<p>ಸ್ಪೀಕರ್ ಹುದ್ದೆಗೆ ಸಮಾನ ಅಭ್ಯರ್ಥಿ ತೃತೀಯ ರಂಗ– ಕಾಂಗ್ರೆಸ್ ನಿರ್ಧಾರ</p>.<p>ನವದೆಹಲಿ, ಮೇ, 17 (ಪಿಟಿಐ)– ಲೋಕಸಭೆಯಲ್ಲಿ ಸ್ಪೀಕರ್ ಹುದ್ದೆಗೆ ತೃತೀಯ ರಂಗ ಮತ್ತು ಕಾಂಗ್ರೆಸ್ ಪಕ್ಷಗಳ ಸಹಿತ ಎಲ್ಲ ವಿರೋಧ ಪಕ್ಷಗಳ ಸಮಾನ ಅಭ್ಯರ್ಥಿಯನ್ನು ಸ್ಪರ್ಧೆಗೆ ಇಳಿಸುವ ಮಹತ್ವದ ಬೆಳವಣಿಗೆ ಇಂದು ನಡೆದಿದೆ. ಈ ಮಧ್ಯೆ ವಾಜಪೇಯಿ ನೇತೃತ್ವದ ಸರ್ಕಾರದ ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ಸರ್ಕಾರದ ವಿರುದ್ಧ ಮತ ಚಲಾಯಿಸಲು ತನ್ನ ಸಂಸತ್ ಸದಸ್ಯರಿಗೆ ‘ವಿಪ್’ ನೀಡಲೂ ಕಾಂಗ್ರೆಸ್ ನಿರ್ಧರಿಸಿದೆ.</p>.<p>ನವದೆಹಲಿಯಲ್ಲಿ ಇಂದು ತೃತೀಯ ರಂಗದ ಸಭೆ ಒಂದೆಡೆ ನಡೆದರೆ, ಇನ್ನೊಂದೆಡೆ ಕಾಂಗ್ರೆಸ್ ಕಾರ್ಯಕಾರಿಣಿಯ ಅನೌಪಚಾರಿಕ ಸಭೆ ನಡೆಯಿತು. ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ಧ ಸ್ಪೀಕರ್ ಹುದ್ದೆಗೆ ಏಕ ಅಭ್ಯರ್ಥಿಯನ್ನು ಸ್ಪರ್ಧೆಗೆ ಇಳಿಸಲು ಕಾಂಗ್ರೆಸ್ ತೀರ್ಮಾನಿಸಿದೆ.</p>.<p>ತೃತೀಯ ರಂಗದ ಸಭೆಯಲ್ಲಿ ಕೂಡಾ ಸ್ಪೀಕರ್ ಹುದ್ದೆಗೆ ಅಭ್ಯರ್ಥಿಯನ್ನು ನಿಲ್ಲಿಸುವ ಮುನ್ನ ಕಾಂಗ್ರೆಸ್ ಜತೆ ಚರ್ಚಿಸಿ ತೀರ್ಮಾನ ಕೈಗೊಳ್ಳಲು ನಿರ್ಧರಿಸಲಾಯಿತು.</p>.<p>ಬಹುಮತ: ರಾಷ್ಟ್ರಪತಿಗೆ ಮನವರಿಕೆ</p>.<p>ನವದೆಹಲಿ, ಮೇ 17– ತೃತೀಯ ರಂಗದ ಪ್ರಧಾನಿ ಅಭ್ಯರ್ಥಿಯಾಗಿರುವ ಕರ್ನಾಟಕದ ಮುಖ್ಯಮಂತ್ರಿ ಎಚ್.ಡಿ.ದೇವೇಗೌಡ<br />ಅವರು ಇಂದು ರಾಷ್ಟ್ರಪತಿ ಡಾ. ಶಂಕರ<br />ದಯಾಳ ಶರ್ಮಾ ಅವರನ್ನು ಭೇಟಿಯಾಗಿ, ತಮಗಿರುವ ಬೆಂಬಲವನ್ನು ಅವರಿಗೆ ಮನವರಿಕೆ ಮಾಡಿಕೊಟ್ಟರೆಂದು ಗೊತ್ತಾಗಿದೆ.</p>.<p>ಬಿಜೆಪಿ ನಾಯಕ ವಾಜಪೇಯಿ ಅವರನ್ನುಸರ್ಕಾರ ರಚಿಸಲು ಆಮಂತ್ರಿಸಿ<br />ದ್ದರಿಂದ ತೃತೀಯ ರಂಗದ ಕೆಲವು ನಾಯಕರು ಮಾಡಿರುವ ಟೀಕೆಯನ್ನು ಗಂಭೀರವಾಗಿ ತೆಗೆದುಕೊಳ್ಳಬಾರದು ಎಂದು ರಾಷ್ಟ್ರಪತಿ ಅವರಿಗೆ ಮನವಿ ಮಾಡಿದರೆಂದು ಹೇಳಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸ್ಪೀಕರ್ ಹುದ್ದೆಗೆ ಸಮಾನ ಅಭ್ಯರ್ಥಿ ತೃತೀಯ ರಂಗ– ಕಾಂಗ್ರೆಸ್ ನಿರ್ಧಾರ</p>.<p>ನವದೆಹಲಿ, ಮೇ, 17 (ಪಿಟಿಐ)– ಲೋಕಸಭೆಯಲ್ಲಿ ಸ್ಪೀಕರ್ ಹುದ್ದೆಗೆ ತೃತೀಯ ರಂಗ ಮತ್ತು ಕಾಂಗ್ರೆಸ್ ಪಕ್ಷಗಳ ಸಹಿತ ಎಲ್ಲ ವಿರೋಧ ಪಕ್ಷಗಳ ಸಮಾನ ಅಭ್ಯರ್ಥಿಯನ್ನು ಸ್ಪರ್ಧೆಗೆ ಇಳಿಸುವ ಮಹತ್ವದ ಬೆಳವಣಿಗೆ ಇಂದು ನಡೆದಿದೆ. ಈ ಮಧ್ಯೆ ವಾಜಪೇಯಿ ನೇತೃತ್ವದ ಸರ್ಕಾರದ ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ಸರ್ಕಾರದ ವಿರುದ್ಧ ಮತ ಚಲಾಯಿಸಲು ತನ್ನ ಸಂಸತ್ ಸದಸ್ಯರಿಗೆ ‘ವಿಪ್’ ನೀಡಲೂ ಕಾಂಗ್ರೆಸ್ ನಿರ್ಧರಿಸಿದೆ.</p>.<p>ನವದೆಹಲಿಯಲ್ಲಿ ಇಂದು ತೃತೀಯ ರಂಗದ ಸಭೆ ಒಂದೆಡೆ ನಡೆದರೆ, ಇನ್ನೊಂದೆಡೆ ಕಾಂಗ್ರೆಸ್ ಕಾರ್ಯಕಾರಿಣಿಯ ಅನೌಪಚಾರಿಕ ಸಭೆ ನಡೆಯಿತು. ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ಧ ಸ್ಪೀಕರ್ ಹುದ್ದೆಗೆ ಏಕ ಅಭ್ಯರ್ಥಿಯನ್ನು ಸ್ಪರ್ಧೆಗೆ ಇಳಿಸಲು ಕಾಂಗ್ರೆಸ್ ತೀರ್ಮಾನಿಸಿದೆ.</p>.<p>ತೃತೀಯ ರಂಗದ ಸಭೆಯಲ್ಲಿ ಕೂಡಾ ಸ್ಪೀಕರ್ ಹುದ್ದೆಗೆ ಅಭ್ಯರ್ಥಿಯನ್ನು ನಿಲ್ಲಿಸುವ ಮುನ್ನ ಕಾಂಗ್ರೆಸ್ ಜತೆ ಚರ್ಚಿಸಿ ತೀರ್ಮಾನ ಕೈಗೊಳ್ಳಲು ನಿರ್ಧರಿಸಲಾಯಿತು.</p>.<p>ಬಹುಮತ: ರಾಷ್ಟ್ರಪತಿಗೆ ಮನವರಿಕೆ</p>.<p>ನವದೆಹಲಿ, ಮೇ 17– ತೃತೀಯ ರಂಗದ ಪ್ರಧಾನಿ ಅಭ್ಯರ್ಥಿಯಾಗಿರುವ ಕರ್ನಾಟಕದ ಮುಖ್ಯಮಂತ್ರಿ ಎಚ್.ಡಿ.ದೇವೇಗೌಡ<br />ಅವರು ಇಂದು ರಾಷ್ಟ್ರಪತಿ ಡಾ. ಶಂಕರ<br />ದಯಾಳ ಶರ್ಮಾ ಅವರನ್ನು ಭೇಟಿಯಾಗಿ, ತಮಗಿರುವ ಬೆಂಬಲವನ್ನು ಅವರಿಗೆ ಮನವರಿಕೆ ಮಾಡಿಕೊಟ್ಟರೆಂದು ಗೊತ್ತಾಗಿದೆ.</p>.<p>ಬಿಜೆಪಿ ನಾಯಕ ವಾಜಪೇಯಿ ಅವರನ್ನುಸರ್ಕಾರ ರಚಿಸಲು ಆಮಂತ್ರಿಸಿ<br />ದ್ದರಿಂದ ತೃತೀಯ ರಂಗದ ಕೆಲವು ನಾಯಕರು ಮಾಡಿರುವ ಟೀಕೆಯನ್ನು ಗಂಭೀರವಾಗಿ ತೆಗೆದುಕೊಳ್ಳಬಾರದು ಎಂದು ರಾಷ್ಟ್ರಪತಿ ಅವರಿಗೆ ಮನವಿ ಮಾಡಿದರೆಂದು ಹೇಳಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>