ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ| ಕೆಂಗಲ್‌ ಮೇಲೆ ಕ್ರಮಕ್ಕೆ ಸಲಹೆ ಇಲ್ಲ

Last Updated 4 ಸೆಪ್ಟೆಂಬರ್ 2022, 19:31 IST
ಅಕ್ಷರ ಗಾತ್ರ

ಕೆಂಗಲ್‌ ಮೇಲೆ ಕ್ರಮಕ್ಕೆ ಸಲಹೆ ಇಲ್ಲ

ನವದೆಹಲಿ, ಸೆ. 4 – ರಾಜ್ಯದ ರಾಜಕೀಯ ವಿದ್ಯಮಾನಗಳ ಬಗ್ಗೆ ಮೈಸೂರು ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ.ಎಚ್‌.ರಂಗನಾಥ್‌ ಅವರು ಇಂದು ಹೈಕಮಾಂಡಿಗೆಸಲ್ಲಿಸಿದ ವರದಿಯಲ್ಲಿ ಕೆಂಗಲ್‌ ಹನುಮಂತಯ್ಯನವರ ವಿರುದ್ಧ ಶಿಸ್ತಿನ ಕ್ರಮ ಶಿಫಾರಸು ಮಾಡದೇ ನಡೆದ ಸಂಗತಿಗಳ ವಾಸ್ತವಿಕ ವಿವರಣೆ ಮಾತ್ರ ನೀಡಿದ್ದಾರೆಂದು ತಿಳಿದುಬಂದಿದೆ.

ದೇವರಾಜ ಅರಸು ಮಂತ್ರಿಮಂಡಲ ಅಧಿಕಾರಕ್ಕೆ ಬಂದಂದಿನಿಂದ ರಾಜ್ಯದಲ್ಲಿ ಉಂಟಾಗಿರುವ ರಾಜಕೀಯ
ವಿದ್ಯಮಾನಗಳಿಗೆ ಸಂಬಂಧಿಸಿದಂತೆ ರಂಗನಾಥ್‌ ಅವರು ಇಂದು ಕಾಂಗ್ರೆಸ್ ಅಧ್ಯಕ್ಷ ಶ್ರೀ ಶಂಕರ ದಯಾಳ್‌ ಶರ್ಮ ಅವರಿಗೆ ಏಳು ಪುಟಗಳ ವರದಿ ಸಲ್ಲಿಸಿದರು.

ವಿಷಮಿಶ್ರಿತ ಆಹಾರ ಸೇವಿಸಿ 5 ಜನರ ಸಾವು

ಮಂಡ್ಯ, ಸೆ. 4 – ವಿಷಮಿಶ್ರಿತ ಆಹಾರ ಸೇವನೆಯಿಂದ ಮಂಡ್ಯದಲ್ಲಿ ಇಂದು ಐವರು ಪ್ರಾಣ ನೀಗಿದರು.

ನಿನ್ನೆ ವರ್ತಕರ ಸಹಕಾರ ಸಂಘದವರು ಏರ್ಪಡಿಸಿದ್ದ ಭೋಜನ ಕೂಟದಲ್ಲಿಊಟ ಮಾಡಿದ ನೂರಾರು ಜನ ಅಸ್ವಸ್ಥರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT