<p><strong>ಪಳನಿಯ ಚಿಲ್ಲರೆ ನಗರ ಪೊಲೀಸರ ವಶ</strong></p>.<p><strong>ಬೆಂಗಳೂರು, ಮೇ 30– </strong>ನಗರದ ಪೊಲೀಸರು ಇಂದು ಬೆಳಿಗ್ಗೆ ಚಾಮರಾಜ ಪೇಟೆಯ ನಾಲ್ಕು ಮಾರುವಾಡಿ ಅಂಗಡಿ ಗಳನ್ನು ಶೋಧಿಸಿ ಸುಮಾರು ಹತ್ತು ಸಹಸ್ರ ರೂಪಾಯಿಯ ಚಿಲ್ಲರೆ ನಾಣ್ಯಗಳನ್ನು ವಶಪಡಿಸಿಕೊಂಡರು.</p>.<p>ಈ ಸಂಬಂಧದಲ್ಲಿ ಮದುರೆ ಜಿಲ್ಲೆಯ ಪಳನಿ ನಿವಾಸಿ ಕುಪ್ಪುಸ್ವಾಮಿ ಮತ್ತು ಅವರ ಸೇವಕನನ್ನು ಪೊಲೀಸರು ತಮ್ಮ ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಹನ್ನೊಂದು ಚೀಲಗಳಲ್ಲಿ ತುಂಬಿಡಲಾಗಿದ್ದ ಒಂದು, ಮೂರು ಹಾಗೂ ಐದು ಪೈಸೆ ನಾಣ್ಯಗಳ ಅಂದಾಜು ತೂಕ 470 ಕೆ.ಜಿ.</p>.<p>ನಗರದಲ್ಲಿ ಕಳೆದ ಕೆಲವು ತಿಂಗಳಿಂದ ಚಿಲ್ಲರೆ ನಾಣ್ಯಗಳ ಅಭಾವ ಉಂಟಾಗಿದ್ದು, ಸಾರ್ವಜನಿಕರು, ವರ್ತಕರು ರಾಜ್ಯಪಾಲರಿಗೆ ಅನೇಕ ಬಾರಿ ದೂರು ಕೊಟ್ಟಿರುವುದನ್ನು ಇಲ್ಲಿ ಸ್ಮರಿಸಬಹುದು.</p>.<p><strong>ದಕ್ಷಿಣದ ಚಿತ್ರೋದ್ಯಮ ಭಾರಿ ಬಿಕ್ಕಟ್ಟಿನಲ್ಲಿ</strong></p>.<p><strong>ಮದರಾಸು, ಮೇ 30– </strong>ಮದರಾಸಿನ ಚಲನಚಿತ್ರೋದ್ಯಮ ಈ ವರ್ಷದ ಆರಂಭದಿಂದಲೂ ಗಲ್ಲಾಪೆಟ್ಟಿಗೆಯ ದೃಷ್ಟಿಯಿಂದ ತೀರಾ ಇಳಿಮುಖವಾಗಿ ಬಿಕ್ಕಟ್ಟನ್ನೆದುರಿಸುತ್ತಿದೆ.</p>.<p>ಕಳೆದ ಆರು ತಿಂಗಳಲ್ಲಿ ತಯಾರಿಸಿದ ಚಿತ್ರಗಳಲ್ಲಿ ಶೇ 95ರಷ್ಟು ಗಲ್ಲಾ ಪೆಟ್ಟಿಗೆಯ ದೃಷ್ಟಿಯಿಂದ ಭಾರಿ ಪೆಟ್ಟು ತಿಂದಿದೆ.</p>.<p>ಪರಿಸ್ಥಿತಿ ಹೀಗಿರುವಾಗ, ತಯಾರಿಕೆಯ ವಿವಿಧ ಘಟ್ಟಗಳಲ್ಲಿದ್ದು ಮೂರು ಕೋಟಿ ರೂ.ಗಳ ಬಂಡವಾಳ ಹೊಂದಿರುವ ಎಪ್ಪತ್ತೈದು ಚಿತ್ರಗಳು ಹೊರಬರುವುದು ಸಂದೇಹ ಎಂದು ದಕ್ಷಿಣ ಭಾರತ ಫಿಲ್ಮ್ ಚೇಂಬರಿನ ಅಧ್ಯಕ್ಷ ಎ.ಎಲ್.ಶ್ರೀನಿವಾಸನ್ ಇಂದು ಇಲ್ಲಿ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪಳನಿಯ ಚಿಲ್ಲರೆ ನಗರ ಪೊಲೀಸರ ವಶ</strong></p>.<p><strong>ಬೆಂಗಳೂರು, ಮೇ 30– </strong>ನಗರದ ಪೊಲೀಸರು ಇಂದು ಬೆಳಿಗ್ಗೆ ಚಾಮರಾಜ ಪೇಟೆಯ ನಾಲ್ಕು ಮಾರುವಾಡಿ ಅಂಗಡಿ ಗಳನ್ನು ಶೋಧಿಸಿ ಸುಮಾರು ಹತ್ತು ಸಹಸ್ರ ರೂಪಾಯಿಯ ಚಿಲ್ಲರೆ ನಾಣ್ಯಗಳನ್ನು ವಶಪಡಿಸಿಕೊಂಡರು.</p>.<p>ಈ ಸಂಬಂಧದಲ್ಲಿ ಮದುರೆ ಜಿಲ್ಲೆಯ ಪಳನಿ ನಿವಾಸಿ ಕುಪ್ಪುಸ್ವಾಮಿ ಮತ್ತು ಅವರ ಸೇವಕನನ್ನು ಪೊಲೀಸರು ತಮ್ಮ ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಹನ್ನೊಂದು ಚೀಲಗಳಲ್ಲಿ ತುಂಬಿಡಲಾಗಿದ್ದ ಒಂದು, ಮೂರು ಹಾಗೂ ಐದು ಪೈಸೆ ನಾಣ್ಯಗಳ ಅಂದಾಜು ತೂಕ 470 ಕೆ.ಜಿ.</p>.<p>ನಗರದಲ್ಲಿ ಕಳೆದ ಕೆಲವು ತಿಂಗಳಿಂದ ಚಿಲ್ಲರೆ ನಾಣ್ಯಗಳ ಅಭಾವ ಉಂಟಾಗಿದ್ದು, ಸಾರ್ವಜನಿಕರು, ವರ್ತಕರು ರಾಜ್ಯಪಾಲರಿಗೆ ಅನೇಕ ಬಾರಿ ದೂರು ಕೊಟ್ಟಿರುವುದನ್ನು ಇಲ್ಲಿ ಸ್ಮರಿಸಬಹುದು.</p>.<p><strong>ದಕ್ಷಿಣದ ಚಿತ್ರೋದ್ಯಮ ಭಾರಿ ಬಿಕ್ಕಟ್ಟಿನಲ್ಲಿ</strong></p>.<p><strong>ಮದರಾಸು, ಮೇ 30– </strong>ಮದರಾಸಿನ ಚಲನಚಿತ್ರೋದ್ಯಮ ಈ ವರ್ಷದ ಆರಂಭದಿಂದಲೂ ಗಲ್ಲಾಪೆಟ್ಟಿಗೆಯ ದೃಷ್ಟಿಯಿಂದ ತೀರಾ ಇಳಿಮುಖವಾಗಿ ಬಿಕ್ಕಟ್ಟನ್ನೆದುರಿಸುತ್ತಿದೆ.</p>.<p>ಕಳೆದ ಆರು ತಿಂಗಳಲ್ಲಿ ತಯಾರಿಸಿದ ಚಿತ್ರಗಳಲ್ಲಿ ಶೇ 95ರಷ್ಟು ಗಲ್ಲಾ ಪೆಟ್ಟಿಗೆಯ ದೃಷ್ಟಿಯಿಂದ ಭಾರಿ ಪೆಟ್ಟು ತಿಂದಿದೆ.</p>.<p>ಪರಿಸ್ಥಿತಿ ಹೀಗಿರುವಾಗ, ತಯಾರಿಕೆಯ ವಿವಿಧ ಘಟ್ಟಗಳಲ್ಲಿದ್ದು ಮೂರು ಕೋಟಿ ರೂ.ಗಳ ಬಂಡವಾಳ ಹೊಂದಿರುವ ಎಪ್ಪತ್ತೈದು ಚಿತ್ರಗಳು ಹೊರಬರುವುದು ಸಂದೇಹ ಎಂದು ದಕ್ಷಿಣ ಭಾರತ ಫಿಲ್ಮ್ ಚೇಂಬರಿನ ಅಧ್ಯಕ್ಷ ಎ.ಎಲ್.ಶ್ರೀನಿವಾಸನ್ ಇಂದು ಇಲ್ಲಿ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>