ಬೆಂಗಳೂರು, ಡಿ.1– ಭೂಸುಧಾರಣೆ ಮಸೂದೆ ವಿರುದ್ಧ ಕಾಂಗ್ರೆಸ್ ಪಕ್ಷದ ಕೆಲವು ಸಿರಿವಂತ ಜಮೀನ್ದಾರರು ಚಳವಳಿ ಮಾರ್ಗ ಅನುಸರಿಸುತ್ತಿರುವರೆಂಬ ವಿಚಾರ ಸರ್ಕಾರಕ್ಕೆ ಅಧಿಕೃತವಾಗಿ ತಿಳಿದು ಬಂದಿಲ್ಲವೆಂದೂ ಮಸೂದೆಯ ಬಗ್ಗೆ ತೀರ್ಮಾನ ತೆಗೆದು ಕೊಳ್ಳುವ ಪರಮಾಧಿಕಾರ ಕೇವಲ ವಿಧಾನ ಮಂಡಲಕ್ಕೆ ಮಾತ್ರ ಇದೆಯೆಂದೂ ಕಂದಾಯ ಸಚಿವ ಶ್ರೀ ಎನ್. ಹುಚ್ಚಮಾಸ್ತಿಗೌಡ ಅವರು ಇಂದು ವಿಧಾನಸಭೆಯಲ್ಲಿ ತಿಳಿಸಿದರು.