<h2>25 ವರ್ಷಗಳ ಹಿಂದೆ, ಶುಕ್ರವಾರ, 11–8–2000</h2>.<p><strong>ದುಷ್ಕರ್ಮಿಯ ಗುಂಡೇಟಿನಿಂದ ಬೇತಮಂಗಲ ಶಾಸಕರಿಗೆ ಗಾಯ</strong></p><p>ಭುವನಹಳ್ಳಿ (ಬಂಗಾರಪೇಟೆ ತಾಲ್ಲೂಕು), ಆಗಸ್ಟ್ 10– ಬೇತಮಂಗಲ ಕ್ಷೇತ್ರದ ಕಾಂಗ್ರೆಸ್ ಶಾಸಕ ಸಿ. ವೆಂಕಟೇಶಪ್ಪ ಅವರ ಮೇಲೆ ಅವರ ತೋಟದಲ್ಲೇ ಅಪರಿಚಿತ ದುಷ್ಕರ್ಮಿಯೊಬ್ಬ ಗುಂಡು ಹಾರಿಸಿ ತೀವ್ರವಾಗಿ ಗಾಯಗೊಳಿಸಿದ್ದಾನೆ.</p><p>ಇಂದು ಬೆಳಿಗ್ಗೆ 6 ಗಂಟೆ ಸಮಯದಲ್ಲಿ ಭುವನಹಳ್ಳಿಯ ತಮ್ಮ ತೋಟದಲ್ಲಿ ವಾಯುವಿಹಾರಕ್ಕೆ ಹೋಗಿದ್ದ ವೆಂಕಟೇಶಪ್ಪ ಅವರ ಮೇಲೆ ಅಪರಿಚಿತ ವ್ಯಕ್ತಿಯೊಬ್ಬ, ಮಜ್ಹಲ್ ಲೋಡ್ ಬಂದೂಕಿನಿಂದ ಬೇಲಿಯ ಮರೆಯಿಂದ ಗುಂಡು ಹಾರಿಸಿದ್ದರಿಂದ ಗುಂಡು ಎಡತೊಡೆಗೆ ಬಿದ್ದು ತೂರಿ ಬಲ ತೊಡೆಯನ್ನು ಹೊಕ್ಕಿದೆ.</p>. <h2>ಕಾಶ್ಮೀರ: ಉಗ್ರಗಾಮಿಗಳ ಬಾಂಬ್ ಸ್ಫೋಟಕ್ಕೆ 12 ಬಲಿ</h2>. <p>ಶ್ರೀನಗರ, ಆಗಸ್ಟ್ 10 (ಪಿಟಿಐ)– ಕಾಶ್ಮೀರದಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಕದನ ವಿರಾಮ ವಾಪಸು ಪಡೆದ 48 ಗಂಟೆಯಲ್ಲೇ ಕೊಠಿಬಾಗ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದ ಕಾರ್ ಬಾಂಬ್ ಸ್ಫೋಟದಲ್ಲಿ 12 ಮಂದಿ ಸತ್ತಿದ್ದು, 40 ಮಂದಿ ಗಾಯಗೊಂಡಿದ್ದಾರೆ.</p> <p>ಸತ್ತವರಲ್ಲಿ 10 ಮಂದಿ ಭದ್ರತಾ ಪಡೆ ಸಿಬ್ಬಂದಿ ಹಾಗೂ ಹಿಂದುಸ್ತಾನ್ ಟೈಮ್ಸ್ ಛಾಯಾಗ್ರಾಹಕ ಪ್ರದೀಪ್ ಕುಮಾರ್ ಭಾಟಿಯಾ ಸೇರಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<h2>25 ವರ್ಷಗಳ ಹಿಂದೆ, ಶುಕ್ರವಾರ, 11–8–2000</h2>.<p><strong>ದುಷ್ಕರ್ಮಿಯ ಗುಂಡೇಟಿನಿಂದ ಬೇತಮಂಗಲ ಶಾಸಕರಿಗೆ ಗಾಯ</strong></p><p>ಭುವನಹಳ್ಳಿ (ಬಂಗಾರಪೇಟೆ ತಾಲ್ಲೂಕು), ಆಗಸ್ಟ್ 10– ಬೇತಮಂಗಲ ಕ್ಷೇತ್ರದ ಕಾಂಗ್ರೆಸ್ ಶಾಸಕ ಸಿ. ವೆಂಕಟೇಶಪ್ಪ ಅವರ ಮೇಲೆ ಅವರ ತೋಟದಲ್ಲೇ ಅಪರಿಚಿತ ದುಷ್ಕರ್ಮಿಯೊಬ್ಬ ಗುಂಡು ಹಾರಿಸಿ ತೀವ್ರವಾಗಿ ಗಾಯಗೊಳಿಸಿದ್ದಾನೆ.</p><p>ಇಂದು ಬೆಳಿಗ್ಗೆ 6 ಗಂಟೆ ಸಮಯದಲ್ಲಿ ಭುವನಹಳ್ಳಿಯ ತಮ್ಮ ತೋಟದಲ್ಲಿ ವಾಯುವಿಹಾರಕ್ಕೆ ಹೋಗಿದ್ದ ವೆಂಕಟೇಶಪ್ಪ ಅವರ ಮೇಲೆ ಅಪರಿಚಿತ ವ್ಯಕ್ತಿಯೊಬ್ಬ, ಮಜ್ಹಲ್ ಲೋಡ್ ಬಂದೂಕಿನಿಂದ ಬೇಲಿಯ ಮರೆಯಿಂದ ಗುಂಡು ಹಾರಿಸಿದ್ದರಿಂದ ಗುಂಡು ಎಡತೊಡೆಗೆ ಬಿದ್ದು ತೂರಿ ಬಲ ತೊಡೆಯನ್ನು ಹೊಕ್ಕಿದೆ.</p>. <h2>ಕಾಶ್ಮೀರ: ಉಗ್ರಗಾಮಿಗಳ ಬಾಂಬ್ ಸ್ಫೋಟಕ್ಕೆ 12 ಬಲಿ</h2>. <p>ಶ್ರೀನಗರ, ಆಗಸ್ಟ್ 10 (ಪಿಟಿಐ)– ಕಾಶ್ಮೀರದಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಕದನ ವಿರಾಮ ವಾಪಸು ಪಡೆದ 48 ಗಂಟೆಯಲ್ಲೇ ಕೊಠಿಬಾಗ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದ ಕಾರ್ ಬಾಂಬ್ ಸ್ಫೋಟದಲ್ಲಿ 12 ಮಂದಿ ಸತ್ತಿದ್ದು, 40 ಮಂದಿ ಗಾಯಗೊಂಡಿದ್ದಾರೆ.</p> <p>ಸತ್ತವರಲ್ಲಿ 10 ಮಂದಿ ಭದ್ರತಾ ಪಡೆ ಸಿಬ್ಬಂದಿ ಹಾಗೂ ಹಿಂದುಸ್ತಾನ್ ಟೈಮ್ಸ್ ಛಾಯಾಗ್ರಾಹಕ ಪ್ರದೀಪ್ ಕುಮಾರ್ ಭಾಟಿಯಾ ಸೇರಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>