<p><strong>ಕೂಪನ್ಹೇಗನ್, ಅ. 26–</strong> ಡೆನ್ಮಾರ್ಕ್ನ ಸೋಷಿಯಲಿಸ್ಟ್ ಪ್ರಧಾನಿ ಹಾನ್ಸ್ ಹೆಡ್ ಟಾಫ್ಟ್ ಇಂದು ತಮ್ಮ ಸರ್ಕಾರದ ರಾಜೀನಾಮೆಯನ್ನು ದೊರೆಗಳಿಗೆ ಸಲ್ಲಿಸಿದರು.</p><p>ಬೆಣ್ಣೆ ನಿಯಂತ್ರಣದ ಬಗ್ಗೆ ಸರ್ಕಾರಿ ಯೋಜನೆ ಪಾರ್ಲಿಮೆಂಟ್ ನಲ್ಲಿ ಪರಾಜಿತವಾದುದೇ ಈ ರಾಜೀನಾಮೆಗೆ ಕಾರಣ.</p>.<p><strong>‘ಕೇಂದ್ರದಿಂದ ಸಕಾಲದಲ್ಲಿ ಆಹಾರ ಸರಬರಾಜಾಗಲಿ’</strong></p><p><strong>ಬೆಂಗಳೂರು, ಅ. 26–</strong> ಕೇಂದ್ರ ದಿಂದ ಬರಬೇಕಾದ ಆಹಾರ ಸಹಾಯ ಸಕಾಲಕ್ಕೆ ಒದಗಿದಲ್ಲಿ ಮೈಸೂರಿನ ಆಹಾರ ಪರಿಸ್ಥಿತಿ ಹತೋಟಿಯಲ್ಲಿ ಇರಲಿದೆ ಎಂದು ಮೈಸೂರಿನ ಮುಖ್ಯಮಂತ್ರಿ ಕೆ.ಸಿ. ರೆಡ್ಡಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ನುಡಿದರು.</p><p>ಮುಂದುವರಿದು, ಈ ಸಾಲಿನ ಆಹಾರ ಸಂಗ್ರಹಣೆ ಕಾರ್ಯ ಈಗಾಗಲೇ ಮುಗಿದಿರುವುದರಿಂದ<br>ಮುಂದಿನ ಕಟಾವಿನವರೆಗೆ ಅಂದಾಜುಗಳ ರೀತ್ಯಾ 29,000 ಟನ್ ಆಹಾರ ಕೊರತೆ ಎದುರಾಗಿದೆ ಎಂದು ತಿಳಿಸಿದರು.</p><p>ಭಾರತ ಸರ್ಕಾರ ನವೆಂಬರ್ ಮಾಹೆಗೆ 13,000 ಟನ್ಗಳನ್ನು ಮೈಸೂರಿಗೆ ಕೊಡುವುದಾಗಿಯೂ, ಡಿಸೆಂಬರ್ನಲ್ಲೂ ಕೇಂದ್ರ ಆಹಾರ ಒದಗಿಸುವ ನಿರೀಕ್ಷೆ ಇದೆ ಎಂದು ಕೆ.ಸಿ. ರೆಡ್ಡಿ ನುಡಿದರು.</p>.<p><strong>ಟಿಬೆಟ್ ಸರ್ಕಾರಕ್ಕೆ ಇನ್ನೂ ಸುದ್ದಿ ದೊರೆತಿಲ್ಲ</strong></p><p><strong>ಕಾಲಿಂಪೊಂಗ್, ಅ. 26–</strong> ಚೀಣೀ ಪಡೆಗಳು ಟಿಬೆಟ್ ಗಡಿ ಪ್ರವೇಶಿಸಿರುವ ಬಗ್ಗೆ ಪೂರ್ವ ಗಡಿಯಿಂದ ತಮಗೆ ಯಾವ ಸುದ್ದಿಯೂ ಬಂದಿಲ್ಲವೆಂದು ಟಿಬೆಟ್ ಸರ್ಕಾರಿ ವೃತ್ತಗಳವರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೂಪನ್ಹೇಗನ್, ಅ. 26–</strong> ಡೆನ್ಮಾರ್ಕ್ನ ಸೋಷಿಯಲಿಸ್ಟ್ ಪ್ರಧಾನಿ ಹಾನ್ಸ್ ಹೆಡ್ ಟಾಫ್ಟ್ ಇಂದು ತಮ್ಮ ಸರ್ಕಾರದ ರಾಜೀನಾಮೆಯನ್ನು ದೊರೆಗಳಿಗೆ ಸಲ್ಲಿಸಿದರು.</p><p>ಬೆಣ್ಣೆ ನಿಯಂತ್ರಣದ ಬಗ್ಗೆ ಸರ್ಕಾರಿ ಯೋಜನೆ ಪಾರ್ಲಿಮೆಂಟ್ ನಲ್ಲಿ ಪರಾಜಿತವಾದುದೇ ಈ ರಾಜೀನಾಮೆಗೆ ಕಾರಣ.</p>.<p><strong>‘ಕೇಂದ್ರದಿಂದ ಸಕಾಲದಲ್ಲಿ ಆಹಾರ ಸರಬರಾಜಾಗಲಿ’</strong></p><p><strong>ಬೆಂಗಳೂರು, ಅ. 26–</strong> ಕೇಂದ್ರ ದಿಂದ ಬರಬೇಕಾದ ಆಹಾರ ಸಹಾಯ ಸಕಾಲಕ್ಕೆ ಒದಗಿದಲ್ಲಿ ಮೈಸೂರಿನ ಆಹಾರ ಪರಿಸ್ಥಿತಿ ಹತೋಟಿಯಲ್ಲಿ ಇರಲಿದೆ ಎಂದು ಮೈಸೂರಿನ ಮುಖ್ಯಮಂತ್ರಿ ಕೆ.ಸಿ. ರೆಡ್ಡಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ನುಡಿದರು.</p><p>ಮುಂದುವರಿದು, ಈ ಸಾಲಿನ ಆಹಾರ ಸಂಗ್ರಹಣೆ ಕಾರ್ಯ ಈಗಾಗಲೇ ಮುಗಿದಿರುವುದರಿಂದ<br>ಮುಂದಿನ ಕಟಾವಿನವರೆಗೆ ಅಂದಾಜುಗಳ ರೀತ್ಯಾ 29,000 ಟನ್ ಆಹಾರ ಕೊರತೆ ಎದುರಾಗಿದೆ ಎಂದು ತಿಳಿಸಿದರು.</p><p>ಭಾರತ ಸರ್ಕಾರ ನವೆಂಬರ್ ಮಾಹೆಗೆ 13,000 ಟನ್ಗಳನ್ನು ಮೈಸೂರಿಗೆ ಕೊಡುವುದಾಗಿಯೂ, ಡಿಸೆಂಬರ್ನಲ್ಲೂ ಕೇಂದ್ರ ಆಹಾರ ಒದಗಿಸುವ ನಿರೀಕ್ಷೆ ಇದೆ ಎಂದು ಕೆ.ಸಿ. ರೆಡ್ಡಿ ನುಡಿದರು.</p>.<p><strong>ಟಿಬೆಟ್ ಸರ್ಕಾರಕ್ಕೆ ಇನ್ನೂ ಸುದ್ದಿ ದೊರೆತಿಲ್ಲ</strong></p><p><strong>ಕಾಲಿಂಪೊಂಗ್, ಅ. 26–</strong> ಚೀಣೀ ಪಡೆಗಳು ಟಿಬೆಟ್ ಗಡಿ ಪ್ರವೇಶಿಸಿರುವ ಬಗ್ಗೆ ಪೂರ್ವ ಗಡಿಯಿಂದ ತಮಗೆ ಯಾವ ಸುದ್ದಿಯೂ ಬಂದಿಲ್ಲವೆಂದು ಟಿಬೆಟ್ ಸರ್ಕಾರಿ ವೃತ್ತಗಳವರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>