<p><strong>ಉಕ್ಕಿನಾಳು ವಲ್ಲಭಭಾಯ್, ನಮ್ಮ ‘ಸರದಾರ್’ ಇನ್ನೆಲ್ಲಿ...</strong></p><p><strong>ಮುಂಬಯಿ, ಡಿ. 15</strong>– ಉಪಪ್ರಧಾನಿ ಸರದಾರ ವಲ್ಲಭಭಾಯಿ ಪಟೇಲರು ಈ ದಿನ ಬೆಳಿಗ್ಗೆ 9 ಗಂಟೆ 37 ನಿಮಿಷಕ್ಕೆ ದೈವಾಧೀನರಾದರು. ಕೊನೆ ಉಸಿರೆಳೆವಾಗ ಸರದಾರರ ಹಾಸಿಗೆಯ ಬಳಿ ಪುತ್ರ ದಯಾಭಾಯ್, ಪುತ್ರಿ ಮಣಿಬೆನ್, ಸೊಸೆ, ಮೊಮ್ಮಕ್ಕಳು, ಮುಂಬಯಿ ಮುಖ್ಯಮಂತ್ರಿ ಖೇರ್, ಮಂತ್ರಿ ಮುರಾರ್ಜಿ, ಮೇಯರ್ ಪಾಟೀಲ್, ಇವರಿದ್ದರು.</p><p><strong>ಅಂತಿಮ ಯಾತ್ರೆಯ ದೃಶ್ಯ:</strong> ಅಧ್ಯಕ್ಷ ರಾಜೇಂದ್ರ ಪ್ರಸಾದ್, ಪ್ರಧಾನಿ ಪಂಡಿತ ನೆಹರೂ ಮತ್ತಿತರ ರಾಷ್ಟ್ರನಾಯಕರು ಪಾರ್ಥಿವ ಶರೀರಕ್ಕೆ ಅಂತಿಮಪ್ರಣಾಮ ಅರ್ಪಿಸಿದ ನಂತರ, ಬಿರ್ಲಾ ಭವನದಿಂದ ಚರಮಯಾತ್ರೆ ಆರಂಭವಾಯಿತು.</p><p>ಮಹಾತ್ಮ ಗಾಂಧಿಯವರು ಮುಂಚೆ ಪ್ರಾರ್ಥನಾ ಸಭೆಗಳನ್ನು ನಡೆಸುತ್ತಿದ್ದ ಬಿರ್ಲಾ ಭವನದ ಹಚ್ಚನೆಯ ಹೊರಾಂಗಣದಲ್ಲಿ ಸಂಜೆಯ ಹೊಂಬಣ್ಣದ ಬಿಸಿಲು ಚೆಲ್ಲಿತ್ತು. ಸುಮಾರು ಐದು ಲಕ್ಷದ ದಟ್ಟ ಜನಸಂದಣಿ ಕಡೆಯ ದರ್ಶನಕ್ಕಾಗಿ ಹಾತೊರೆಯುತ್ತಿತ್ತು.</p><p>ಎಲ್ಲ ಕಡೆ ನೀರವತೆ. ಜನಸ್ತೋಮ ಒಮ್ಮೆಲೇ ತಲೆಬಾಗಿ ಸರದಾರರಿಗೆ ಅಂತಿಮ ಗೌರವ ಕಾಣಿಕೆಯಿತ್ತಿತು. ಶೋಕ ತಡೆಯಲಾರದೆ ಅನೇಕರು ಕಣ್ಣೀರು ಸುರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಉಕ್ಕಿನಾಳು ವಲ್ಲಭಭಾಯ್, ನಮ್ಮ ‘ಸರದಾರ್’ ಇನ್ನೆಲ್ಲಿ...</strong></p><p><strong>ಮುಂಬಯಿ, ಡಿ. 15</strong>– ಉಪಪ್ರಧಾನಿ ಸರದಾರ ವಲ್ಲಭಭಾಯಿ ಪಟೇಲರು ಈ ದಿನ ಬೆಳಿಗ್ಗೆ 9 ಗಂಟೆ 37 ನಿಮಿಷಕ್ಕೆ ದೈವಾಧೀನರಾದರು. ಕೊನೆ ಉಸಿರೆಳೆವಾಗ ಸರದಾರರ ಹಾಸಿಗೆಯ ಬಳಿ ಪುತ್ರ ದಯಾಭಾಯ್, ಪುತ್ರಿ ಮಣಿಬೆನ್, ಸೊಸೆ, ಮೊಮ್ಮಕ್ಕಳು, ಮುಂಬಯಿ ಮುಖ್ಯಮಂತ್ರಿ ಖೇರ್, ಮಂತ್ರಿ ಮುರಾರ್ಜಿ, ಮೇಯರ್ ಪಾಟೀಲ್, ಇವರಿದ್ದರು.</p><p><strong>ಅಂತಿಮ ಯಾತ್ರೆಯ ದೃಶ್ಯ:</strong> ಅಧ್ಯಕ್ಷ ರಾಜೇಂದ್ರ ಪ್ರಸಾದ್, ಪ್ರಧಾನಿ ಪಂಡಿತ ನೆಹರೂ ಮತ್ತಿತರ ರಾಷ್ಟ್ರನಾಯಕರು ಪಾರ್ಥಿವ ಶರೀರಕ್ಕೆ ಅಂತಿಮಪ್ರಣಾಮ ಅರ್ಪಿಸಿದ ನಂತರ, ಬಿರ್ಲಾ ಭವನದಿಂದ ಚರಮಯಾತ್ರೆ ಆರಂಭವಾಯಿತು.</p><p>ಮಹಾತ್ಮ ಗಾಂಧಿಯವರು ಮುಂಚೆ ಪ್ರಾರ್ಥನಾ ಸಭೆಗಳನ್ನು ನಡೆಸುತ್ತಿದ್ದ ಬಿರ್ಲಾ ಭವನದ ಹಚ್ಚನೆಯ ಹೊರಾಂಗಣದಲ್ಲಿ ಸಂಜೆಯ ಹೊಂಬಣ್ಣದ ಬಿಸಿಲು ಚೆಲ್ಲಿತ್ತು. ಸುಮಾರು ಐದು ಲಕ್ಷದ ದಟ್ಟ ಜನಸಂದಣಿ ಕಡೆಯ ದರ್ಶನಕ್ಕಾಗಿ ಹಾತೊರೆಯುತ್ತಿತ್ತು.</p><p>ಎಲ್ಲ ಕಡೆ ನೀರವತೆ. ಜನಸ್ತೋಮ ಒಮ್ಮೆಲೇ ತಲೆಬಾಗಿ ಸರದಾರರಿಗೆ ಅಂತಿಮ ಗೌರವ ಕಾಣಿಕೆಯಿತ್ತಿತು. ಶೋಕ ತಡೆಯಲಾರದೆ ಅನೇಕರು ಕಣ್ಣೀರು ಸುರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>