಳಿಸಿದೆ.</p><p>ಶಾಸನ ನಿಗದಿಪಡಿಸಿದ ಪರಿಮಿತಿಗಿಂತ ಹೆಚ್ಚಿರುವ ಜಮೀನನ್ನು ಸರ್ಕಾರಕ್ಕೆ ಘೋಷಿಸಲು ನೀಡಲಾಗಿದ್ದ ಅವಧಿಯು ನಾಳೆಗೆ ಮುಗಿಯಲಿದ್ದು, ಈ ಅವಧಿಯನ್ನು ಮತ್ತೆ ಮೂರು ತಿಂಗಳುಗಳ ಕಾಲ<br>ಸುಗ್ರೀವಾಜ್ಞೆಯು ವಿಸ್ತರಿಸಿದೆ.</p><p><strong>ಗೋಲನ್ ದಿಬ್ಬದಲ್ಲಿ ಕದನವಿರಾಮಕ್ಕೆ ಇಸ್ರೇಲ್- ಸಿರಿಯಾ ಒಪ್ಪಿಗೆ</strong></p><p>ವಾಷಿಂಗ್ಟನ್, ಮೇ 29– ಗೋಲನ್ ದಿಬ್ಬದಲ್ಲಿ ಕದನವಿರಾಮಕ್ಕೆ ಇಸ್ರೇಲ್ ಮತ್ತು ಸಿರಿಯಾ ಒಪ್ಪಿಕೊಂಡಿವೆ ಎಂದು ಅಮೆರಿಕದ ಅಧ್ಯಕ್ಷ ನಿಕ್ಸನ್ ಇಂದು ಪ್ರಕಟಿಸಿದರು.</p><p>ಕದನವಿರಾಮಕ್ಕೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಹೆನ್ರಿ ಕಿಸಿಂಜರ್ ಸಂಧಾನ ನಡೆಸಿದರು. ಕದನವಿರಾಮ ಒಪ್ಪಂದಕ್ಕೆ ಶುಕ್ರವಾರ ಉಭಯ ರಾಷ್ಟ್ರಗಳು ಸಹಿ ಹಾಕುವುವು ಎಂದು ತಿಳಿಸಿದ ನಿಕ್ಸನ್ ಅವರು, ಈ ಒಪ್ಪಂದವನ್ನು ‘ಪ್ರಮುಖ ರಾಜತಾಂತ್ರಿಕ ಸಾಧನೆ’ ಎಂದು ಕರೆದರು.</p><p>ಕಿಸಿಂಜರ್ ಅವರ ಮೂವತ್ಮೂರು ದಿನಗಳ ಸಂಧಾನ ಯತ್ನದ ನಂತರ ಉಭಯ ರಾಷ್ಟ್ರಗಳೂ ಕದನವಿರಾಮಕ್ಕೆ ಒಪ್ಪಿಕೊಂಡವು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೆಚ್ಚುವರಿ ಜಮೀನು ಲೆಕ್ಕ ಮಾತ್ರ ಅವಶ್ಯ: ಸದ್ಯಕ್ಕೆ ವರ್ಗೀಕರಣ ಅನಗತ್ಯ</strong></p><p>ಬೆಂಗಳೂರು, ಮೇ 29– ಕರ್ನಾಟಕ ಭೂಸುಧಾರಣಾ ಶಾಸನಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ಇಂದು ಹೊರಡಿಸಿದ ಸುಗ್ರೀವಾಜ್ಞೆಯು, ರೈತರು ತಮ್ಮ ಹೆಚ್ಚುವರಿ ಜಮೀನಿನ ಪ್ರಮಾಣ ವಿವರಗಳನ್ನು ಸರ್ಕಾರಕ್ಕೆ ಸಲ್ಲಿಸುವಾಗ, ಜಮೀನು ವರ್ಗೀಕರಣ ವಿವರಗಳನ್ನು ಸಲ್ಲಿಸಬೇಕಾದ ಅಗತ್ಯವಿಲ್ಲ ಎಂದು ತಿಳಿಸಿದೆ.</p><p>ಶಾಸನ ನಿಗದಿಪಡಿಸಿದ ಪರಿಮಿತಿಗಿಂತ ಹೆಚ್ಚಿರುವ ಜಮೀನನ್ನು ಸರ್ಕಾರಕ್ಕೆ ಘೋಷಿಸಲು ನೀಡಲಾಗಿದ್ದ ಅವಧಿಯು ನಾಳೆಗೆ ಮುಗಿಯಲಿದ್ದು, ಈ ಅವಧಿಯನ್ನು ಮತ್ತೆ ಮೂರು ತಿಂಗಳುಗಳ ಕಾಲ<br>ಸುಗ್ರೀವಾಜ್ಞೆಯು ವಿಸ್ತರಿಸಿದೆ.</p><p><strong>ಗೋಲನ್ ದಿಬ್ಬದಲ್ಲಿ ಕದನವಿರಾಮಕ್ಕೆ ಇಸ್ರೇಲ್- ಸಿರಿಯಾ ಒಪ್ಪಿಗೆ</strong></p><p>ವಾಷಿಂಗ್ಟನ್, ಮೇ 29– ಗೋಲನ್ ದಿಬ್ಬದಲ್ಲಿ ಕದನವಿರಾಮಕ್ಕೆ ಇಸ್ರೇಲ್ ಮತ್ತು ಸಿರಿಯಾ ಒಪ್ಪಿಕೊಂಡಿವೆ ಎಂದು ಅಮೆರಿಕದ ಅಧ್ಯಕ್ಷ ನಿಕ್ಸನ್ ಇಂದು ಪ್ರಕಟಿಸಿದರು.</p><p>ಕದನವಿರಾಮಕ್ಕೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಹೆನ್ರಿ ಕಿಸಿಂಜರ್ ಸಂಧಾನ ನಡೆಸಿದರು. ಕದನವಿರಾಮ ಒಪ್ಪಂದಕ್ಕೆ ಶುಕ್ರವಾರ ಉಭಯ ರಾಷ್ಟ್ರಗಳು ಸಹಿ ಹಾಕುವುವು ಎಂದು ತಿಳಿಸಿದ ನಿಕ್ಸನ್ ಅವರು, ಈ ಒಪ್ಪಂದವನ್ನು ‘ಪ್ರಮುಖ ರಾಜತಾಂತ್ರಿಕ ಸಾಧನೆ’ ಎಂದು ಕರೆದರು.</p><p>ಕಿಸಿಂಜರ್ ಅವರ ಮೂವತ್ಮೂರು ದಿನಗಳ ಸಂಧಾನ ಯತ್ನದ ನಂತರ ಉಭಯ ರಾಷ್ಟ್ರಗಳೂ ಕದನವಿರಾಮಕ್ಕೆ ಒಪ್ಪಿಕೊಂಡವು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>