<h2>ಸುಸ್ಥಿರ ಆಮದು ನೀತಿ ಶೀಘ್ರ ಅನ್ವಯ ಅಗತ್ಯ</h2>.<p><strong>ನವದೆಹಲಿ, ಅ.23–</strong> ಸುಸ್ಥಾಯಿಯಾದ ಆಮದು ನೀತಿ ಅಂಗೀಕರಿಸಬೇಕಲ್ಲದೆ ಅದನ್ನು ಶೀಘ್ರವಾಗಿ, ದಕ್ಷತೆಯಿಂದ ಜಾರಿಗೆ ತರಬೇಕು ಎಂಬುದಾಗಿ ಆಮದು ಹತೋಟಿ ಪರಿಶೀಲನಾ ಸಮಿತಿ, ಭಾರತದ ಆಮದು ಹತೋಟಿಯನ್ನು ಕುರಿತು ಇದೇ ತಾನೆ ಭಾರತ ಸರ್ಕಾರಕ್ಕೆ ಒಪ್ಪಿಸಿರುವ ತನ್ನ ವರದಿಯಲ್ಲಿ ಶಿಫಾರಸು ಮಾಡಿದೆ.</p>.<p>ಆಮದು ಹತೋಟಿ ವ್ಯವಸ್ಥೆಯ ದಕ್ಷತೆಯನ್ನು ಹೆಚ್ಚಿಸುವ ಮಾರ್ಗಗಳನ್ನು ಶೋಧಿಸಿ ವರದಿ ಮಾಡುವ ಸಲುವಾಗಿ ಈ ಸಮಿತಿಯನ್ನು ಕಳೆದ ಜುಲೈ ತಿಂಗಳಲ್ಲಿ ನೇಮಿಸಿತ್ತು.</p>.<h2>ವಿಶ್ವಸಂಸ್ಥೆಗೆ ಪಕ್ಷಪಾತ ನೀತಿ ಸರ್ವಥಾ ಸಲ್ಲದು</h2>.<p>ನವದೆಹಲಿ, ಅ.23– ‘ವಿಶ್ವಸಂಸ್ಥೆಯ ಭವಿಷ್ಯದ ಸ್ಥಾನಮಾನಗಳು ಯುದ್ಧ ಅಥವಾ ಶಾಂತಿ ಮತ್ತು ವಿಶ್ವದ ಭವಿಷ್ಯದ ಸಮಸ್ಯೆಗಳನ್ನು ಅವಲಂಬಿಸಿದೆ’ ಎಂದು ಭಾರತದ ಪ್ರಧಾನಿ ಪಂಡಿತ ನೆಹರೂ, ಇಂದು ವಿಶ್ವಸಂಸ್ಥೆ ದಿನಾಚರಣೆ ಸಂದರ್ಭದಲ್ಲಿ ಕೊಟ್ಟ ಸಂದೇಶದಲ್ಲಿ ಘೋಷಿಸಿದರು.</p>.<p>‘ವಿಶ್ವವು ಯುದ್ಧದತ್ತ ಸಾಗದಂತೆ ನಾವು ಶಕ್ತಿಮೀರಿ ಶ್ರಮಿಸಬೇಕಾದ ಅಗತ್ಯ ಹೆಚ್ಚಾಗಿದೆ’ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<h2>ಸುಸ್ಥಿರ ಆಮದು ನೀತಿ ಶೀಘ್ರ ಅನ್ವಯ ಅಗತ್ಯ</h2>.<p><strong>ನವದೆಹಲಿ, ಅ.23–</strong> ಸುಸ್ಥಾಯಿಯಾದ ಆಮದು ನೀತಿ ಅಂಗೀಕರಿಸಬೇಕಲ್ಲದೆ ಅದನ್ನು ಶೀಘ್ರವಾಗಿ, ದಕ್ಷತೆಯಿಂದ ಜಾರಿಗೆ ತರಬೇಕು ಎಂಬುದಾಗಿ ಆಮದು ಹತೋಟಿ ಪರಿಶೀಲನಾ ಸಮಿತಿ, ಭಾರತದ ಆಮದು ಹತೋಟಿಯನ್ನು ಕುರಿತು ಇದೇ ತಾನೆ ಭಾರತ ಸರ್ಕಾರಕ್ಕೆ ಒಪ್ಪಿಸಿರುವ ತನ್ನ ವರದಿಯಲ್ಲಿ ಶಿಫಾರಸು ಮಾಡಿದೆ.</p>.<p>ಆಮದು ಹತೋಟಿ ವ್ಯವಸ್ಥೆಯ ದಕ್ಷತೆಯನ್ನು ಹೆಚ್ಚಿಸುವ ಮಾರ್ಗಗಳನ್ನು ಶೋಧಿಸಿ ವರದಿ ಮಾಡುವ ಸಲುವಾಗಿ ಈ ಸಮಿತಿಯನ್ನು ಕಳೆದ ಜುಲೈ ತಿಂಗಳಲ್ಲಿ ನೇಮಿಸಿತ್ತು.</p>.<h2>ವಿಶ್ವಸಂಸ್ಥೆಗೆ ಪಕ್ಷಪಾತ ನೀತಿ ಸರ್ವಥಾ ಸಲ್ಲದು</h2>.<p>ನವದೆಹಲಿ, ಅ.23– ‘ವಿಶ್ವಸಂಸ್ಥೆಯ ಭವಿಷ್ಯದ ಸ್ಥಾನಮಾನಗಳು ಯುದ್ಧ ಅಥವಾ ಶಾಂತಿ ಮತ್ತು ವಿಶ್ವದ ಭವಿಷ್ಯದ ಸಮಸ್ಯೆಗಳನ್ನು ಅವಲಂಬಿಸಿದೆ’ ಎಂದು ಭಾರತದ ಪ್ರಧಾನಿ ಪಂಡಿತ ನೆಹರೂ, ಇಂದು ವಿಶ್ವಸಂಸ್ಥೆ ದಿನಾಚರಣೆ ಸಂದರ್ಭದಲ್ಲಿ ಕೊಟ್ಟ ಸಂದೇಶದಲ್ಲಿ ಘೋಷಿಸಿದರು.</p>.<p>‘ವಿಶ್ವವು ಯುದ್ಧದತ್ತ ಸಾಗದಂತೆ ನಾವು ಶಕ್ತಿಮೀರಿ ಶ್ರಮಿಸಬೇಕಾದ ಅಗತ್ಯ ಹೆಚ್ಚಾಗಿದೆ’ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>