<h2>ಮೃಗಾಲಯ ಹುಲಿಗಳ ಹತ್ಯೆ ಸಂಚು: ಮೊಕದ್ದಮೆ ದಾಖಲು</h2>.<p><strong>ಮೈಸೂರು, ಫೆ. 27–</strong> ಪ್ರತ್ಯೇಕ ಬೋನುಗಳಲ್ಲಿದ್ದ ಎರಡು ಬಿಳಿ ಹುಲಿಗಳನ್ನು ಒಂದೇ ಬೋನಿಗೆ ಸೇರುವಂತೆ ಮಾಡಿ ಅವುಗಳ ಮಧ್ಯೆ ಘರ್ಷಣೆಗೆ ಎಡೆಮಾಡಿಕೊಟ್ಟು ಅವುಗಳನ್ನು ಸಾವಿನ ಅಂಚಿಗೆ ಒಯ್ಯುವ ಸಂಚೊಂದು ನಗರದ ಮೃಗಾಲಯದಲ್ಲಿ ಕಳೆದ ರಾತ್ರಿ ನಡೆದಿದೆ.</p>.<p>ಇಲ್ಲಿನ ನಜರ್ಬಾದ್ ಪೊಲೀಸ್ ಠಾಣೆಯಲ್ಲಿ ಶ್ರೀಚಾಮರಾಜೇಂದ್ರ ಮೃಗಾಲಯದ ವ್ಯವಸ್ಥಾಪಕ ನಿರ್ದೇಶಕ ಎನ್. ರಾಜಶೇಖರ್ ಅವರು ದೂರು ದಾಖಲು ಮಾಡಿದ್ದು, ಈ ಘಟನೆ ಬಗ್ಗೆ ತನಖೆ ನಡೆಸಿ ದುಷ್ಕರ್ಮಿಗಳನ್ನು ಪತ್ತೆ ಮಾಡುವಂತೆ ಕೋರಿದ್ದಾರೆ.</p>.<p>ಕಳೆದ ರಾತ್ರಿ ದುಷ್ಕರ್ಮಿಗಳು ಎರಡು ಬಿಳಿ ಹುಲಿಗಳಿದ್ದ ಪ್ರತ್ಯೇಕ ಬೋನುಗಳ ಬಾಗಿಲಿಗೆ ಹಾಕಿದ್ದ ಕಬ್ಬಿಣದ ಕೊಂಡಿಗಳನ್ನು ಸರಳಿನಿಂದ ಮೀಟಿ ಬೋನುಗಳ ಬಾಗಿಲು ತೆರೆದು ಕೊಳ್ಳುವಂತೆ ಮಾಡುವ ಮೂಲಕ ಹುಲಿಗಳು ಒಂದೇ ಕಡೆ ಸೇರುವಂತೆ ಮಾಡಿದ್ದಾರೆ.</p>.<h2>ಔಷಧ ಸಸ್ಯ ಅಭಿವೃದ್ಧಿ: ಯೋಜನಾ ಆಯೋಗ ಸಲಹೆ</h2>.<p><strong>ಬೆಂಗಳೂರು, ಫೆ. 27–</strong> ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿ ಯಲ್ಲಿರುವ ರಾಜ್ಯವನ್ನು ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿಯೂ ಶೀಘ್ರ ಅಭಿವೃದ್ಧಿಪಡಿಸಲು ಯೋಜನಾ ಆಯೋಗ ಕೆಲವು ಸಲಹೆಗಳನ್ನು ಮಾಡಿದೆ.</p>.<p>ಈ ಸಲಹೆಗಳಲ್ಲಿ ಮುಖ್ಯವಾಗಿ ಅತ್ಯಮೂಲ್ಯ ಔಷಧ ಸಸ್ಯಗಳನ್ನು ಬೆಳೆಸುವುದು, ಜಂಟಿ ಕ್ಷೇತ್ರದಲ್ಲಿ ಅರಣ್ಯ ಅಭಿವೃದ್ಧಿ, ಚರ್ಮೋದ್ಯೋಗ, ಸಿದ್ಧಉಡುಪು ಕ್ಷೇತ್ರವನ್ನು ಅಭಿವೃದ್ಧಿಪಡಿಸುವುದು ಮುಖ್ಯವಾಗಿದೆ ಎಂದು ಹನ್ನೊಂದನೇ ಯೋಜನಾ ಆಯೋಗದ ಸದಸ್ಯರಾದ <br>ಡಾ. ಡಿ.ಎನ್. ತಿವಾರಿ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<h2>ಮೃಗಾಲಯ ಹುಲಿಗಳ ಹತ್ಯೆ ಸಂಚು: ಮೊಕದ್ದಮೆ ದಾಖಲು</h2>.<p><strong>ಮೈಸೂರು, ಫೆ. 27–</strong> ಪ್ರತ್ಯೇಕ ಬೋನುಗಳಲ್ಲಿದ್ದ ಎರಡು ಬಿಳಿ ಹುಲಿಗಳನ್ನು ಒಂದೇ ಬೋನಿಗೆ ಸೇರುವಂತೆ ಮಾಡಿ ಅವುಗಳ ಮಧ್ಯೆ ಘರ್ಷಣೆಗೆ ಎಡೆಮಾಡಿಕೊಟ್ಟು ಅವುಗಳನ್ನು ಸಾವಿನ ಅಂಚಿಗೆ ಒಯ್ಯುವ ಸಂಚೊಂದು ನಗರದ ಮೃಗಾಲಯದಲ್ಲಿ ಕಳೆದ ರಾತ್ರಿ ನಡೆದಿದೆ.</p>.<p>ಇಲ್ಲಿನ ನಜರ್ಬಾದ್ ಪೊಲೀಸ್ ಠಾಣೆಯಲ್ಲಿ ಶ್ರೀಚಾಮರಾಜೇಂದ್ರ ಮೃಗಾಲಯದ ವ್ಯವಸ್ಥಾಪಕ ನಿರ್ದೇಶಕ ಎನ್. ರಾಜಶೇಖರ್ ಅವರು ದೂರು ದಾಖಲು ಮಾಡಿದ್ದು, ಈ ಘಟನೆ ಬಗ್ಗೆ ತನಖೆ ನಡೆಸಿ ದುಷ್ಕರ್ಮಿಗಳನ್ನು ಪತ್ತೆ ಮಾಡುವಂತೆ ಕೋರಿದ್ದಾರೆ.</p>.<p>ಕಳೆದ ರಾತ್ರಿ ದುಷ್ಕರ್ಮಿಗಳು ಎರಡು ಬಿಳಿ ಹುಲಿಗಳಿದ್ದ ಪ್ರತ್ಯೇಕ ಬೋನುಗಳ ಬಾಗಿಲಿಗೆ ಹಾಕಿದ್ದ ಕಬ್ಬಿಣದ ಕೊಂಡಿಗಳನ್ನು ಸರಳಿನಿಂದ ಮೀಟಿ ಬೋನುಗಳ ಬಾಗಿಲು ತೆರೆದು ಕೊಳ್ಳುವಂತೆ ಮಾಡುವ ಮೂಲಕ ಹುಲಿಗಳು ಒಂದೇ ಕಡೆ ಸೇರುವಂತೆ ಮಾಡಿದ್ದಾರೆ.</p>.<h2>ಔಷಧ ಸಸ್ಯ ಅಭಿವೃದ್ಧಿ: ಯೋಜನಾ ಆಯೋಗ ಸಲಹೆ</h2>.<p><strong>ಬೆಂಗಳೂರು, ಫೆ. 27–</strong> ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿ ಯಲ್ಲಿರುವ ರಾಜ್ಯವನ್ನು ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿಯೂ ಶೀಘ್ರ ಅಭಿವೃದ್ಧಿಪಡಿಸಲು ಯೋಜನಾ ಆಯೋಗ ಕೆಲವು ಸಲಹೆಗಳನ್ನು ಮಾಡಿದೆ.</p>.<p>ಈ ಸಲಹೆಗಳಲ್ಲಿ ಮುಖ್ಯವಾಗಿ ಅತ್ಯಮೂಲ್ಯ ಔಷಧ ಸಸ್ಯಗಳನ್ನು ಬೆಳೆಸುವುದು, ಜಂಟಿ ಕ್ಷೇತ್ರದಲ್ಲಿ ಅರಣ್ಯ ಅಭಿವೃದ್ಧಿ, ಚರ್ಮೋದ್ಯೋಗ, ಸಿದ್ಧಉಡುಪು ಕ್ಷೇತ್ರವನ್ನು ಅಭಿವೃದ್ಧಿಪಡಿಸುವುದು ಮುಖ್ಯವಾಗಿದೆ ಎಂದು ಹನ್ನೊಂದನೇ ಯೋಜನಾ ಆಯೋಗದ ಸದಸ್ಯರಾದ <br>ಡಾ. ಡಿ.ಎನ್. ತಿವಾರಿ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>