<h2>ಗೋಪಾಲ್ ಜತೆ ಅರಣ್ಯಕ್ಕೆ ತೆರಳಿದ ಇನ್ನೂ ಮೂವರು</h2>.<p><strong>ಚೆನ್ನೈ, ಅ. 10 (ಪಿಟಿಐ)–</strong> ವರನಟ ಡಾ. ರಾಜ್ಕುಮಾರ್ ಅವರ ಬಿಡುಗಡೆಗಾಗಿ ನರಹಂತಕ ವೀರಪ್ಪನ್ ಜತೆಗೆ ಸಂಧಾನ ನಡೆಸಲು ನಕ್ಕೀರನ್ ಪತ್ರಿಕೆಯ ಸಂಪಾದಕ ಆರ್.ಆರ್. ಗೋಪಾಲ್ ಅವರೊಂದಿಗೆ, ತಮಿಳು ರಾಷ್ಟ್ರೀಯವಾದಿ ಚಳವಳಿ ನಾಯಕ ಪಿ. ನೆಡುಮಾರನ್ ಮತ್ತು ಇನ್ನಿಬ್ಬರು ಇಂದು ಬೆಳಿಗ್ಗೆ ಅರಣ್ಯಕ್ಕೆ ತೆರಳಿದರು.</p>.<p>ಕರ್ನಾಟಕ ಮತ್ತು ತಮಿಳುನಾಡು ಮುಖ್ಯಮಂತ್ರಿಗಳ ಮನವಿ ಮೇರೆಗೆ ಈ ಕಾರ್ಯಕ್ಕೆ ಮುಂದಾಗಿರುವುದಾಗಿ ಅವರು ತಿಳಿಸಿದರು.</p>.<p>ಇದರಿಂದಾಗಿ ಡಾ. ರಾಜ್ ಬಿಡುಗಡೆಗೆ ಕರ್ನಾಟಕ ಮತ್ತು ತಮಿಳುನಾಡು ಸರ್ಕಾರಗಳು ಈವರೆಗೆ ಅನುಸರಿಸಿದ್ದ ಕಾರ್ಯತಂತ್ರವನ್ನು ಗಣನೀಯವಾಗಿ ಬದಲಿಸಿದಂತಾಗಿದೆ.</p>.<h2>ಲಂಕಾ: ಮಾಜಿ ಪ್ರಧಾನಿ ಸಿರಿಮಾವೋ ನಿಧನ</h2>.<p><strong>ಕೊಲಂಬೊ, ಅ. 10 (ಪಿಟಿಐ)–</strong> ವಿಶ್ವದ ಪ್ರಥಮ ಚುನಾಯಿತ ಮಹಿಳಾ ಪ್ರಧಾನಿ ಎಂಬ ಖ್ಯಾತಿಯ ಶ್ರೀಲಂಕಾದ ಮಾಜಿ ಪ್ರಧಾನಿ ಸಿರಿಮಾವೋ ಬಂಡಾರ ನಾಯಿಕೆ (84) ಇಂದು ಬೆಳಿಗ್ಗೆ ಹೃದಯಾಘಾತದಿಂದ ಮೃತರಾದರು. ಅವರು ಮೂರು ಬಾರಿ ಪ್ರಧಾನಿಯಾಗಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<h2>ಗೋಪಾಲ್ ಜತೆ ಅರಣ್ಯಕ್ಕೆ ತೆರಳಿದ ಇನ್ನೂ ಮೂವರು</h2>.<p><strong>ಚೆನ್ನೈ, ಅ. 10 (ಪಿಟಿಐ)–</strong> ವರನಟ ಡಾ. ರಾಜ್ಕುಮಾರ್ ಅವರ ಬಿಡುಗಡೆಗಾಗಿ ನರಹಂತಕ ವೀರಪ್ಪನ್ ಜತೆಗೆ ಸಂಧಾನ ನಡೆಸಲು ನಕ್ಕೀರನ್ ಪತ್ರಿಕೆಯ ಸಂಪಾದಕ ಆರ್.ಆರ್. ಗೋಪಾಲ್ ಅವರೊಂದಿಗೆ, ತಮಿಳು ರಾಷ್ಟ್ರೀಯವಾದಿ ಚಳವಳಿ ನಾಯಕ ಪಿ. ನೆಡುಮಾರನ್ ಮತ್ತು ಇನ್ನಿಬ್ಬರು ಇಂದು ಬೆಳಿಗ್ಗೆ ಅರಣ್ಯಕ್ಕೆ ತೆರಳಿದರು.</p>.<p>ಕರ್ನಾಟಕ ಮತ್ತು ತಮಿಳುನಾಡು ಮುಖ್ಯಮಂತ್ರಿಗಳ ಮನವಿ ಮೇರೆಗೆ ಈ ಕಾರ್ಯಕ್ಕೆ ಮುಂದಾಗಿರುವುದಾಗಿ ಅವರು ತಿಳಿಸಿದರು.</p>.<p>ಇದರಿಂದಾಗಿ ಡಾ. ರಾಜ್ ಬಿಡುಗಡೆಗೆ ಕರ್ನಾಟಕ ಮತ್ತು ತಮಿಳುನಾಡು ಸರ್ಕಾರಗಳು ಈವರೆಗೆ ಅನುಸರಿಸಿದ್ದ ಕಾರ್ಯತಂತ್ರವನ್ನು ಗಣನೀಯವಾಗಿ ಬದಲಿಸಿದಂತಾಗಿದೆ.</p>.<h2>ಲಂಕಾ: ಮಾಜಿ ಪ್ರಧಾನಿ ಸಿರಿಮಾವೋ ನಿಧನ</h2>.<p><strong>ಕೊಲಂಬೊ, ಅ. 10 (ಪಿಟಿಐ)–</strong> ವಿಶ್ವದ ಪ್ರಥಮ ಚುನಾಯಿತ ಮಹಿಳಾ ಪ್ರಧಾನಿ ಎಂಬ ಖ್ಯಾತಿಯ ಶ್ರೀಲಂಕಾದ ಮಾಜಿ ಪ್ರಧಾನಿ ಸಿರಿಮಾವೋ ಬಂಡಾರ ನಾಯಿಕೆ (84) ಇಂದು ಬೆಳಿಗ್ಗೆ ಹೃದಯಾಘಾತದಿಂದ ಮೃತರಾದರು. ಅವರು ಮೂರು ಬಾರಿ ಪ್ರಧಾನಿಯಾಗಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>